FactCheck:ಕನ್ನಡ ಚಿತ್ರರಂಗದಿಂದ ರಚಿತಾ ರಾಮ್ ಬ್ಯಾನ್, ಅಸಲಿಗೆ ಆಗಿದ್ದೇ ನು

 | 
Hs
ಕಳೆದ ಎರಡು ದಿನಗಳ ಹಿಂದೆ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ರಚಿತಾ ರಾಮ್ ಅವರ ನಟನೆಯ ಸಂಜು ವೆಡ್ಸ್ ಗೀತಾ-2 ಸಿನಿಮಾ ರಿಲೀಸ್ ಆಗಿತ್ತು. ಆದರೆ ಈ ಒಂದು ಚಿತ್ರದ ಪ್ರಚಾರಕ್ಕೆ ನಟಿ ರಚಿತಾ ರಾಮ್ ಅವರು ಬರಲಿಲ್ಲ ಎಂದು ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ಅವರ ದೂರನ್ನು ಚಲನಚಿತ್ರ ಮಂಡಳಿ ಮನ್ನಿಸಿದ್ದು, ಸೂಕ್ತ ವಿಚಾರಣೆ ನಡೆಸೋದಾಗಿ ಹೇಳಿದೆ. ನಟಿ ರಚಿತಾ ರಾಮ್‌ ಅವರ ವಿರುದ್ದ ಮತ್ತೊಂದು ಆರೋಪ ಕೇಳಿ ಬಂದಿದೆ.
ಇದೀಗ ನಟಿ ರಚಿತಾ ರಾಮ್ ಚಿತ್ರವೊಂದರ ಅಡ್ವಾನ್ಸ್ ಹಣ ಪಡೆದು ವಾಪಸ್ ನೀಡದ ಹಿನ್ನೆಲೆ ಫಿಲಂ ಚೇಂಬರ್ ನಲ್ಲಿ ಮತ್ತೊಂದು ದೂರು ದಾಖಲಾಗಿದೆ. ಉಪ್ಪಿ ರುಪ್ಪಿ ಸಿನೆಮಾಗಾಗಿ ನಟಿ ರಚಿತಾ ರಾಮ್‌ ಅವರು ಅಡ್ವಾನ್ಸ್ ಪಡೆದಿದ್ದರು. ಹಣ ವಾಪಸ್ ನೀಡದ ಹಿನ್ನೆಲೆ ದೂರು ದಾಖಲಾಗಿದೆ. 8 ವರ್ಷದ ಹಿಂದೆ ಉಪೇಂದ್ರ ರಚಿತಾ ನಟನೆಯಲ್ಲಿ ಈ ಒಂದು ಚಿತ್ರ ಮೂಡಿ ಬರಬೇಕಿತ್ತು. ಉಪ್ಪಿ ರಪ್ಪಿ ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟಿ ರಚಿತಾ ರಾಮ್ ನಟಿಸಲು ಒಪ್ಪಿಕೊಂಡಿದ್ದರು. 23 ಲಕ್ಷ ಸಂಭಾವನೆಗೆ ಒಪ್ಪಿಕೊಂಡು 13 ಲಕ್ಷ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕ್ ಆಫ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು. ಫ್ಲೈಟ್ ಟಿಕೆಟ್ ಬುಕಿಂಗ್ ಬಳಿಕ ರಚಿತಾ ರಾಮ್ ಚಿತ್ರಿಕರಣಕ್ಕೆ ಬರಲಿಲ್ಲ. ಚಿತ್ರೀಕರಣಕ್ಕೆ ಬರುವುದಾಗಿ ಹೇಳಿ 15 ದಿನಗಳ ಕಾಲ ನಟಿ ರಚಿತಾ ರಾಮ್ ಸತಾಯಿಸಿದ್ದರು ಎಂಬ ಮಾತು ಕೇಳಿ ಬಂದಿದೆ.gygt
ನಟಿ ರಚಿತಾ ರಾಮ್ ಅವರ ಮೇಲೆ 'ಸಂಜು ವೆಡ್ಸ್ ಗೀತಾ 2' ಸಿನಿಮಾದ ಪ್ರಚಾರಕ್ಕೆ ಬಾರದಿರುವುದು ಚರ್ಚೆ ಹಾಗೂ ಉಪ್ಪಿ ರಪ್ಪಿ ತಂಡದೊಂದಿಗಿನ ವಿವಾದದ ಕುರಿತು ದೂರು ದಾಖಲಾಗಿದೆ. ಈ ಮಧ್ಯೆ ರಚಿತಾ ಅವರು ಈ ಹಿಂದೆ ನೀಡಿದ ಸಂದರ್ಶನದ ವಿಡಿಯೋ ಇದೀಗ ವೈರಲ್ ಆಗುತ್ತಿವೆ. ಅವರ ಮೌನಕ್ಕೆ ಕಾರಣಗಳ ಕುರಿತು ರಚಿತಾ ಅವರು ನೀಡಿದ್ದ ಹಳೆಯ ಸಂದರ್ಶನದ ಡೈಲಾಗ್ಗಳನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಈ ಹಿಂದೆ ರಚಿತಾ ರಾಮ್‌ ಅವರ ಹೆಸರು ರಾಜಕೀಯ ನಾಯಕ ಜೊತೆಗೆ ತಳುಕು ಹಾಕಿಕೊಂಡಿತ್ತು. ಆ ಸಂದರ್ಭದಲ್ಲಿ ನಟಿ ರಚಿತಾ ರಾಮ್‌ ಅವರು ಮಾತನಾಡಿ ವದಂತಿಯನ್ನು ನೇರವಾಗಿ ತಳ್ಳಿ ಹಾಕಿದ್ದರು. ನಟಿ ರಚಿತಾ ರಾಮ್‌ ಅವರು ಈ ಹಿಂದೆ ಮಾತನಾಡಿದ ವಿಡಿಯೋ ವೈರಲ್‌ ಆಗುತ್ತಿದೆ. ತಂದೆ, ತಾಯಿ, ಒಡ ಹುಟ್ಟಿದ್ದವರು ಬಿಟ್ಟರೆ ಸಂಬಂಧಿಕರೇ ನಮ್ಮ ಬಗ್ಗೆ ಮಾತನಾಡುತ್ತಾರೆ. 
ನಾವು ನಮ್ಮ ಕೆಲಸ ಮಾಡಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಮಾತನಾಡುತ್ತೇನೆ ಎಂದು ರಚಿತಾ ರಾಮ್ ಅವರು ಹೇಳಿದ್ದರು. ಇದೀಗ ಅವರು ಮೌನವಾಗಿರಲು ಕೂಡ ಇದೇ ಕಾರಣವೇ ಕನ್ನಡ ಚಿತ್ರರಂಗದಿಂದ ರಚಿತಾ ರಾಮ್ ಬ್ಯಾನ್ ಆಗ್ತಾರ ಎನ್ನುವ ಪ್ರಶ್ನೆ ಮೂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub