ಗೋಲ್ಡ್ ಸುರೇಶ್ ಆರೋಗ್ಯದ‌ ಬಗ್ಗೆ ಡಾಕ್ಟರ್ ಕಹಿಸುದ್ದಿ, ಬಿಗ್ ಬಾಸ್ ಸ್ಪರ್ಧಿಗಳ ಮುಖ ಜೊತೆ ಕೊನೆಯ ಕ್ಷಣ ಕಳೆಯುತ್ತಿರುವ ಗೋಲ್ಡ್

 | 
ಗಿ
ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ಆಸ್ಪತ್ರೆ ಸೇರಿರೋದು ನಿಮ್ಗೆಲ್ಲ ಗೊತ್ತೇ ಇದೆ.  ಕಾಲು ನೋವಿನಿಂದ ಬಳಲುತ್ತಿರುವ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಗೋಲ್ಡ್ ಸುರೇಶ್ ಕಾಲಿನ ಆಪರೇಷನ್ ನಡೆಯಲಿದೆ. ಆ ನಂತ್ರ ಸುರೇಶ್ ಚೇತರಿಸಿಕೊಳ್ಳಲಿದ್ದಾರೆಂದು ವೈದ್ಯರು ಭರವಸೆ ನೀಡಿದ್ದಾರೆ.
 ಈ ಮಧ್ಯೆ ಬಿಗ್ ಬಾಸ್ ಕನ್ನಡ ಸೀನಸ್ 11ರ ಸ್ಪರ್ಧಿಯಾಗಿದ್ದ ಚೈತ್ರ ಕುಂದಾಪುರ ಸುರೇಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುರೇಶ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಚೈತ್ರ, ಅವರ ಆರೋಗ್ಯ ವಿಚಾರಿಸಿದ್ರು. ಜೊತೆಗೆ ಅವರ ತಲೆ ಸವರಿ ಧೈರ್ಯ ಹೇಳಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಈಗ ಚೈತ್ರ ಜೊತೆ ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ನೋಡಿದ ಫ್ಯಾನ್ಸ್, ಬೇಗ ಹುಷಾರಾಗಿ ಬನ್ನಿ ಅಂತ ಕಮೆಂಟ್ ಹಾಕಿದ್ದಾರೆ. ಅಲ್ಲದೆ ಚೈತ್ರ, ಅಮ್ಮನ ಹೃದಯ ಹೊಂದಿದ್ದಾರೆಂದು ಬರೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸುರೇಶ್ ಕಾಲಿಗಾದ ನೋವು ಕಡಿಮೆ ಆಗಿಲ್ಲ. ಬಿಗ್ ಬಾಸ್ ಕನ್ನಡ 11ರ ಸೀಸನ್ ಗೆ ಮೈ ತುಂಬ ಬಂಗಾರ ಹಾಕಿಕೊಂಡು ಬಂದವರು ಸುರೇಶ್. ಅವರು ಧರಿಸುವ ಬಂಗಾರದಿಂದಲೇ ಜನರು ಅವರನ್ನು ಗೋಲ್ಡ್ ಸುರೇಶ್ ಅಂತ ಕರೀತಾರೆ.
ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಬಿಗ್ ಬಾಸ್ ಶೋನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಗಾಯ ಮಾಡ್ಕೊಂಡಿದ್ದರು. ಡ್ರಮ್ ನಲ್ಲಿ ನೀರು ತುಂಬಿ ಅದನ್ನು ರಕ್ಷಿಸುವ ಟಾಸ್ಕ್ ಅದಾಗಿತ್ತು. ನೀರು ತುಂಬಿದ್ದ ಡ್ರಮ್ ಸುರೇಶ್ ಕಾಲ್ಮೇಲೆ ಬಿದ್ದಿತ್ತು. ನೋವು ತಾಳಲಾರದೆ ಅವರು ಚಿಕಿತ್ಸೆ ಪಡೆದಿದ್ದರು. ವೈದ್ಯರು ರೆಸ್ಟ್ ಹೇಳಿದ್ದ ಕಾರಣ ಸುರೇಶ್ ಕೆಲ ಟಾಸ್ಕ್ ಆಡಿರಲಿಲ್ಲ. ಆದ್ರೆ ನಂತ್ರ ಉತ್ತಮ ಪ್ರದರ್ಶನ ನೀಡಿ ಕ್ಯಾಪ್ಟನ್ ಕೂಡ ಆಗಿದ್ರು.
ನೋವಿನ ಮಧ್ಯೆ ಆಟ ಆಡಿದ್ರೂ ಗೋಲ್ಡನ್ ಸುರೇಶ್ ಗೆ ತುಂಬಾ ದಿನ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಸಾಧ್ಯ ಆಗ್ಲಿಲ್ಲ. ಬ್ಯುಸಿನೆಸ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರು ಮನೆಗೆ ಬಂದಿದ್ದರು. ಬಿಗ್ ಬಾಸ್ ಮನೆಗೆ ಸುರೇಶ್ ಎಂಟ್ರಿಯಂತೆ ಅವರು ವಾಪಸ್ ಹೋಗಿದ್ದ ಕೂಡ ಫ್ಯಾನ್ಸ್ ಗೆ ಶಾಕ್ ತಂದಿತ್ತು. ಅವರು ವಾಪಸ್ ಬರ್ತಿದ್ದಂತೆ ಅನೇಕ ವದಂತಿ ಹಬ್ಬಿತ್ತು. ಆದ್ರೆ ಎಲ್ಲರದಕ್ಕೂ ಬ್ರೇಕ್ ಹಾಕಿದ್ದ ಸುರೇಶ್, ಏನಾಗಿತ್ತು ಎಂಬುದನ್ನು ಫ್ಯಾನ್ಸ್ ಮುಂದೆ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.