ಪಾಕ್ ವಿರುದ್ಧ ತೊಡೆತಟ್ಟಿದ ಸೋಫಿಯಾ ಖುರೇಷಿ ನಿಜ ಜೀವನದಲ್ಲಿ ಎಷ್ಟು ಮುದ್ದಾಗಿದ್ದಾರೆ

 | 
ಕದದ
ಆಪರೇಷನ್ ಸಿಂಧೂರದ ಮೂಲಕ ಭಾರತ, ಪಾಕಿಸ್ತಾನಕ್ಕೆ ಬರೀ ಪ್ರತ್ಯುತ್ತರವನ್ನ ಮಾತ್ರ ನೀಡಿದೆ. ಆದ್ರೆ 26 ಜನರ ಬಲಿಯ ಪ್ರತೀಕಾರ ಇನ್ನೂ ತೀರಿಲ್ಲ. ಆದ್ರೆ ಪಾಕಿಸ್ತಾನದ ಹುಟ್ಟಡಗಿಸಿದ ಭಾರತದ ರೋಚಕ ಸಾಧನೆಯನ್ನ ಜಗತ್ತಿನ ಮುಂದಿಟ್ಟಿದ್ದು, ಆ ಇಬ್ಬರು ಲೇಡಿ ಆಫೀಸರ್ಸ್​​. ಇವತ್ತು ಭಾರತ ಮಾತ್ರವಲ್ಲ, ಇಡೀ ಪ್ರಪಂಚವೇ ಈ ಇಬ್ಬರ ನಾರಿ ಮಣಿಯರ ಬಗ್ಗೆ ಮಾತಾಡ್ತಿದೆ. ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್. ಭಾರತ ಮಾತೆಯ ಪುತ್ರಿಯರಿಬ್ಬರು ಪಾಕಿಸ್ತಾನದ ಕ್ರಿಮಿಗಳನ್ನ ಹೊಡೆದುರುಳಿಸಿದ್ದು ಹೇಗೆ ಎನ್ನುವ ಮಾಹಿತಿ ಎಳೆ ಎಳೆಯಾಗಿ ಬಿಚ್ಟಿಟ್ಟಿದ್ದಾರೆ.
ಇವತ್ತು ಇಡೀ ಭಾರತವೇ ಕರ್ನಲ್​ ಸೋಫಿಯಾ ಬಗ್ಗೆ ಮಾತಾಡ್ತಿದೆ. ಯಾರು ಈ ವೀರ ಸೇನಾನಿ ಅಂತ ಗೂಗಲ್ ಮಾಡ್ತಿದೆ. ಆದ್ರೆ ಜಗತ್ತಿನ ಮುಂದೆ ಸಿಂಧೂರ ಅಳಿಸಿದ ಪಾಕಿಸ್ತಾನಿ ಉಗ್ರರ ಮರಣ ಚರಿತ್ರೆಯನ್ನ ತೆರೆದಿಟ್ಟ ಖುರೇಷಿ ನಮ್ಮ ಕರ್ನಾಟಕದ ಸೊಸೆ. ಅದ್ರಲ್ಲೂ ಕುಂದಾನಗರಿ ಬೆಳಗಾವಿಯ ಸೊಸೆ. ಈ ವಿಚಾರ ಇವತ್ತು ಇಡೀ ಕರ್ನಾಟಕವನ್ನ ಹೆಮ್ಮೆ ಪಡುವಂತೆ ಮಾಡಿದೆ. ಖುರೇಷಿ ಮಾವನ ಮನೆಯವರು, ಸಂಬಂಧಿ ಸೇರಿದಂತೆ ಇಡೀ ಬೆಳಗಾವಿಯೇ ಖುರೇಷಿ ಸಾಧನೆ ಕಂಡು ಹೆಮ್ಮೆ ಪಡ್ತಿದೆ. ಗುಜರಾತ್​ನ ಮಗಳು ಕರ್ನಾಟಕದ ಸೊಸೆ.
ಸೋಫಿಯಾ ಖುರೇಷಿ, ಬುಧವಾರ ಆಪರೇಷನ್​ ಸಿಂಧೂರದ ವಿವರನ್ನ ಬಿಚ್ಚಿಟ್ಟಿರುವುದನ್ನು ನೋಡಿದ ಪ್ರತಿಯೊಬ್ಬರು ಹುಟ್ಟಿದ್ರೆ ಇಂಥಾ ಮಗಳು ಹುಟ್ಬೇಕು ಅಂತಿದ್ದಾರೆ. ಅದಕ್ಕೆ ಕಾರಣ ಸೋಫಿಯಾ ಖುರೇಷಿ ಮಾಡಿದ ಸಾಧನೆ. ಅಷ್ಟಕ್ಕೂ ಕರ್ನಲ್​ ಸೋಫಿಯಾ ಖುರೇಷಿ ಹುಟ್ಟಿದ್ದು ಗುಜರಾತ್​ನ ವಡೋದರದಲ್ಲಿ. ಇಂಟರ್​ಸ್ಟಿಂಗ್​ ಏನಂದ್ರೆ ಸೋಫಿಯಾ ರಕ್ತದಲ್ಲೇ ದೇಶಸೇವೆಯ ಛಲವಿದೆ. ಯಾಕಂದ್ರೆ ಈ ಸೋಫಿಯಾ ಖುರೇಷಿ ಇಡೀ ಕುಟುಂಬ ಆರ್ಮಿ ಫ್ಯಾಮಿಲಿ. ಇವರ ಮನೆಯಲ್ಲಿರೋ ಪ್ರತಿಯೊಬ್ಬರು ದೇಶಕ್ಕಾಗಿ ಸೇವೆ ಸಲ್ಲಿಸಿದವರೇ. ಇದೇ ಕಾರಣಕ್ಕೆ ಇವತ್ತು ಸೋಫಿಯಾ ಖುರೇಷಿ ಕೂಡ ದೇಶ ಸೇವೆಯಲ್ಲಿ ತೊಡಗಿದ್ದು, ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡ್ತಿದ್ದಾರೆ.
ಸೋಫಿಯಾ ಖರೇಷಿ ಮೊಟ್ಟ ಮೊದಲ ಬಾರಿಗೆ ದೇಶದ ಗಮನ ಸೆಳೆದಿದ್ದು, 2016 ರಲ್ಲಿ. 2016ರ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನೆಯನ್ನ ಮುನ್ನಡೆಸಿ ಸೋಫಿಯಾ ಗಮನ ಸೆಳೆದಿದ್ರು, ಇದಾದ ಮೇಲೆ ಭಾರತದ ಮೊದಲ ಮಹಿಳಾ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದ ಖುರೇಷಿ, ಅತಿದೊಡ್ಡ ಮಿಲಿಟರಿ ಕವಾಯತಿನಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಅಧಿಕಾರಿಯಾಗಿದ್ದರು. ಭಾರತೀಯ ತಂಡದಲ್ಲಿ ಒಟ್ಟು 40 ಸದಸ್ಯರಿದ್ರೆ, ಈ ಪೈಕಿ ಖುರೇಷಿ ಒಬ್ಬರೇ ಮಹಿಳಾ ಅಧಿಕಾರಿಯಾಗಿದಿದ್ದು ಮತ್ತೊಂದು ಹೆಮ್ಮೆಯ ವಿಷಯ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.