ಬಹು ವರ್ಷಗಳ ಬಳಿಕ ದರ್ಶನ್ ಪತ್ನಿ ಎರಡನೇ ಸಿಹಿಸುದ್ದಿ, ಮನೆಯಲ್ಲಿ ಸಂಭ್ರಮ ಸಡಗರ
Feb 28, 2025, 08:55 IST
|

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದಾಗ ಅವರನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಜಯಲಕ್ಷ್ಮಿ ಅವರು ರಾಜ್ಯದಲ್ಲಿರುವ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ, ವ್ರತಗಳನ್ನು ಮಾಡಿದ್ದರು. ಜೊತೆಗೆ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟ ಹೊರಬರಲೆಂದು ವಿಶೇಷ ಪೂಜೆಗಳನ್ನು ಮಾಡಿಸಿದ್ದರು.
ಇದರ ಪ್ರತಿಫಲವೆಂಬಂತೆ ದರ್ಶನ್ಗೆ ಜಾಮೀನು ದೊರೆತು ಇದೀಗ ಹೊರಗಡೆ ಇದ್ದಾರೆ. ಆದರೂ ಅವರಿಗೆ ಈಗಲೂ ಸಂಕಷ್ಟಗಳು ಎದುರಾಗುತ್ತಲೇ ಇವೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿತ್ತು. ಬಿಡುಗಡೆ ಕೂಡ ಆಗಿದ್ದಾರೆ. ಇದೀಗ ಈ ಜಾಮೀನು ಮಂಜೂರು ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು, ನಟ ದರ್ಶನ್ ಅವರಿಗೆ ಮತ್ತೊಂದು ತಲೆನೋವು ಎದುರಾದಂತಾಗಿದೆ.
ಮತ್ತೊಂದೆಡೆ ಕುಟುಂಬಸ್ಥರು ದರ್ಶನ್ ಎಲ್ಲಾ ಸಮಸ್ಯೆಗಳಿಂದ ಬೇಗ ಹೊರಗಡೆ ಬರಲಿ ಎಂದು ಮತ್ತೆ ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆ.ಇದೀಗ ಕುಟುಂಬಸ್ಥರೆಲ್ಲಾ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ತಾಯಿ ಮೀನಾ ತೂಗುದೀಪ ಅವರು ಸಹ ಮಗ ದರ್ಶನ್ ಒಳಿತಿಗಾಗಿ ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಂಡಿದ್ದಾರೆ.
ಮತ್ತೊಂದೆಡೆ ದೈವ ಸ್ವರೂಪಿ ಬಸವಣ್ಣನ ಮುಂದೆ ಕುಳಿತು ವಿನೀಶ್ ಅಪ್ಪನಿಗೆ ಒಳಿತಾಗಲೆಂದು ಕೈಯೊಡ್ಡಿ ಬೇಡಿಕೊಂಡಾಗ, ಆ ಬಸವಣ್ಣ ವಿನೀಶ್ ಕೈ ಮೇಲೆ ಬಲಗಾಲನ್ನಿಟ್ಟಿ ಅಸ್ತು ಎಂದು ಸೂಚಿಸಿದೆ. ಇದರರ್ಥ ನಟ ದರ್ಶನ್ಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದರ್ಥ.ಇನ್ನು ಶಿವರಾತ್ರಿ ಹಬ್ಬಕ್ಕೆ ನಟ ದರ್ಶನ್ ಎಲ್ಲರಿಗೂ ಹಬ್ಬದ ಶುಭಾಶಯಗಳ ಹೇಳಿದ್ದಾರೆ. ಇದರಿಂದ ಪತ್ನಿ ವಿಜಯಲಕ್ಷ್ಮಿ ಸಖತ್ ಖುಷಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.