ಕಾಂತಾರ ಸಿನಿಮಾದ ಮತ್ತೊಬ್ಬ ಕಲಾವಿದ ಸಾ ವು, ಮಹತ್ವವನ್ನು ನಿರ್ಧಾರ ಕೈಕೊಂಡ ರಿಷಭ್ ಶೆಟ್ಟಿ

 | 
Nz
ಅದ್ಯಾಕೋ ಗೊತ್ತಿಲ್ಲ ಕಾಂತಾರ: ಚಾಪ್ಟರ್ 1 ಸಿನಿಮಾ ಶುರುವಾದಾಗಿನಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಕಾಂತಾರ: ಚಾಪ್ಟರ್ 1 ಸಿನಿಮಾದಲ್ಲಿ ನಟಿಸುತ್ತಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಾವಿನ ನೋವು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. 'ಕಾಂತಾರ' ಸಿನಿಮಾದ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಮಿಮಿಕ್ರಿ ಕಲಾವಿದ ಕೊನೆಯುಸಿರೆಳೆದಿದ್ದಾರೆ.
ಕೇರಳ ಮೂಲದ ಮಿಮಿಕ್ರಿ ಕಲಾವಿದ ನಿಜು ವಿ ಕೆ ಅವರು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಿಮಿಕ್ರಿ ಕಲಾವಿದ ನಿಜು ವಿ ಕೆ ಅವರು ಕಾಂತಾರ: ಚಾಪ್ಟರ್ 1 ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಅವರು ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ನಿಜು ವಿ ಕೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಅಷ್ಟರಲ್ಲೇ ಮಾರ್ಗ ಮಧ್ಯೆಯೇ ನಿಜು ವಿ ಕೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. 
ನಿಜು ವಿ ಕೆ ಅವರ ಮೃತ ದೇಹವನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಿಜು ವಿ ಕೆ ಕುಟುಂಬಸ್ಥರು ಕೇರಳದಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಕಾಮಿಡಿ ಕಿಲಾಡಿಗಳು ಸೀಸನ್‌ 3' ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಕಾಂತಾರ: ಚಾಪ್ಟರ್ 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಮೇ 12 ರಂದು ಮಧ್ಯರಾತ್ರಿ ಹೃದಯಾಘಾತದಿಂದ ರಾಕೇಶ್ ಪೂಜಾರಿ ವಿಧಿವಶರಾದರು. 
ಚೆನ್ನಾಗಿಯೇ ಓಡಾಡಿಕೊಂಡು, ನಗಾಡಿಕೊಂಡು ಇದ್ದ ರಾಕೇಶ್ ಪೂಜಾರಿ ಹಠಾತ್ ಸಾವನ್ನಪ್ಪಿದರು. ಅದೂ ಜಸ್ಟ್ 34ನೇ ವಯಸ್ಸಿನಲ್ಲಿ ಅನ್ನೋದು ದುರಂತ ಮತ್ತು ದುರಾದೃಷ್ಟಕರ. ಕಾಂತಾರಸಿನಿಮಾ ಬ್ಲಾಕ್ ಬಸ್ಟರ್‌ ಆದ್ಮೇಲೆ ಕಾಂತಾರ: ಚಾಪ್ಟರ್ 1 ಸಿನಿಮಾ ತಯಾರಿಸಲು ರಿಷಬ್ ಶೆಟ್ಟಿ ಮುಂದಾದರು. ಆದರೆ, ಕಾಂತಾರ: ಚಾಪ್ಟರ್‌ 1 ಆರಂಭದಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ಜರುಗುತ್ತಲೇ ಇದೆ. ಸಿನಿಮಾ ಶುರುವಾದ ನಂತರ ಈವರೆಗೆ ಒಟ್ಟು 3 ಸಾವುಗಳು ಸಂಭವಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.