ಕನ್ನಡಿಗರಿಗೆ ಬಹು ವರ್ಷಗಳ ಬಳಿಕ ಸಿಹಿಸುದ್ದಿ ಕೊಟ್ಟ ಧನ್ವೀರ್, ಇದೇ ವರ್ಷ ಕಂಕಣ ಭಾಗ್ಯ
Jul 19, 2025, 21:58 IST
ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಬಗ್ಗೆ ಹಲವು ಗಾಸಿಪ್ಗಳಿವೆ. ಇದರಲ್ಲಿ ನಟ ಧನ್ವೀರ್ ಗೌಡ ಅವರ ವಿಚಾರವೂ ಒಂದು. ಹೌದು ಬಜಾರ್ ನಟ ಧನ್ವೀರ್ ಗೌಡ ಹಾಗು ರೇಷ್ಮಾ ನಾಣಪ್ಪ ಅವರ ನಡುವೆ ಪ್ರೇಮ್ ಕಹಾನಿ ಇದೆ ಅನ್ನೋ ಮಾತಿದೆ. ಇಬ್ಬರೂ ಮದುವೆ ಕೂಡ ಆಗ್ತಾರೆ ಅನ್ನೋ ವದಂತಿ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಆದರೆ, ಇದಕ್ಕೆ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ. ರೇಷ್ಮಾ ಕೂಡ ಇದಕ್ಕೆಲ್ಲ ತಲೆಕೆಡಿಸಿಕೊಂಡವರೂ ಅಲ್ಲ. ಇನ್ನು ಧನ್ವೀರ್ ಗೌಡ ಅವರು ಕೂಡ ಈ ಹಿಂದೆ ಒಮ್ಮೆ ಈ ಗಾಸಿಪ್ಗೆ ತೆರೆ ಎಳೆದರೂ, ಜನ ಬಾಯಿ ಮುಚ್ಚಿಸಲು ಆಗಲೇ ಇಲ್ಲ. ಈಗ ಕೊನೆಗೂ ಈ ವಿಚಾರದ ಬಗ್ಗೆ ಧನ್ವೀರ್ ಒಂದು ಕ್ಲಾರಿಟಿ ಕೊಟ್ಟೇಬಿಟ್ಟಿದ್ದಾರೆ.
ರೇಷ್ಮಾ ಹಾಗೂ ಧನ್ವೀರ್ ಇಬ್ಬರೂ ನಟ ದರ್ಶನ್ ಅವರ ಗರಡಿಯಲ್ಲೇ ಪಳಗಿರುವ ಸೆಲೆಬ್ರಿಟಿಗಳು. ಇಬ್ಬರಿಗೂ ದರ್ಶನ್ ಅವರೇ ಅಚ್ಚುಮೆಚ್ಚು. ಈ ಹಿಂದೆ ರೇಷ್ಮಾ ಅವರು ಮದುವೆ ವಿಚಾರ ಪ್ರಸ್ತಾಪಿಸಿದಾಗ ನಾನು ಗೌಡ್ರು ಹುಡುಗನನ್ನೇ ಮದುವೆ ಆಗ್ತೀನಿ ಅನ್ನೋ ಮೂಲಕ ಕುತೂಹಲ ಮೂಡಿಸಿದ್ರು. ಇಷ್ಟಾಗಿದ್ದೇ ತಡ ಧನ್ವೀರ್ ಗೌಡ ಹಾಗೂ ರೇಷ್ಮಾ ಅವರ ಬಗ್ಗೆ ಲವ್ಸ್ಟೋರಿಗೆ ಹಲವರು ನಿರ್ದೇಶಕರಾಗಿಬಿಟ್ರು.
<a href=https://youtube.com/embed/Kxpuxevsq0U?autoplay=1&mute=1><img src=https://img.youtube.com/vi/Kxpuxevsq0U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರೇಷ್ಮಾ ಅವರು ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದವರು.ಈ ಸಮಯದಲ್ಲೇ ಧನ್ವೀರ್ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದರು. ರೇಷ್ಮಾ ಅವರು ತಾವು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದ ಸಮಯದಲ್ಲೇ ಧನ್ವೀರ್ ಹಾಗೂ ರೇಷ್ಮಾ ಅವರ ಸೆಲ್ಫೀ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗ ರೇಷ್ಮಾ ಹೇಳಿದ್ದ ಗೌಡರ ಹುಡುಗ ಧನ್ವೀರ್ ಅವರೆ ಎಂದು ಹಲವು ಭಾವಿಸಿದ್ದರು. ಅಂದಿನಿಂದಲೂ ಇವರ ಲವ್ಸ್ಟೋರಿ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇವರಿಬ್ಬರೂ ವಾಮನ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನೂ ಹಲವರ ಜೊತೆ ಸಂಬಂಧ ಕಟ್ಟಿ ಚೌಟ್ರಿ ಕೂಡ ಬುಕ್ ಮಾಡಿದ್ದರು. ಇನ್ನು ನಮ್ಮಿಬ್ಬರಿಗೆ ತಾಂಬೂಲ ಒಂದು ಎಕ್ಸ್ಚೇಂಜ್ ಮಾಡಿಲ್ಲ ಅಷ್ಟೇ, ಬಾಕಿ ಇನ್ನೆಲ್ಲವನ್ನೂ ಆಗಲೇ ಮಾಡಿದ್ದರು ಎಂದು ಧನ್ವೀರ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಜನ ಹೇಗೆ ಅಂದ್ರೆ ಈಗ ಯಾವ ನಟಿ ಜೊತೆ ಸುಮ್ಮನೆ ಕಾಣಿಸಿಕೊಂಡ್ರೂ ಒಂದು ಫೋಟೋ ತಗೋತಾರೆ, ಆ ಮೇಲೆ ಇವರಿಬ್ಬರ ಮಧ್ಯೇ ಏನೋ ಇದೆ ಅಂತ ಕಥೆ ಹೇಳ್ತಾರೆ. ಆದರೆ ನಾವೇನೂ ಅನ್ನೋದು ನಮಗೆ ಮಾತ್ರ ಗೊತ್ತು. ಈಗ ನಾನು ಹಾಗೂ ರೇಷ್ಮಾ ಅವರೊಂದಿಗೆ ಶೇರ್ ಮಾಡುವ ಬಾಂಡಿಂಗ್ ಕೂಡ ಬೇರೆ. ನಾವಿಬ್ಬರೂ ಕಷ್ಟ ಸುಖವನ್ನು ಬೇರೆ ರೀತಿ ಶೇರ್ ಮಾಡ್ಕೋತೀವಿ. ಅಷ್ಟಕ್ಕೇ ಏನೇನೋ ಸುದ್ದಿ ಹಬ್ಬಿಸ್ತಾರೆ ಎನ್ನುವ ಮೂಲಕ ಧನ್ವೀರ್ ಎಲ್ಲ ವದಂತಿಗೆ ಬ್ರೇಕ್ ಹಾಕಿದ್ದಾರೆ.