FactCheck:ಪಾಕಿಸ್ತಾನದ ಬಗ್ಗೆ ರಾಕಿ‌ ಬಾಯ್ ಯಶ್ ಖಡಕ್ ಮಾತು, ಉಡೀಸ್ ಮಾಡಿ‌ ಬಿಡಿ

 | 
N
ಇಂದು ಪಾಕಿಸ್ತಾನದ ವಿರುದ್ಧ ಭಾರತ ಹೋರಾಟ ಮಾಡುತ್ತಿದೆ. ಪಾಕ್-ಭಾರತದ ನಡುವಿನ ವಾತಾವರಣ ಸಿಕ್ಕಾಪಟ್ಟೆ ಉದ್ವಿಗ್ನತೆ ಶುರುವಾಗಿದೆ. ಭಾರತೀಯ ಸೆಲೆಬ್ರಿಟಿಗಳು ಭಾರತದ ಆರ್ಮಿಯನ್ನು ಶ್ಲಾಘಿಸಿದ್ದಾರೆ. ಅಂದಹಾಗೆ ನಟ ಯಶ್‌ ಅವರು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಅಚಲ ಶಕ್ತಿ, ನಿಖರತೆಗೆ ನಮನಗಳು - ನಮ್ಮ ಅಭೇದ್ಯ ಗುರಾಣಿ ಇದು! ಅವರ ಸೇವೆಗೆ ಕೃತಜ್ಞತೆಯೊಂದಿಗೆ, ನಾವು ಒಗ್ಗಟ್ಟಿನಿಂದ ನಿಂತು ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾವುದನ್ನೇ ಆಗಲೀ ಶೇರ್‌ ಮಾಡುವ ಮೊದಲು, ಅಥವಾ ಪ್ರತಿಕ್ರಿಯಿಸುವ ಮೊದಲು, ವಿಶೇಷವಾಗಿ ಆನ್‌ಲೈನ್‌ನಲ್ಲಿ ಎಲ್ಲವನ್ನೂ ಪರಿಶೀಲಿಸಿ. ತಪ್ಪು ಮಾಹಿತಿಯ ವಿರುದ್ಧ ನಮ್ಮ ಸಾಮೂಹಿಕ ಹೋರಾಟವು ಭಾರತವನ್ನು ಬಲಪಡಿಸುತ್ತದೆ.
ದುರ್ಬಲ ಪ್ರದೇಶಗಳಲ್ಲಿರುವ ಸಹ ಭಾರತೀಯರೊಂದಿಗೆ ಆಲೋಚನೆಗಳು; ಬಲಶಾಲಿಯಾಗಿರಿ, ದೃಢಮನಸ್ಸು ಇಟ್ಟುಕೊಳ್ಳಿಜೈ ಹಿಂದ್! ಎಂದು ಬರೆದುಕೊಂಡಿದ್ದಾರೆ. ಕಪ್‌ ನಮ್ದೇ ಎಂದು ಜಪ ಮಾಡುತ್ತಿರುವಾಗಲೇ ಯುದ್ಧದ ಭೀತಿ ಶುರುವಾಗಿದೆ, ನಮ್ಮವರು ಆರೋಗ್ಯಕರವಾಗಿರಬೇಕು, ದೇಶ ಸುರಕ್ಷತೆಯಿಂದ ಇರಬೇಕು ಎನ್ನುವ ಆಶಯ ಇದೆ. ಹೀಗಿರುವಾಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಈ ವರ್ಷದ ಐಪಿಎಲ್‌ ರದ್ದು ಮಾಡಿದೆ. ಇನ್ನು 16 ಪಂದ್ಯಗಳು ಬಾಕಿ ಇರುವಾಗ, ಇಡೀ ಟೂರ್ನಿಯನ್ನು ರದ್ದು ಮಾಡಿದೆ. ಪಾಕಿಸ್ತಾನದ ವಿರುದ್ಧ ಯುದ್ದ ಭೀತಿ ಹೆಚ್ಚಾಗಿರುವ ಹಾಗೆ ಕಾಣ್ತಿದೆ. 
ಈ ಸಂಘರ್ಷ ಕಡಿಮೆಯಾಗ್ತಿರೋ ಲಕ್ಷಣಗಳು ಕಾಣದೆ ಇರೋದಿಕ್ಕೆ, ಬಿಸಿಸಿಐ ಈ ನಿರ್ಧಾರ ಮಾಡಿತ್ತು. ಇದಕ್ಕೆ ಸರ್ಕಾರದ ಒಪ್ಪಿಗೆ ಕೂಡ ಇದೆ. ಇನ್ನು ಗೃಹ ಇಲಾಖೆಯ ಸೂಚನೆಯ ಮೇರೆಗೆ ಈ ನಿರ್ಧಾರವನ್ನು ತಗೊಳ್ಳಲಾಗಿದೆ. ಅಷ್ಟೇ ಅಲ್ಲದೆ CA ಪರೀಕ್ಷೆ ಕೂಡ ಮುಂದೂಡಲಾಗಿದೆ. ಈ ಟೈಮ್‌ನಲ್ಲಿ ಭಾರತೀಯರು ಪ್ರವಾಸ ಮಾಡೋದು ಕೂಡ ಒಳ್ಳೆಯದಲ್ಲ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನೇನು ಆಗಲಿದೆಯೋ ಏನೋ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ‌ಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub