ದರ್ಶನ್ ಈರೀತಿ ಮಾಡುತ್ತಾರೆ‌ ಅಂತ ಅಂದುಕೊಂಡಿರಲಿಲ್ಲ; ನ ಟಿ ಅಮೂಲ್ಯ

 

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಯಾಗಿದ್ದಾರೆ. ಕೇಸ್ ವಿಚಾರಣೆ ಮುಗಿದು ಯಾರು ಅಪರಾಧಿ- ಯಾರು ನಿರಪರಾಧಿ ಎಂಬುದು ಘೋಷಣೆ ಆಗುವವರೆಗೂ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಗುವುದು ಕಷ್ಟ ಎನ್ನಲಾಗುತ್ತಿದೆ. 

ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ಹಾಗೂ ನಟಿ ಅಮೂಲ್ಯ ಅವರಿಬ್ಬರ ಜೋಡಿಯ ಸಿನಿಮಾವೊಂದು ತೆರೆಗೆ ಬರಬೇಕಿತ್ತು, ಆದರೆ ಯಾಕೆ ಬರಲಿಲ್ಲ ಎಂಬ ರಹಸ್ಯವನ್ನು ಅನಾವರಣ ಮಾಡಿದ್ದಾರೆ. ಅಗ್ನಿ ಶ್ರೀಧರ್ ನನ್ನ ಸಿನಿಮಾವೊಂದಕ್ಕೆ ದರ್ಶನ್ ಕಾಲ್‌ಶೀಟ್ ಪಡೆದುಕೊಂಡಿದ್ದೆ.

ಆಗ ನಾಯಕಿಯಾಗಿ ನಟಿ ಅಮೂಲ್ಯ ಅವರನ್ನು ದರ್ಶನ್‌ಗೆ ಜೋಡಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದೆ. ಅದನ್ನು ನಟ ದರ್ಶನ್ ಅವರಿಗೆ ಹೇಳಿದೆ. ನನ್ನ ಮಾತನ್ನು ಕೇಳಿ ನಟ ದರ್ಶನ್ ಅತ್ಯಂತ ವಿನಯದಿಂದ ಗುರುಗಳೇ ಅಮೂಲ್ಯ ಬೇಡ. ನಾನು ಅವಳನ್ನು ಚಿಕ್ಕ ಮುಗುವಿನಿಂದಲೂ ನೋಡಿದ್ದೇನೆ. ನನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎತ್ತಿ ಆಡಿಸಿದ್ದೇನೆ. ಅಂಥ ಮಗುವನ್ನು ನನ್ನ ಸಿನಿಮಾಗೆ ನಾಯಕಿಯಾಗಿ ನೋಡಲು ನನ್ನಿಂದ ಆಗದು. 

ಆಕೆಯನ್ನು ನಾಯಕಿ ಜಾಗದಲ್ಲಿ ನೋಡುವುದರು ಹಾಗಿರಲಿ, ರೊಮ್ಯಾಂಟಿಕ್ ಸೀನ್ ಇದ್ದಾಗ ಆಕೆಯ ಕೈಯನ್ನು ಆ ಮೂಡ್‌ನಲ್ಲಿ ಟಚ್ ಮಾಡಲು ಕೂಡ ನಾನು ಬಯಸುವುದಿಲ್ಲ. ದಯವಿಟ್ಟು ನನ್ನ ಎದುರು ಅಮೂಲ್ಯ ಹೀರೋಯಿನ್ ಆಗಿ ಬೇಡ ಎಂದು ಅತ್ಯಂತ ವಿನಯದಿಂದ ಹೇಳಿದ್ದರು ಎಂದಿದ್ದಾರೆ. ನಟ ದರ್ಶನ್‌ ಸಹವಾಸ ದೋಷ ಹಾಗೂ ಕುಡಿತ ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂದು ಕೂಡ ಅಗ್ನಿ ಶ್ರೀಧರ್ ಹೇಳಿದ್ದಾರೆ. 

ಮುಂದುವರೆದ ಅವರು, ನನ್ನ ಅನಿಸಿಕೆ ಏನೆಂದರೆ, ಈ ವಿಷ್ಯದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅಚಾತುರ್ಯದಿಂದ ಆಗಿದ್ದು ಎಂಬುದನ್ನು ನಾನು ಖಂಡಿತ ಹೇಳಬಯಸುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.