ಸ್ವಂತ ತಂದೆಯಿಂದಲೇ‌ ನನ್ನ ಮೇ ಲೆ ಲೈಂ ಗಿಕ ದೌರ್ಜನ್ಯ ಆಯ್ತು; ಖುಷ್ಬೂ

 | 
Fh
 ಕನ್ನಡದ ನಟಿ ಅಲ್ಲವಾದರೂ ಕನ್ನಡದ ಹಲವು ಸಿನಿಮಾಗಳಲ್ಲಿ ಮಿಂಚಿದ ಖುಷ್ಬೂ ಅವರು ಶ್ರೇಷ್ಠ ನಟಿ ಎನಿಸಿಕೊಂಡಿದ್ದಾರೆ. ಅವರು ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ರವಿಚಂದ್ರನ್ ಜೊತೆಗಿನ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಗುತ್ತದೆ.  ರಣಧೀರ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ಅಂಜದ ಗಂಡು, ಯುಗ ಪುರುಷ, ಪ್ರೇಮಾಗ್ನಿ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
 1996ರಲ್ಲಿ ಬಂದ ಜೀವನದಿ ಸಿನಿಮಾ ಗಮನ ಸೆಳೆಯಿತು. 2010ರ ಜನನಿ ಬಳಿಕ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಅವರ ಬದುಕಿನ ಕತೆ ಕೇಳಿದ್ರೆ ಯಾರ ಕಣ್ಣಲ್ಲಿ ಆದ್ರೂ ಕಣ್ಣೀರು ಸುರಿಯುತ್ತದೆ.ಯಾವುದೇ ಹುಡುಗಿಗಾದರೂ ತಂದೆ ಹೀರೋ ಆಗಬೇಕು. ತಂದೆ ತೋರುವ ಆದರ್ಶಗಳಿಂದ ಅವಳು ಬೆಳೆಯ ಬೇಕು. ಪ್ರತಿ ಹೆಜ್ಜೆಯಲ್ಲೂ ತಂದೆಯ ಮಾರ್ಗದರ್ಶನ ಬೇಕು.
 ಎಲ್ಲೇ ಹೋದರೂ ತಂದೆ ಇದ್ದಾರೆ ಎನ್ನುವ ಧೈರ್ಯ ಬೇಕು. ಆದರೆ, ಖುಷ್ಬೂ ಸುಂದರ್​ಗೆ ಆ ರೀತಿ ಆಗಲೇ ಇಲ್ಲ ಅನ್ನೋದು ಬೇಸರದ ವಿಚಾರವೇ ಸರಿ. ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಒಂದು ವಿಚಾರವನ್ನು ಮರೆಯಲು ಸಾಕಷ್ಟು ಸಮಯ ಬೇಕು. ನಾನು ಸಣ್ಣವನಿದ್ದಾಗ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದೆ ಎಂದಿದ್ದಾರೆ ಅವರು.
ಪುರುಷನಾಗಿ ಆತ ಪತ್ನಿಗೆ ಹೊಡೆಯೋ ಜನ್ಮಸಿದ್ಧ ಹಕ್ಕು ಎಂದು ಅವನು ಭಾವಿಸಿದಂತೆ ಇತ್ತು. ಅದೇ ರೀತಿ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡೋದು ಅವನ ಕರ್ತವ್ಯ ಎಂದು ಭಾವಿಸಿದ್ದ. ಇದನ್ನು ಪ್ರಶ್ನೆ ಮಾಡಲು ನನಗೆ ಏಳು ವರ್ಷ ಬೇಕಾಯಿತು. ನನ್ನ ಮಾತನ್ನು ನನ್ನ ತಾಯಿ ನಂಬುವುದಿಲ್ಲ ಎನ್ನುವ ಭಯ ಇತ್ತು ಎಂದಿದ್ದಾರೆ.ಏನೇ ಆದರೂ ನನ್ನ ಪತಿ ದೇವರು ಎಂದು ಖುಷ್ಬೂ ಅವರ ತಾಯಿ ಭಾವಿಸುತ್ತಿದ್ದರು. ಆ ರೀತಿಯ ಮನಸ್ಥಿತಿ ಅವರದ್ದಾಗಿತ್ತು. ತಂದೆಯ ವಿರುದ್ಧ ತಿರುಗಿಬಿದ್ಧ ನಂತರ ಇಡೀ ಕುಟುಂಬವನ್ನು ತಂದೆ ಬಿಟ್ಟುಬಿಟ್ಟನು. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಕಾಡಲು ಪ್ರಾರಂಭಿಸಿತು. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.