ಮರು ಮದುವೆ ಬಗ್ಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪಷ್ಟತೆ, ಕಳೆದ ಸಮಯ 60 ಲಕ್ಷ ಖರ್ಚು ಮಾಡಿದ್ದೆ

 | 
Mkk
ಗಾಯಕ ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಅವರು ಡಿವೋರ್ಸ್‌ ಪಡೆದಿದ್ದಾರೆ. ಹೊಂದಾಣಿಕೆ ಕೊರತೆ ಇರೋದಿಕ್ಕೆ ಡಿವೋರ್ಸ್‌ ಪಡೆದಿರೋದಾಗಿ ಈ ಜೋಡಿ ಹೇಳಿಕೊಂಡಿತ್ತು. ಆದರೆ ನಿಜವಾದ ಕಾರಣ ಬೇರೆ ಇದೆಯಂತೆ. ಹೌದು ಸೂತ್ರಧಾರಿ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಗಾಯಕ ಚಂದನ್‌ ಶೆಟ್ಟಿ ಅವರು ಪುನಃ ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ನಟಿ ಸಂಜನಾ ಆನಂದ್‌ ಜೊತೆಗೆ ಮದುವೆಯಾಗುತ್ತಿರುವ ವಿಷಯ ಶುದ್ಧ ಸುಳ್ಳು ಎಂದು ಒತ್ತಿ ಒತ್ತಿ ಹೇಳಿರುವ ಇವರು, ಡಿವೋರ್ಸ್‌ಗೆ ಕಾರಣ ಬೇರೆ ಇದೆ ಎಂದಿದ್ದಾರೆ. 
ಆರಂಭದಲ್ಲಿ ಸುದ್ದಿಗೋಷ್ಠಿ ಕರೆದು, ನನ್ನ ಹಾಗೂ ನಿವೇದಿತಾ ಗೌಡ ಮಧ್ಯೆ ಹೊಂದಾಣಿಕೆ ಸಮಸ್ಯೆ ಇದೆ, ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಹತ್ತಿರ ಇದ್ದೂ ಖುಷಿಯಾಗಿಲ್ಲ ಅಂದ್ಮೇಲೆ ದೂರ ಇದ್ದು ಖುಷಿಯಾಗಿರೋದು ಒಳ್ಳೆಯದು ಎಂದು ಈ ಜೋಡಿ ಹೇಳಿಕೆ ನೀಡಿತ್ತು. ನಾನು, ನಿವೇದಿತಾ ಗೌಡ ಅವರು ಡಿವೋರ್ಸ್‌ ತಗೊಳ್ಳುವಾಗ ಸಾಕಷ್ಟು ಬಾರಿ ಯೋಚನೆ ಮಾಡಿದ್ದೇವೆ. ವೈಯಕ್ತಿಕ ವಿಷಯಗಳನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ. 
ಏನೂ ಗೊತ್ತಿಲ್ಲದೆ ಕೆಲವರು ಆ ಕಾರಣ, ಈ ಕಾರಣ ಅಂತ ಹೇಳಬಹುದು. ಆದರೆ ನಮ್ಮ ವಿಷಯಗಳನ್ನು ನಾನಾಗಲೀ, ನಿವೇದಿತಾ ಆಗಲೀ ಹೇಳಿಕೊಳ್ಳೋದಿಲ್ಲ. ನಮ್ಮ ಡಿವೋರ್ಸ್‌ಗೆ ನಿಜವಾದ ಕಾರಣ ಏನು ಎನ್ನೋದು ನಮ್ಮ ಮಧ್ಯೆಯೇ ಉಳಿದಿರುತ್ತದೆ. ನನಗೆ ನನ್ನ ಖುಷಿ ಮುಖ್ಯ ಆಗಿತ್ತು, ಡಿವೋರ್ಸ್‌ ತಗೊಂಡೆವು, ಈಗ ಇಬ್ಬರೂ ಖುಷಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡಗೆ ಮತ್ತೆ ಜೊತೆಯಾಗ್ತಾರಾ? ಎಂಬ ಅಭಿಮಾನಿಗಳ ಕುತೂಹಲಕ್ಕೆ ಚಂದನ್ ಶೆಟ್ಟಿ ಕ್ಲ್ಯಾರಿಟಿ. ಇದು ಮಕ್ಕಳ ಆಟ ಅಲ್ಲ, ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ ಎಂದು ಚಂದನ್ ಹೇಳಿದ್ದಾರೆ.ಡಿವೋರ್ಸ್ ಕುರಿತು ಎದುರಾದ ಪ್ರಶ್ನೆಗೆ ಚಂದನ್ ಪ್ರತಿಕ್ರಿಯೆ, ನಾವು ಡಿವೋರ್ಸ್ ಯಾಕೆ ತೆಗೆದುಕೊಂಡ್ವಿ ಎಂಬುದು ನಮ್ಮ ಪರ್ಸನಲ್ ವಿಚಾರ. ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೀನಿ. 
ಇದು ಮಕ್ಕಳ ಆಟ ಅಲ್ಲ, ಎಲ್ಲರೂ ಯೋಚಿಸಿ ಡಿವೋರ್ಸ್ ಪಡೆದಿದ್ದೇವೆ. ಅದು ಬಿಟ್ಟರೆ ಅವರಿಗೆ ಈಗ ಪಶ್ಚಾತ್ತಾಪ ಕಾಡ್ತಿಲ್ಲ. ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಕೆಟ್ಟ ಕಾಮೆಂಟ್ ಮಾಡಬೇಡಿ, ನಿಂದಿಸಬೇಡಿ ಎಂದು ಚಂದನ್ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.