ಭಾರತ ಪಾಕ್ ಯುದ್ಧದ ಸಂದರ್ಭ, ಮುದ್ದಿನ ತಂಗಿಯ ಮದುವೆ ಬಿಟ್ಟು ದೇಶ ಕಾಯಲು ಹೋದ ಅಣ್ಣ
May 14, 2025, 16:04 IST
|

ತಾಯಿಗೆ ಅನಾರೋಗ್ಯ ಹಾಗೂ ಸಹೋದರಿ ಮದುವೆಗೆಂದು ಭಾರತೀಯ ಸೇನೆಯಿಂದ ರಜೆ ತೆಗೆದುಕೊಂಡು ತವರಿಗೆ ಯೋಧ ಬಂದಿದ್ದರು. ಆದರೆ ಈಗ ಪಾಕಿಸ್ತಾನ ಹಾಗೂ ಭಾರತದ ನಡುವೆ ಘರ್ಷಣೆ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗಿಂತ ದೇಶ ಮುಖ್ಯವೆಂದು ಭಾರತದ ಗಡಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ತನ್ನ ಗಂಡನನ್ನು ಕಳುಹಿಸಲು ಬಂದಿದ್ದ ಪತ್ನಿಯ ಕಣ್ಣೀರು ಎಲ್ಲರನ್ನು ಭಾವುಕರನ್ನಾಗಿಸಿದೆ.
ಭಾರತೀಯ ಸೇನೆಯ ಯೋಧ ಕನ್ಯಾಕುಮಾರ್ ಚವ್ಹಾಣ್ ಕಲಬುರಗಿಯ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ನಿವಾಸಿ. ಕಳೆದ 20 ವರ್ಷದಿಂದ ಸಿಆರ್ಪಿಎಫ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆ ತಿಂಗಳು 19 ರಂದು ಸಹೋದರಿ ಮದುವೆ ಹಾಗೂ ತಾಯಿಯ ಅನಾರೋಗ್ಯ ಎಂದು ಹೇಳಿ 1 ತಿಂಗಳು ರಜೆ ಮೇಲೆ ಮೇ 6 ರಂದು ಕಲಬುರಗಿಗೆ ಆಗಮಿಸಿದ್ದರು. ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನತೆ ಏರ್ಪಟ್ಟಿದೆ.
ಇದರಿಂದ ರಜೆ ಮೇಲೆ ತವರಿಗೆ ಬಂದಿದ್ದ ಎಲ್ಲ ಯೋಧರನ್ನು ಮತ್ತೆ ಕರ್ತವ್ಯಕ್ಕೆ ಹಾಜರು ಆಗಬೇಕು ಎಂದು ಭಾರತೀಯ ಸೇನೆಯಿಂದ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಒಳಗಾದ ತಾಯಿಯನ್ನು ಬಿಟ್ಟು ಹಾಗೂ ಸಹೋದರಿಯ ಮದುವೆ ಅದ್ಧೂರಿಯಾಗಿ ಮಾಡಬೇಕು ಎಂದುಕೊಂಡಿದ್ದನ್ನು ಬಿಟ್ಟು ಭಾರತದ ಗಡಿ ಕಾವಲಿಗೆ ಯೋಧ ಕನ್ಯಾಕುಮಾರ್ ಚವ್ಹಾಣ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.ಪ್ರತಿ ಬಾರಿ ರಜೆ ಮೇಲೆ ಮನೆಗೆ ಯೋಧ ಬಂದಾಗ ಪತ್ನಿ ಕಡೆಯವರು ಖುಷಿ ಖುಷಿಯಿಂದ ಕಳುಹಿಸಿಕೊಡುತ್ತಿದ್ದರು. ಆದರೆ ಭಾರತ ಹಾಗೂ ಪಾಕ್ ನಡುವೆ ಘರ್ಷಣೆಯಿಂದ ಗಂಡನನ್ನು ಭಾವುಕದಿಂದ ಪತ್ನಿ ಕಳುಹಿಸಿಕೊಟ್ಟಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,31 May 2025
ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಫಾರಿನ್ ಟ್ರಿಪ್, ಪವಿತ್ರ ಗೌಡ ಕ ಣ್ಣೀರು
Sat,31 May 2025
ಮಡೆನೂರು ಮನು ಹಾಗೂ ಮಿಂಚು ಕರ್ಮಕಾಂಡ ಆಡಿಯೋ ಬ ಯಲು
Sat,31 May 2025