ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಕೈಬಿಟ್ಟ ಗಂಡ; ತುಂಬಾ ವರ್ಷಗಳಿಂದ ಒಂಟಿ ಜೀವನ

 

ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ಯಾರಿಗೆ ಗೊತ್ತಿಲ್ಲ. ಮುದ್ದು ಮುಖದ ಚಲುವೆ ಸುಷ್ಮಾ ಈಗ ನಮ್ಮಮ್ಮ ಸೂಪರ್ ಸ್ಟಾರ್ ಅಲ್ಲಿ ಕೂಡ ಆಂಕರ್ ಕನ್ನಡದ ಜನಪ್ರಿಯ ನಟಿಯರಲ್ಲಿ ಮತ್ತು ನಿರೂಪಕಿಯರಲ್ಲಿ ನಟಿ ಸುಷ್ಮಾ ಅವರು ಕೂಡ ಒಬ್ಬರು ಹೌದು ಸುಷ್ಮಾ ಅವರನ್ನು ಈಗಾಗಲೇ ನೀವು ಹೆಚ್ಚು ಈ ಕಿರುತೆರೆಯಲ್ಲಿ ನೋಡಿರುತ್ತೀರಿ. ಈ ಬಣ್ಣದ ಲೋಕಕ್ಕೆ ಬರುವುದು ಸುಷ್ಮಾ ಅವರ ಮನೆಯಲ್ಲಿ ಇಷ್ಟ ಇರಲಿಲ್ಲ. ಇವರ ಮೂಲ ಹೆಸರು ಸುಷ್ಮಾ ಕೆ ರಾವ್ ಮೂಲತಃ ಚಿಕ್ಕಮಂಗಳೂರಿನ ಮಲೆನಾಡ ಸೀಮೆಯವರು.

 ಕೊಪ್ಪ ಎನ್ನುವ ಗ್ರಾಮದ ಸುಷ್ಮಾ ರಾವ್ ಬಣ್ಣದ ಲೋಕದಲ್ಲಿ ಸಾಕಷ್ಟು ಮಿಂಚಿದ್ದಾರೆ. ಹೌದು ಒಂದು ಕಾಲದಲ್ಲಿ ಗುಪ್ತ ಗಾ ಮನಿ ಎನ್ನುವ ಸೀರಿಯಲ್ ಮೂಲಕ ಸಾಕಷ್ಟು ಹೆಸರು ಮಾಡಿದಂತಹ ನಟಿ.ಗುಪ್ತಗಾಮಿನಿ ಸೀರಿಯಲ್ ನಲ್ಲಿ ಭಾವನ ಎನ್ನುವ ಪಾತ್ರದ ಮೂಲಕ ಹೆಚ್ಚು ಹೆಸರು ಮಾಡಿದಂತಹ ಸುಷ್ಮಾ ಅವರು ಹೆಚ್ಚು ನೋವುಗಳ ಅನುಭವಿಸಿದ್ದಾರೆ. ಇದೀಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಕೇಳಿ ಬಂದಿದೆ.  <a href=https://youtube.com/embed/m_S504_in5Q?autoplay=1&mute=1><img src=https://img.youtube.com/vi/m_S504_in5Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಟಿ ಸುಷ್ಮಾ ಅವರು ಹತ್ತು ವರ್ಷಗಳ ಬಳಿಕ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದು ಭಾಗ್ಯಲಕ್ಷ್ಮಿ ಎಂಬ ಸೀರಿಯಲ್ ಮೂಲಕ ಭಾಗ್ಯ ಎಂಬ ಪಾತ್ರದಲ್ಲಿ. ಕಿರುತೆರೆಯಲ್ಲಿ ಹೆಚ್ಚು ನೋವಿನ ಪಾತ್ರದ ಮೂಲಕವೇ ಹೆಸರು ಮಾಡಿರುವ ಸುಷ್ಮಾ ಕೆ ರಾವ್ ಅವರು ಈ ನಿಜ ಜೀವನದಲ್ಲೂ ಸಹ ತುಂಬಾ ನೋವಿಗೆ ಒಳಗಾಗಿದ್ದಾರೆ ಎಂದು ಹೇಳಬುದಾಗಿದೆ. ಇವರು 10 ವರ್ಷ ಪ್ರೀತಿ ಮಾಡಿ ಮನೆಯವರ ವಿರೋಧದ ನಡುವೆ ಮದುವೆ ಮಾಡಿಕೊಂಡರಂತೆ. ನಂತರ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇದೀಗ ನಟಿ ಸುಷ್ಮಾ ಅವರು ಅವರ ಪತಿಯ ಜೊತೆ ಇಲ್ಲ ಎಂದು ತಿಳಿದುಬಂದಿದೆ.

ಮದುವೆಯಾದ ಕೆಲ ವರ್ಷಗಳಲ್ಲಿಯೇ ನಟಿ ಸುಷ್ಮಾ ಅವರಿಗೆ ಅವರ ಪತಿ ಕೈ ಕೊಟ್ಟು ಹೋಗಿದ್ದಾರೆ, ಅಸಲಿಗೆ ಸುಷ್ಮಾ ಅವರ ಗಂಡ ಯಾರು ಗೊತ್ತಾದ್ರೆ  ಶಾಕ್ ಆಗ್ತೀರಿ.ಹೌದು ಕನ್ನಡದ ಖ್ಯಾತ ನಿರ್ದೇಶಕ ಪ್ರೀತಂ ಗುಬ್ಬಿ. ಮುಂಗಾರು ಮಳೆ ಚಿತ್ರಕ್ಕೆ ಇದೆ ಪ್ರೀತಮ್ ಗುಬ್ಬಿ ಕಥೆಯನ್ನು ಬರೆದಿರುವುದು. ಹೌದು ನಿರ್ದೇಶಕ ಪ್ರೀತಮ್ ಗುಬ್ಬಿ ಅವರು ಎಲ್ಲರಿಗೂ ಈಗ ಚಿರಪಚಿತರು. ಇವರಿಬ್ಬರು ಒಬ್ಬರೊಬ್ಬರು ಇಷ್ಟಪಟ್ಟು ಮದುವೆಯಾದವರು. ಆದರೂ ಕೂಡ ಇದೀಗ ಜೊತೆಗಿಲ್ಲ. ಕಾರಣ ಹುಡುಕಿ ನೋಡಿದಾಗ ತುಂಬಾನೇ ಕಾರಣಗಳು ಬಂದವು. ಬಣ್ಣದ ಲೋಕದಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದೆ, ಸಮಯದ ಅಭಾವದಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದವು ಎನ್ನುವ ಮಾತುಗಳು ಕೇಳಿಬಂದಿವೆ.