ಗೌತಮಿ ಮೇಲೆ ಕೈ ಮಾಡಿದ ರಜತ್, ಬಿಗ್ ಬಾಸ್ ಮನೆಯಲ್ಲಿ ಮತ್ತೆ ಆರ್ಭಟ

 | 
He
ಬಿಗ್ ಬಾಸ್ ಮನೆಯಲ್ಲಿ ನಿನ್ನೆಯಷ್ಟೆ ಕಿಚ್ಚ‌ ಸುದೀಪ್ ಅವರು ಸ್ಪರ್ಧಿಗಳಿಗೆ ಬುದ್ದಿ ಹೇಳಿ ಹೋಗಿದ್ದಾರೆ. ಆದರೆ ಇದೀಗ ಮತ್ತೆ ಗೌತಮಿ ಹಾಗೂ ರಜತ್ ನಡುವೆ ಮಹಾ ಯುದ್ಧವೇ ನಡೆಯಿತು, ಈ ಇಬ್ಬರ ಜಗಳದಲ್ಲಿ ಸಹ‌‌ ಸ್ಪರ್ಧಿಗಳು ಕೂಡ ಶಾಕ್ ಆಗಿದ್ದಾರೆ. 
ಇನ್ನು ಈ‌ ಹಿಂದೆ ಧನರಾಜ್ ಜೊತೆ ಜಗಳ ಮಾಡಿಕೊಂಡಿದ್ದ ರಜತ್ ಅವರು ಧನರಾಜ್ ಮೇಲೆ ಕೈಮಾಡಲು ಮುಂದಾಗಿದ್ದರು. ಈ ವೇಳೆ ‌ಗೌತಮಿ ಅವರು ಮಧ್ಯ ಎಂಟ್ರಿ ಕೊಟ್ಟು ಸಮಾಧಾನ ಮಾಡುದ್ದಾರೆ. 
ಆದರೆ ಇದೀಗ ಗೌತಮಿ ಹಾಗೂ ರಜತ್ ನಡುವೆ ಮಹಾಯುದ್ಧವೇ ನಡೆದಿದೆ. ಇದನ್ನು ಸರಿಪಡಿಸಲು ಯಾವ ಸ್ಪರ್ಧಿಗಳು ಮುಂದೆ ಬಂದಿಲ್ಲ. ಜೊತೆಯಲ್ಲಿದ್ದ ಧನರಾಜ್ ಕೂಡ ಮೌನಕ್ಕೆ ಶರಣಾಗಿದ್ದಾರೆ. 
ಇನ್ನು ಎಲ್ಲದಲ್ಲೂ ಸಿಡಿಮಿಡಿಗೊಳ್ಳುವ ರಜತ್ ಅವರು ಬಿಗ್ ಬಾಸ್ ಮನೆಯ ಶಾಂತಿ ಹಾಳು ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವೀಕ್ಷಕರದ್ದು‌. ಆದರೆ ಕೆಲವರ ಪ್ರಕಾರ ರಜತ್ ಅವರ ನೇರ ಮಾತು ಕೆಲವರಿಗೆ ಇಷ್ಟವಾಗುತ್ತಿಲ್ಲ ಎನ್ನುತ್ತಿದ್ದಾರೆ‌.