ರೂಮ್ ಅಲ್ಲಿ ಹೆಂಡತಿ ಜೊತೆ ಇದ್ದ ಅಲ್ಲು ಅರ್ಜುನನ್ನು‌ ಏಕಾಏಕಿ ‌ಅರೆಸ್ಟ್ ಮಾಡಿದ ಪೊಲೀಸರು

 | 
Hs
ಪುಷ್ಪ 2 ಸಿನಿಮಾದ ನಟ ಅಲ್ಲು ಅರ್ಜುನ್ ಅವರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೌದು, ಪುಷ್ಪ 2 ರಿಲೀಸ್ ಆದ ದಿನ ಅಲ್ಲು ಅರ್ಜುನ್ ನೋಡಲು ‌ಬಂದಿದ್ದ ಅಭಿಮಾನಿಯೊಬ್ಬರು ಸಾವನ್ನಪ್ಪಿದ ‌ಘಟನೆಯೊಂದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲು ಅರ್ಜುನ್ ಅವರು ತನ್ನ ಮಡದಿ ಜೊತೆ ಮನೆಯಲ್ಲಿ ಇದ್ದ ಸಂಧರ್ಭದ ಏಕಾಏಕಿ ಪೊಲೀಸರು ನುಗ್ಗಿ ಅರೆಸ್ಟ್ ಮಾಡಿದ್ದಾರೆ. 
ಈ‌ ವೇಳೆ ಅದೇ ಮನೆಯಲ್ಲಿದ್ದ ಅಲ್ಲು ಅರ್ಜುನ್ ತಂದೆ ಶಾ ಕ್ ಆಗಿದ್ದಾರೆ. ಮಗನ ಜೊತೆ ತಂದೆ ಕೂಡ ಪೊಲೀಸ್ ಜೀಪ್ ಹತ್ತಿದ್ದಾರೆ. ಆದರೆ ತಂದೆಯನ್ನು ಪೊಲೀಸ್ ವಾಹನದಿಂದ ಇಳಿಸಿದ ಅರ್ಜುನ್. 'ಇಲ್ಲಿ ಏನು‌ ನಡೆದರೂ ಅದಕ್ಕೆ‌ ನಾನೇ ಕಾರಣ' ನಿಮ್ಮ‌ ಮೇಲೆ ಯಾವುದೇ ಅಪವಾದ ಬರಬಾದೆಂದು ಅಲ್ಲು ಅರ್ಜುಮ್ ತನ್ನ ತಂದೆಗೆ ಹೇಳಿಕೊಂಡಿದ್ದಾರೆ. 
ಇನ್ನು ಪೊಲೀಸ್ ಜೀಪ್‌ ಹತ್ತಿದ ಅಲ್ಲು ಅರ್ಜುನ್ ನೇರ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಮಹಿಳೆಯೊಬ್ಬರು ಸಾವಿನ ವಿಚಾರವಾಗಿ ಅಲ್ಲು ಅರ್ಜುನ್ ಅವರನ್ನು ತೀವ್ರ ತನಿಖೆ ಮಾಡಲಾಗುತ್ತಿದೆ. ಇದರ ಜೊತೆಗೆ ಅಲ್ಲು ಅರ್ಜುನ್ ಅವರಿಗೆ ತಾತ್ಕಾಲಿಕ ಜಾಮೀನು ಕೂಡ ನೀಡದಂತೆ ತಡೆಯಾಜ್ಞೆ ಕೂಡ ಕೇಳಿ ಬರುತ್ತಿದೆ. 
ಅಲ್ಲು ಅರ್ಜುನ್ ಅವರ ಮೇಲಿನ ಈ ಆರೋಪ ‌ಎಷ್ಟು ಸರಿ ಎಂದು ಅವರ ಅಭಿಮಾನಿಗಳು ಇದೀ ಜಾಲತಾಣದಲ್ಲಿ ನ್ಯಾಯ ಕೇಳುತ್ತಿದ್ದಾರೆ. ಇನ್ನು ಅಲ್ಲು ಅರ್ಜುನ್ ಪತ್ನಿ ಕೂಡ ಶಾ ಕ್‌ಗೆ ಜಾರಿದ್ದಾರೆ. ಏನೂ ತಪ್ಪು ಮಾಡದ ಗಂಡನ್ನು ಏಕಾಏಕಿ ಅರೆಸ್ಟ್ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.