ಕರ್ಣ ಸೀರಿಯಲ್ ಟಿವಿಯಲ್ಲಿ ಬರಲ್ವಾ; ಮಹತ್ವದ ಸುಳಿವು ಕೊಟ್ಟ ನಮ್ರತಾ ಗೌಡ

 | 
Js
ಕನ್ನಡತಿ ಖ್ಯಾತಿಯ ಕಿರಣ್ ರಾಜ್, ನಮ್ರತಾ ಗೌಡ ಮತ್ತು ಭವ್ಯಾ ಗೌಡ ಮುಖ್ಯಭೂಮಿಕೆಯಲ್ಲಿರುವ 'ಕರ್ಣ' ಧಾರಾವಾಹಿಯು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಎಲ್ಲಾ ಸರಿಯಾಗಿ ನಡೆದಿದ್ದರೇ, ಜೂನ್ 16ರ ಸೋಮವಾರ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದು ಕರ್ಣ ಧಾರಾವಾಹಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಬಹಳ ನಿರಾಸೆಯನ್ನು ಉಂಟು ಮಾಡಿತ್ತು. 
ಇದೀಗ ಆ ಬಗ್ಗೆ ನಟಿ ನಮ್ರತಾ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮನ್ನು ಮನರಂಜಿಸಲು ಆದಷ್ಟು ಬೇಗ ಬರ್ತಿವಿ ಎಂದು ಹೇಳಿಕೊಂಡಿದ್ದಾರೆ ನಟಿ ನಮ್ರತಾ ಗೌಡ.ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿರುವ ನಮ್ರತಾ ಗೌಡ,ಎಲ್ಲರಿಗೂ ನಮಸ್ಕಾರ. ನಿಮ್ಮೆಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ. ಜೂನ್ 16ರ ಸೋಮವಾರ ಪ್ರಸಾರ ಆಗ್ಬೇಕಿದ್ದ 'ಕರ್ಣ' ಧಾರಾವಾಹಿ ಯಾಕೆ ಪ್ರಸಾರ ಆಗ್ಲಿಲ್ಲ ಅಂತ ತುಂಬಾ ಜನ ಕೇಳ್ತಾ ಇದ್ದೀರಾ, ಮೆಸೇಜ್ ಮಾಡ್ತಾ ಇದ್ದೀರಾ. ಆದರೆ ಅದಕ್ಕೆ ಮೊದಲನೆಯದಾಗಿ ನಮ್ಮ ಇಡೀ ತಂಡದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ನಮ್ರತಾ ಗೌಡ ಅವರು ಹೇಳಿದ್ದಾರೆ.
https://www.instagram.com/reel/DK_LbGRvLrp/?igsh=MWZlOHk5Ymw4M3RvZA==
ಕಾರಣಾಂತರಗಳಿಂದ, ಸಾಕಷ್ಟು ಸಮಸ್ಯೆಗಳಿಂದಾಗಿ ನಾವು ಧಾರಾವಾಹಿಯನ್ನು ಪ್ರಸಾರ ಮಾಡೋದಕ್ಕೆ ಆಗಲಿಲ್ಲ. ಆದರೆ ನಾನು ಪ್ರಾಮೀಸ್ ಮಾಡುತ್ತೇನೆ. ರಾತ್ರಿ 8 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ ನಾವೆಲ್ಲರೂ ನಿಮ್ಮನ್ನ ಮನರಂಜಿಸಲು ಆದಷ್ಟು ಬೇಗ ಬರ್ತಾ ಇದ್ದೀವಿ. ಯಾವ ರೀತಿ ನಮ್ಮೇಲೆ ಪ್ರೀತಿ, ಪ್ರೋತ್ಸಾಹ ತೋರಿಸಿದ್ರೋ, ಅದನ್ನೇ ತೋರಿಸಿ ಅಂತ ಕೇಳ್ಕೊತಾ ಇದೀನಿ ಎಂದು ಮನವಿ ಮಾಡಿಕೊಂಡಿದ್ದಾರೆ ನಟಿ ನಮ್ರತಾ ಗೌಡ.
ನಾನಂತೂ ತುಂಬ ಎಕ್ಸೈಟ್ ಆಗಿದ್ದೇನೆ. ಕರ್ಣ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಒಂದು ಪ್ರಾಜೆಕ್ಟ್‌ನಲ್ಲಿ ನಮ್ಮ ಇಡೀ ತಂಡದ ಶ್ರಮ ಇದೆ. ಅಷ್ಟೇ ಪ್ರೀತಿಯಿಂದ ಮಾಡಿರುವಂತಹ ಒಂದು ಪ್ರಾಜೆಕ್ಟ್ ಇದು. ನನಗೆ ನಂಬಿಕೆ ಇದೆ, ನೀವೆಲ್ಲರೂ ಕೂಡ ತುಂಬಾ ಇಷ್ಟ ಪಡ್ತೀರಾ ಅಂತ. ನಾವೆಲ್ಲರೂ ನಿಮ್ಮನ್ನು ಆದಷ್ಟು ಬೇಗ ಮಿಟ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ನಮ್ರತಾ ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.