ಧಾರಾವಾಹಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಗಳಿಸಿದರು ಕೂಡ ಸ್ವಂತ ತಮ್ಮನ ವಿಚಾರದಲ್ಲಿ ಕಣ್ಣೀರು ಹಾಕುತ್ತಿರುವ ಪಾರು

 | 
Hs

ಪಾರು ಧಾರಾವಾಹಿ 5.5 ವರ್ಷಗಳ ಕಾಲ ಪ್ರಸಾರ ಆಗಿತ್ತು. ಈ ಧಾರಾವಾಹಿ ಶುರುವಾದ ಆರಂಭದಲ್ಲಿ ಈ ಸೀರಿಯಲ್ ಸೂಪರ್ ಹಿಟ್ ಆಗಿ, ಟಿಆರ್‌ಪಿಯಲ್ಲಿ ನಂ 1 ಇತ್ತು. ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮೋಕ್ಷಿತಾ ಪೈ ಅವರು ಎಂಟ್ರಿ ಕೊಟ್ಟರು. ಈಗ ಈ ಧಾರಾವಾಹಿ ಅಂತ್ಯವಾಗಿದೆ. ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳುವೆ ಎಂದು ಹೇಳಿರುವ ಮೋಕ್ಷಿತಾ ಪೈ ಅವರೀಗ ಸಹೋದರನ ಉಪನಯನ ಮಾಡಿರುವ ಖುಷಿಯಲ್ಲಿದ್ದಾರೆ. 

ಜನರಿಗೆ ಉಪನಯನ ಮಾಡೋದಕ್ಕೂ, ವಿಶೇಷ ಚೇತನರಿಗೆ ಉಪನಯನ ಮಾಡೋದಕ್ಕೂ ವ್ಯತ್ಯಾಸ ಇದೆ. ನನ್ನ ತಮ್ಮನಿಗೆ ಈಗ 20 ವರ್ಷ ವಯಸ್ಸು. ಆದರೆ ಅವನಿಗೆ 8 ತಿಂಗಳ ಮಗುವಿನ ಬುದ್ಧಿ ಇದೆ. ಇಷ್ಟು ವರ್ಷಗಳಿಂದ ಅವನಿಗೆ ಉಪನಯನ ಮಾಡುವುದೋ ಬೇಡವೋ ಎಂಬ ಗೊಂದಲ ಇತ್ತು. ಆದರೆ ನಮ್ಮ ಅರ್ಚಕರು ಉಪನಯನ ಮಾಡಬೇಕು ಅಂತ ಹೇಳಿದರು.

 ನನ್ನ ತಮ್ಮನಿಗೆ ಬೇರೆ ಏನೂ ಶುಭ ಕಾರ್ಯಗಳನ್ನು ಮಾಡೋಕೆ ಆಗೋದಿಲ್ಲ, ಮಗು ಇದನ್ನಾದರೂ ನೋಡಲಿ ಅಂತ ನಾವು ಅಂದುಕೊಂಡಿದ್ದೆವು.ತುಂಬ ಸಮಯದಿಂದ ನನ್ನ ತಾಯಿಗೆ ಮಗನ ಉಪನಯನ ಮಾಡಬೇಕು ಅಂತ ಅನಿಸ್ತಿತ್ತು. ಉಪನಯನದ ನಂತರ ನಿತ್ಯವೂ ವಿಧಿ-ವಿಧಾನಗಳನ್ನು ನೆರವೇರಿಸಬೇಕು, ಅವನ ಬಳಿ ಆಗಲ್ಲ ಅಂತ ನಮ್ಮ ತಂದೆ ಹೇಳುತ್ತಿದ್ದರು. ಹಾಗಾಗಿ ಇಷ್ಟು ವರ್ಷ ಉಪನಯನ ಮಾಡಲಿಲ್ಲ ಎಂದು ಮೋಕ್ಷಿತಾ ಪೈ ಅವರು ಹೇಳಿದ್ದಾರೆ.

ಇತ್ತೀಚೆಗೆ ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲು ಬಂದು ಪುರೋಹಿತರು, ತಮ್ಮನಿಗೆ ಉಪನಯನ ಮಾಡಿ ಅಂತ ಹೇಳಿದರು. ನನ್ನ ತಮ್ಮನಿಗೆ ಉಪನಯನ ಮಾಡಿದ್ರೂ ಗಾಯಿತ್ರಿ ಮಂತ್ರ ಹೇಳಲು ಆಗೋದಿಲ್ಲ. ನನ್ನ ತಂದೆಯೇ ತಮ್ಮನ ಕಿವಿಯಲ್ಲಿ ನಿತ್ಯವೂ ಗಾಯತ್ರಿ ಮಂತ್ರ ಹೇಳುತ್ತಾರೆ. ಗಾಯತ್ರಿ ಮಂತ್ರ ತುಂಬ ಪವರ್‌ಫುಲ್. ಏನಾದರೂ ಅವನಲ್ಲಿ ಬದಲಾವಣೆ ಆಗಬಹುದು ಎನ್ನುವ ಆಶಯ ನಮಗಿದೆ ಎಂದಿದ್ದಾರೆ ಮೋಕ್ಷಿತಾ ಪೈ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.