ಅಂದು ಆ ವಿಮಾನದಲ್ಲಿ ನಾನು ಕೂಡ ಪ್ರಯಾಣಿಸುತ್ತಿದ್ದೆ, ಸ್ಫೋ ಟಕ ಮಾಹಿತಿ ಹೊರಹಾಕಿ ತನಿಖಾಧಿಕಾರಿಗಳ ನಿದ್ದೆ ಕೆಡಿಸಿದ ಮಾಲಾಶ್ರೀ
Jun 17, 2025, 19:01 IST
|

ಚೆನ್ನೈನಿಂದ ಹೈದರಾಬಾದ್ಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿ ಬಹುದೊಡ್ಡ ಅನಾಹುತವೊಂದು ತಪ್ಪಿತ್ತು. ಪೈಲೆಟ್ ಚಾಕಚಕ್ಯತೆಯಿಂದ ಭಾರೀ ದುರಂತದಿಂದ ನೂರಾರು ಜನರ ಪ್ರಾಣ ಉಳಿದಿತ್ತು. ಆ ವಿಮಾನದಲ್ಲಿ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ವಿಜಯಶಾಂತಿ, ಬ್ರಹ್ಮಾನಂದಂ ಹಾಗೂ ನಟಿ ಮಾಲಾಶ್ರೀ ಸೇರಿದಂತೆ ಹಲವರು ಫ್ಯಾಮಿಲಿ ಸಮೇತ ಪ್ರಯಾಣಿಸುತ್ತಿದ್ದರು. ಆ ದುಸ್ವಪ್ನದ ಬಗ್ಗೆ ಖಾಸಗಿ ವಾಹಿನಿ ಜೊತೆ ನಟಿ ಮಾಲಾಶ್ರೀ ಮಾತನಾಡಿದ್ದಾರೆ.
ಅವತ್ತು ಇಡೀ ತೆಲುಗು ಸಿನಿರಂಗವೇ ಆ ಫ್ಲೈಟ್ನಲ್ಲಿತ್ತು. ನಾವು ದೀಪಾವಳಿ ಆಚರಿಸಲು ಚೆನ್ನೈಗೆ ಬಂದು ಹೈದರಾಬಾದ್ಗೆ ವಾಪಸ್ ಹೊರಟಿದ್ದೆವು. ಚಿರಂಜೀವಿ, ಬಾಲಯ್ಯ, ವಿಜಯಶಾಂತಿ ಎಲ್ಲರೂ ಫ್ಯಾಮಿಲಿ ಸಮೇತ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ಮೊದಲಿಗೆ ಏನು ಹೇಳಲಿಲ್ಲ. ಬಳಿಕ ಹವಮಾನ ಸಮಸ್ಯೆ ಕಾರಣದಿಂದ ಮತ್ತೆ ವಿಮಾನ ಚೆನ್ನೈಗೆ ಹೋಗುತ್ತದೆ ಎಂದು ಅನೌನ್ಸ್ ಮಾಡಿದರು ಎಂದು ಮಾಲಾಶ್ರೀ ಹೇಳಿದ್ದಾರೆ.
ಬಹಳ ಹೊತ್ತು ವಿಮಾನವನ್ನು ಆಗಸದಲ್ಲಿ ಸುತ್ತಾಡಿಸಿದರು. ಏಕಾಏಕಿ ಎಮರ್ಜೆನ್ಸಿ ಲ್ಯಾಂಡಿಂಗ್ ಎಂದು ಹೇಳಿ ಬಿಟ್ಟರು. ಎಲ್ಲರೂ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದರು. ನಾವು ಎಲ್ಲೋ ನೆಲದ ಮೇಲೆ ಇಳಿಸುತ್ತಾರೆ ಎಂದು ತಿಳಿದಿದ್ದೆವು. ಕೊನೆಗೆ ಗದ್ದೆಯ ಮೇಲೆ ನಮ್ಮ ವಿಮಾನವನ್ನು ಇಳಿಸಿದ್ದರು. ಪುಣ್ಯಕ್ಕೆ ಯಾರಿಗೂ ಏನೂ ಆಗಲಿಲ್ಲ. ಇವತ್ತಿಗೂ ಅದಕ್ಕೆ ಕಾರಣ ಏನು ಎಂಬ ಬಗ್ಗೆ ನಾನು ಯಾರನ್ನು ಕೇಳಲಿಲ್ಲ ಎಂದು ಮಾಲಾಶ್ರೀ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023