ಏಕಾಏಕಿ ಮಸೀದಿಯಲ್ಲಿ ಕೂತು 'ಅಲ್ಲ ಊ ಅಕ್ಕಬರ್' ಎಂದ ತಮಿಳು ನಟ ದಳಪತಿ ವಿಜಯ್
Updated: Mar 10, 2025, 18:03 IST

ದಕ್ಷಿಣ ಭಾರತದ ಸೂಪರ್ಸ್ಟಾರ್ ವಿಜಯ್ ಶುಕ್ರವಾರ ಚೆನ್ನೈನಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಉಪವಾಸ ಮಾಡುವವರು ಉಪವಾಸ ಮುರಿಯುವ ಇಫ್ತಾರ್ ಕೂಟದಲ್ಲಿ ಎಲ್ಲಾ ಮುಸ್ಲಿಂ ಬಾಂಧವರೊಂದಿಗೆ ತಾವೂ ಕೂಡ ಟೋಪಿ ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ ತಮಿಳು ನಟ ಹಾಗೂ ರಾಜಕಾರಣಿ ವಿಜಯ್. ಈ ಫೋಟೋಗಳು ಮತ್ತು ವೀಡಿಯೊಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ವಿಡಿಯೋಕ್ಕೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.
ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಮತ್ತು ಮುಖ್ಯಸ್ಥ ವಿಜಯ್ ಅವರು ಮುಸ್ಲಿಂ ಸಹೋದರರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸುವ ವೇಳೆ ಬಿಳಿ ಬಟ್ಟೆ ಧರಿಸಿ ತಲೆಗೆ ಟೋಪಿ ಹಾಕಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ ವಿಜಯ್ ಇಡೀ ದಿನ ಉಪವಾಸ ಮಾಡಿ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ನಮಾಜ್ ಮಾಡಿದ್ದಾರೆ. ನಂತರ ಅವರು ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸಿ, ಸಾವಿರಾರು ಉಪವಾಸ ಮಾಡುವ ಮುಸ್ಲಿಂ ಬಾಂಧವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
<a href=https://youtube.com/embed/9Zc87Ly-vx8?autoplay=1&mute=1><img src=https://img.youtube.com/vi/9Zc87Ly-vx8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಇಫ್ತಾರ್ ಕೂಡದಲ್ಲಿ 15 ಸ್ಥಳೀಯ ಮಸೀದಿಗಳ ಇಮಾಮ್ಗಳನ್ನು ಹಾಜರಾಗಲು ಆಹ್ವಾನಿಸಲಾಗಿತ್ತು. ಸುಮಾರು 3000 ಉಪವಾಸ ಮಾಡುವ ಮುಸ್ಲಿಂಮರಿಗೆ ವ್ಯವಸ್ಥೆ ಮಾಡಲಾಗಿತ್ತು.ಆದರೆ ಈ ವಿಡಿಯೋಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ತಿಂಗಳು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯಿತು. ಇದರಲ್ಲಿ ದೇಶ ಅಲ್ಲದೆ ವಿದೇಶದಿಂದಲೂ ಜನ ಭಾಗವಹಿಸಿ ಪವಿತ್ರಾ ಸ್ಥಾನ ಮಾಡಿದರು. ಕೆಲ ಮುಸ್ಲಿಂ ಬಾಂಧವರೂ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಹೀಗಿರುವಾಗ ತಮಿಳು ನಟ ವಿಜಯ್ ಎಲ್ಲಾ ಜಾತಿ ಧರ್ಮದವರನ್ನು ಒಂದೇ ರೀತಿ ನೋಡುವುದಾದರೆ ಕುಂಭಮೇಳದಲ್ಲಿ ಯಾಕೆ ಭಾಗವಹಿಸಲಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳಿಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.