ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್, ಲಕ್ಷ್ಮೀ ನೋಡಿ ಮೂಛೆ೯ ಹೋದ ಕಾವೇರಿ

 | 
ಹಾ
 ಲಕ್ಷ್ಮೀ ಬಾರಮ್ಮ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಲಕ್ಷ್ಮೀ ಮತ್ತು ಕೀರ್ತಿ ಆರ್ಭಟ ವೀಕ್ಷಕರಿಗೆ ಸಖತ್ ಥ್ರಿಲ್ ನೀಡಿದ್ದು, ಭರ್ಜರಿ ಟಿ ಆರ್ ಪಿ ಪಡೆದುಕೊಂಡಿದೆ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಧಾರವಾಹಿ ಕೆಲವು ದಿನಗಳಿಂದ ಥ್ರಿಲ್ಲರ್ ಸೀರಿಯಲ್ ಆಗಿದ್ದು, ಕೀರ್ತಿ ಮತ್ತು ಲಕ್ಷ್ಮಿಯ ಅದ್ಭುತ ಅಭಿನಯಕ್ಕೆ ಹಾಗೂ ಕುತೂಹಲಕಾರಿ ಟ್ವಿಸ್ಟ್ ಮತ್ತು ಟರ್ನ್ ನಿಂದಾಗಿ ವೀಕ್ಷಕರು ತುದಿಗಾಲಲ್ಲಿ ನಿಂತು ಸೀರಿಯಲ್ ನೋಡುವ ಹಾಗಾಗಿದೆ.
ಕೀರ್ತಿಯನ್ನು ಬೆಟ್ಟದ ಮೇಲಿಂದ ನೂಕಿ ಸಾವಿನ ದವಡೆಗೆ ನೂಕಿರುವ ಕಾವೇರಿ, ಎಲ್ಲರೆದುರು ತಾನೇನು ಮಾಡಿಯೇ ಇಲ್ಲ, ತಾನು ಒಳ್ಳೆಯವರು ಎಂದು ಬಿಲ್ಡಪ್ ಕೊಡುತ್ತಿದ್ದಾರೆ. ಇದೀಗ ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಸೇರಿಕೊಂಡಿದ್ದು, ಕಾವೇರಿಗೆ ತುಂಬಾನೆ ತೊಂದರೆ ಕೊಡುತ್ತಿದೆ. ಇದರಿಂದ ಹೆದರಿದ ಕಾವೇರಿ, ಲಕ್ಷ್ಮಿಯನ್ನು ಕರೆದುಕೊಂಡು ಆಶ್ರಮಕ್ಕೆ ಕರೆದುಕೊಂಡು ಹೋಗಿ ದೆವ್ವ ಬಿಡಿಸೋಕೆ ನೋಡಿದಳು.
ಅದು ಸಾಧ್ಯವಾಗದಾಗ ಡಾಕ್ಟರ್ ಗೆ ಹೇಳಿ ಹುಚ್ಚಿ ಪಟ್ಟ ಕಟ್ಟಿ ಮೂಲೆಗೆ ಸೇರಿಸಲು ನೋಡಿದಳು . ಎಲ್ಲ ಪ್ರಯತ್ನಗಳ ಅಚೆಗೂ ಕೀರ್ತಿಯ ಸಾವಿನ ರಹಸ್ಯ ಆಚೆಗೆ ಬರುವಂತೆ ಕಾಣುತ್ತಿದ್ದು ಅದಕ್ಕಾಗಿ ಲಕ್ಷ್ಮಿಯನ್ನು ಸಾಯಿಸಲು ಜನರನ್ನು ಬಿಟ್ಟು ಅವಳನ್ನು ಅವರು ಕಿಡ್ನಾಪ್ ಮಾಡಿ ಊರ ಹೊರಗಿನ ತೋಪಿನಲ್ಲಿ ಮಣ್ಣು ಮಾಡಿದ್ದಾರೆ.
ಆದರೆ ಕಾವೇರಿಯ ಹಣೆಬರಹಕ್ಕೆ ಇದನ್ನೆಲ್ಲ ತಿಳಿದ ಲೇಡಿ ಇನಿಸ್ಪೆಕ್ಟ್ರ್ ಕಾವೇರಿಯ ಬೆನ್ನ ಹಿಂದೆ ಬಿದ್ದಿದ್ದಾಳೆ. ಲಕ್ಷ್ಮಿ ಎಲ್ಲಿದ್ದಾಳೆ ಎಂದು ಹೇಳಲೇ ಬೇಕಿದೆ. ಅಲ್ಲಿಗೆ ಕಾವೇರಿ ಸ್ವತಃ ತಾನೇ ಆಳುಗಳ ಕೈಲಿ ಹೂತಿಟ್ಟ ಲಕ್ಷ್ಮಿ ಯನ್ನು ಮಣ್ಣಿನಿಂದ ಆಚೆಗೆ ತೆಗೆದಿದ್ದಾಳೆ. ಆದರೆ ಅವಳು ಮಣ್ಣಿನಿಂದ ಲಕ್ಷ್ಮಿಯನ್ನು ಹೊರ ತೆರೆಯುವುದನ್ನು ಅವಳ ಗಂಡ ಹಾಗೂ ವೈಷ್ಣವ್ ನೋಡಿದ್ದಾರೆ. ಹಾಗಾಗಿ ಮುಂದಿನವಾರವು ಈ ಸೇರಿಯಲ್ ಕತೆ ಕುತೂಹಲ ಕೆರಳಿಸುವಂತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.