ರಾಜ್ಯ ರಾಜಕೀಯಕ್ಕೆ ಬಿಗ್ ಬಾಸ್ ಕಾರ್ತಿಕ್ ಎಂಟ್ರಿ, ಆ ಅಶೋಕ್ ಮನೆಯಲ್ಲಿ ಔತಣ

 | 
Hs

​ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ವಿಪಕ್ಷ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಭೇಟಿ ಆಗಿದ್ದಾರೆ. ಬಿಗ್​ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಅನ್ನು ಕಾರ್ತಿಕ್ ಮಹೇಶ್ ಗೆದ್ದಿದ್ದು, ವಿನ್ನರ್ ಆದ ಬಳಿಕ ಅವರ ಜನಪ್ರಿಯತೆ ಹತ್ತುಪಟ್ಟಾಗಿದೆ.

ಇನ್ನು ಬಿಗ್​ಬಾಸ್​ನಿಂದ ಹೊರಬಂದಾಗಿನಿಂದಲೂ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ, ಇವೆಂಟ್​ಗಳಲ್ಲಿ ಕಾರ್ತಿಕ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾ ಇವೆಂಟ್​ಗಳನ್ನು ಅಟೆಂಡ್ ಮಾಡಿದ್ದಾರೆ. ತಂಗಿ ಮತ್ತು ಅಳಿಯನನ್ನು ಭೇಟಿ ಮಾಡಿ ಸಂತೋಷ ಪಟ್ಟಿದ್ದಾರೆ.

ಇದೀಗ ಕಾರ್ತಿಕ್ ತಮ್ಮ ಬಿಗ್​ಬಾಸ್ ಟ್ರೋಫಿಯೊಟ್ಟಿಗೆ ರಾಜಕೀಯ ಮುಖಂಡರನ್ನು ಭೇಟಿ ಆಗಿದ್ದಾರೆ. ಬಿಜೆಪಿ ರಾಜ್ಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಕಾರ್ತಿಕ್ ಭೇಟಿ ಆಗಿದ್ದಾರೆ. ಆರ್ ಅಶೋಕ್ ಅವರಿಗೆ ತಮ್ಮ ಬಿಗ್​ಬಾಸ್ ಟ್ರೋಫಿಯನ್ನು ತೋರಿಸಿರುವ ಕಾರ್ತಿಕ್ ಮಹೇಶ್, ಬಿಗ್​ಬಾಸ್​ನಲ್ಲಿ ಕಳೆದ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನು ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಅವರಿಗೆ ಆರ್ ಅಶೋಕ್ ಅವರು ಕಿರು ಸನ್ಮಾನ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಮಾ ಹರೀಶ್ ಸಹ ಕಾರ್ತಿಕ್ ಜೊತೆಗಿದ್ದರು. ಬಿಗ್​ಬಾಸ್ ಗೆದ್ದು ಬಂದಿರುವ ಕಾರ್ತಿಕ್ ಮಹೇಶ್​ರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಕಾರ್ತೀಕ್ ರಾಜಕೀಯ ಸೇರ್ತಾರ ಅನ್ನುವ ಪ್ರಶ್ನೆ ಮೂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.