ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬೆನ್ನಲ್ಲೇ ಮತ್ತೊಂದು ಆಘಾತ, ಚಿತ್ರರಂಗದ ಭವಿಷ್ಯ ನುಡಿದ ಕೋಡಿಶ್ರೀ

 | 
Bd

ಕೊರೊನಾ ವೈರಸ್ ಹರಡಲು ಆರಂಭವಾದಾಗಿನಿಂದ ಸಾಕಷ್ಟು ಸಾವು-ನೋವುಗಳಾಗಿವೆ. ಪುನೀತ್ ರಾಜಕುಮಾರ್, ಚಿರು ಸರ್ಜಾ, ಸಂಚಾರಿ ವಿಜಯ್, ಸ್ಪಂದನಾ ರಾಘವೇಂದ್ರ ಹೀಗೆ ಹಲವಾರು ಜನ ಈಗಾಗಲೇ ಇನ್ನಿಲ್ಲವಾಗಿದ್ದಾರೆ.ಕನ್ನಡ ಚಿತ್ರರಂಗದಲ್ಲಂತೂ ಸೂತಕದ ಛಾಯೆಆವರಿಸಿದೆ.

ಪ್ರತಿ ವರ್ಷ ನಟ, ನಟಿಯರು, ತಂತ್ರಜ್ಞರು ನಿಧನರಾಗುತ್ತಿದ್ದಾರೆ. ಹೀಗಿರುವಾಗ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಅಕ್ಟೋಬರ್ 30ರ ನಂತರ ಬಣ್ಣದ ಲೋಕಕ್ಕೆ ಅಪಾಯದ ಸೂಚನೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಹೌದು ಅಕ್ಟೋಬರ್ 30 ಕ್ಕೆ ರಾಹು ಗ್ರಹನು ಮೀನರಾಶಿಯಲ್ಲಿ ಮೀನಾಂಶ ಪಡೆಯುತ್ತಾನೆ. ಇದರಿಂದ ಛಾಯಾಲೋಕ ಎಂದರೆ ಬಣ್ಣದ ಲೋಕಕ್ಕೆ ಸಮಸ್ಯೆ ಇದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮುನ್ನೆಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾದರು. ನಟ ಚಿರಂಜೀವಿ ಸರ್ಜಾ, ಫಿಟ್‌ನೆಸ್ ಕಡೆಗೆ ತುಂಬ ಗಮನ ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್ ಕೂಡ ಹೃದಯಾಘಾತವಾಗಿ ನಿಧನರಾದರು. ಕೆಲ ದಿನಗಳ ಹಿಂದೆ ಸೂರಜ್ ಎನ್ನುವವರಿಗೆ ಅಪಘಾತ ಆಗಿ ಕಾಲು ಕಳೆದುಕೊಂಡಿದ್ದಾರೆ.ನಿನ್ನೆ ಕೂಡ ನಟ ಪವನ್ ಎನ್ನುವವರು ಇಹಲೋಕ ತ್ಯಜಿಸಿದ್ದಾರೆ.

ಕರ್ಕ, ವೃಶ್ಚಿಕ, ಮೀನ ರಾಶಿಯಲ್ಲಿ ಯಾವುದೇ ಗ್ರಹವೂ ಮೀನಾಂಶದಲ್ಲಿ ಬಂದರೆ ಮೋಕ್ಷ ಎಂದರ್ಥ. ಮೋಕ್ಷ ಎಂದರೆ ನಿರ್ಗಮನ ಎಂದೂ ವ್ಯಾಖ್ಯಾನಿಸಬಹುದು. ಅಕ್ಟೋಬರ್ 30 ಕ್ಕೆ ರಾಹು ಗ್ರಹ ಮೀನರಾಶಿಯಲ್ಲಿ ಮೀನಾಂಶ ಪಡೆಯುತ್ತಾನೆ. ರಾಹುವಿನಿಂದ ಛಾಯಾ ಲೋಕದ ಚಿಂತನೆಯನ್ನೂ ಮಾಡಬಹುದು. ಛಾಯಾಲೋಕ ಎಂದರೆ ಬಣ್ಣ ಹಾಕಿ ನಟಿಸುವವರು. ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಇರುವವರಿಗೆ ಅಪಾಯ ಸೂಚನೆ.
ಬೆರೆಯವರಿಗೇನೋ ಉತ್ತಮ ಆಗಬಹುದು. ಆದರೆ ಛಾಯಾ ಲೋಕಕ್ಕೆ ನಷ್ಟ. ಈಗಾಗಲೇ ಅವರ ಮೇಲೆ ದಾಳಿ, ಅವರಲ್ಲಿ ಅನಿರೀಕ್ಷಿತ ಮರಣಗಳಾಗುತ್ತಿರುವುದನ್ನು ಕಾಣುತ್ತೇವೆ. ಹೆಚ್ಚಾಗಿ ಹೃದಯಾಘಾತ, ಅಪಘಾತ ಮರಣಗಳಾಗುತ್ತಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈಗಾಗಲೇ ಸಾಕಷ್ಟು ಜನರ ಜಾತಕ ನೋಡಿ ಸಮಸ್ಯೆಗೆ ಕಾರಣ, ಪರಿಹಾರವನ್ನು ತಿಳಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯ, ಸಾಮಾಜಿಕ ಘಟನೆಗಳ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದರು ಅವೆಲ್ಲ ಈ ತನಕ ನಿಜವಾಗಿದೆ ಎನ್ನುವುದೇ ಬೇಸರದ ಸಂಗತಿ.


ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.