ಸ್ನೇಹಿತನ ಬಳಿ ಪವಿತ್ರ ಕೊನೆಯ ಮಾತು; ಆ 2 ನಿಮಿಷದಲ್ಲಿ ನ ಟಿ ಹೇ ಳಿದ್ದೇನು ಗೊ.ತಾ

 | 
Us

ಇತ್ತೀಚಿಗಷ್ಟೇ ಅಪಘಾತದಲ್ಲಿ ನಮ್ಮನ್ನು ಅಗಲಿದ ಪವಿತ್ರಾ ಮೂಲತಃ ಮಂಡ್ಯದ ಹೊನಕೆರೆಯವರು. ರಾಧಾ ರಮಣ, ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ ಸೇರಿದಂತೆ ಕನ್ನಡದ ಹಲವು ಧಾರಾವಾಹಿ ಮತ್ತು ತ್ರಿನಯನಿ ಸೇರಿದಂತೆ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಮಂಡ್ಯದಿಂದ ಹೈದರಾಬಾದ್‌ಗೆ ಪ್ರಯಾಣ ಮಾಡುತ್ತಿದ್ದಾಗ ತೆಲಂಗಾಣದ ಮೆಹಬೂಬ್‌ನಗರದಲ್ಲಿ ಕಾರು ಅಪಘಾತದಲ್ಲಿ ಅಸುನೀಗಿದ್ದಾರೆ.

ಪವಿತ್ರಾ ಜೊತೆಗೆ ಸಹನಟ ಚಂದ್ರಕಾಂತ್ ಕೂಡ ಅದೇ ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದು, ಅವರು ಕೂಡ ಗಾಯಗೊಂಡಿದ್ದಾರೆ. ಚಂದ್ರಕಾಂತ್ ಅವರು ಅಪಘಾತ ಆಗುತ್ತಿದ್ದಂತೆ ನನಗೆ ಪ್ರಜ್ಞೆ ತಪ್ಪಿತ್ತು. ನನಗೆ ತುಂಬ ಟೈಮ್ ಆದಮೇಲೆ ಪ್ರಜ್ಞೆ ಬಂತು, ಆಗ ಪವಿ ಸಾವಿಗೀಡಾಗಿದ್ದು ಗೊತ್ತಾಗಿದೆ. ಆಂಬುಲೆನ್ಸ್ ಬರೋದು 20 ನಿಮಿಷ ತಡವಾಗಿದೆ. 

ಆಂಬುಲೆನ್ಸ್ ಬೇಗ ಬಂದಿದ್ದರೆ ಪವಿತ್ರಾ ಬದುಕುತ್ತಿದ್ದಳು. ನಾವು ಈ ತಿಂಗಳು 23, 24ನೇ ತಾರೀಖು ನಾವು ಕನ್ನಡ ಸಿನಿಮಾಕ್ಕೆ ಸಹಿ ಹಾಕಬೇಕಿತ್ತು. ಕಳೆದ 5 ವರ್ಷಗಳಿಂದ ನಾನು, ಪವಿತ್ರಾ ಒಟ್ಟಿಗೆ ಅನೇಕ ಪ್ರಾಜೆಕ್ಟ್ ಮಾಡಿದ್ದೇವೆ ಎಂದು ಮಾಧ್ಯಮಕ್ಕೆ ಹೇಳಿದ್ದಾರೆ. ಅಷ್ಟಕ್ಕೂ ಚಂದ್ರಕಾಂತ್, ಪವಿತ್ರ ಅವರು ಉತ್ತಮ ಸ್ನೇಹಿತರು. 

ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಪಾರ್ಟಿ ಮಾಡಿರುವ ವಿಡಿಯೋ, ಕಾರ್ ಖರೀದಿಸಿದ್ದು, ಟ್ರಾವೆಲ್, ಕುಕ್ಕಿಂಗ್ ಮಾಡಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಚಂದ್ರಕಾಂತ್ ಅವರು ಸೋಶಿಯಲ್ ಮೀಡಿಯಾದ ಪೋಸ್ಟ್ ಹಂಚಿಕೊಂಡಿದ್ದು, ಪಾಪ, ಇದು ನಿನ್ನ ಜೊತೆಗೆ ತೆಗೆಸಿಕೊಂಡ ಕೊನೆಯ ಫೋಟೋ. 

ನೀನು ನನ್ನನ್ನು ಒಬ್ಬಂಟಿ ಮಾಡಿದೆ. ನೀನಿಲ್ಲ ಎನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಒಂದು ಸಲ ನನ್ನನ್ನು ಮಾಮಾ ಅಂತ ಕರಿ. ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.