ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ, ರೇಣುಕಾಸ್ವಾಮಿ ಮಗುವಿನ ಹೇಸರು ಕೇಳಿ ಫಿದಾ ಆದ ದಾಸನ ಪತ್ನಿ

 
Jd
ನಟ ದರ್ಶನ್‌ ಅವರನ್ನು ಜೈಲಿಗೆ ಕಳಿಸಲು ಕಾರಣವಾಗಿದ್ದ ಕೊಲೆ ಪ್ರಕರಣದ ಮೃತ ರೇಣುಕಾ ಸ್ವಾಮಿ ಮಗನಿಗೆ ಇಂದು ನಾಮಕರಣ ಮಾಡಲಾಗಿದೆ. ಜಂಗಮ ಸಂಪ್ರದಾಯದಂತೆ ರೇಣುಕಾಸ್ವಾಮಿ ಮಗನಿಗೆ ನಾಮಕರಣ ಶಾಸ್ತ್ರ ಮಾಡಲಾಗಿದೆ. ಕುಟುಂಬ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮಗುವಿಗೆ ಶಶಿಧರ ಎಂದು ಹೆಸರಿಡಲಾಗಿದೆ.
ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆಯಾದಾಗ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ನಂತರ ಈ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅರೆಸ್ಟ್ ಆಗಿದ್ದರು. ಆನಂತರ ಗಂಡು ಮಗುವಿಗೆ ರೇಣುಕಾಸ್ವಾಮಿ ಪತ್ನಿ ಜನ್ಮ ನೀಡಿದ್ದರು. ಇದೀಗ ಮೃತ ರೇಣುಕಾಸ್ವಾಮಿ ಅವರ ಪುತ್ರನ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ನಡೆದಿದೆ.  <a href=https://youtube.com/embed/Umgi9mvVOQ8?autoplay=1&mute=1><img src=https://img.youtube.com/vi/Umgi9mvVOQ8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇಂದು ಚಿತ್ರದುರ್ಗದಲ್ಲಿರುವ ಅವರ ಮನೆಯಲ್ಲಿಯೇ ಸರಳವಾಗಿ ಕುಟುಂಬಸ್ಥರ ಮಧ್ಯೆ ನಾಮಕರಣ ಶಾಸ್ತ್ರ ಮತ್ತು ತೊಟ್ಟಿಲು ಶಾಸ್ತ್ರ ನೆರವೇರಿದೆ. ಒಂದು ಕಡೆ ಮೊಮ್ಮಗನನ್ನು ನೋಡಿದ ಖುಷಿ, ಇನ್ನೊಂದು ಕಡೆ ಈ ಸಂತೋಷವನ್ನು ಕಣ್ತುಂಬಿಕೊಳ್ಳಲು ಮಗ ಇಲ್ಲ ಎನ್ನುವ ಕೊರಗು ರೇಣುಕಾಸ್ವಾಮಿ ತಂದೆಗೆ ಕಾಡುತ್ತಿದೆ.ಮೊಮ್ಮಗನ‌ ನಾಮಕರಣದ ಶಾಸ್ತ್ರದ ನಂತರ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್‌ ಮಾತನಾಡಿದ್ದು, ಹರಿಹರದಿಂದ ನನ್ನ ಸೊಸೆ ಮತ್ತು ಮಗ ಮನೆಗೆ ಬಂದಿದ್ದಾರೆ. ನಮ್ಮ ಸಂಪ್ರದಾಯದಂತೆ ಮಗುವಿಗೆ ನಾಮಕರಣ ಮಾಡಿದ್ದೇವೆ.
 ಗುರುಗಳ ಆಶೀರ್ವಾದದಿಂದ ಮೊಮ್ಮಗನಿಗೆ ಶಶಿಧರ ಎಂದು ಹೆಸರಿಟ್ಟಿದ್ದೇವೆ. ಮೊಮ್ಮಗನನ್ನು ನೋಡಿ ಮಗನೇ ಮನೆಗೆ ಬಂದಂತಿದಯದನ್ನು ಮರೆಯೋದಕ್ಕೆ ಆಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.ಅವನ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಸರ್ಕಾರಕ್ಕೆ‌ ಮನವಿ ಮಾಡಿ ನನ್ನ ಸೊಸೆಗೆ ಸರ್ಕಾರಿ ಕೆಲಸ ಕೊಡಲಿ ಎಂದು ವಿನಂತಿ ಮಾಡಿದ್ದೇವೆ. 
ಸರ್ಕಾರ ದಯಮಾಡಿ ಅದನ್ನು ಪುರಸ್ಕರಿಸಬೇಕು ಎಂದು ನಾವು ಕೇಳಿಕೊಂಡಿದ್ದೀವಿ. ಮೊಮ್ಮಗನನ್ನು ನೋಡಿ ತುಂಬಾ ಸಂತೋಷವಾಯಿತು ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡರ ಹೇಳಿದ್ದಾರೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.