ಪಾಸಿಟಿವ್ ಗೌತಮಿ ಮನೆಯಿಂದ ಹೊರಬನ್ನಿ ಎಂದು ಖಡಕ್ ಆಗಿ ಹೇಳಿದ ಸುದೀಪ್

 | 
Ho
ಬಿಗ್ ಬಾಸ್ ಸೀಸನ್ 11 ಕನ್ನಡ ಕಿರುತೆರೆ ಎದೆ ಬಡಿತ ಹೆಚ್ಚಿಸಿದೆ. ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇರುವಂತೆ ನಾಮಿನೇಷನ್ ಟೆನ್ಷನ್ ಹೊಸ ಟ್ವಿಸ್ಟ್ ಕೊಟ್ಟಿದೆ. ಬಿಗ್ ಬಾಸ್ ಮನೆಯಲ್ಲಿದ್ದ 8 ಸ್ಪರ್ಧಿಗಳಲ್ಲಿ ಇದೀಗ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು 7 ಸ್ಪರ್ಧಿಗಳು ಮಾತ್ರ.
ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಗೌತಮಿ ಜಾಧವ್ ಅವರು ಬಿಗ್​​ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದು, ವೀಕ್ಷಕರನ್ನು ರಂಜಿಸುವಲ್ಲಿ ಗೌತಮಿ ಯಶಸ್ವಿಯಾಗಿದ್ದರು. ನಿನ್ನೆಯ ಕಿಚ್ಚನ ಎಪಿಸೋಡ್​ನಲ್ಲಿ ಬಿಗ್​ಬಾಸ್ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ.
ಎಲಿಮಿನೇಟ್ ಆಗ್ತಿದ್ದಂತೆ, ವೇದಿಕೆಯಲ್ಲಿ ಕಿಚ್ಚ ಸುದೀಪ್​​ಗೆ ಗೌತಮಿ ಎದುರಾದರು. ಬರ್ತಿದ್ದಂತೆಯೇ ಸುದೀಪ್, ಎಲ್ಲಿ ತಪ್ಪು ಮಾಡಿದ್ರಿ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಗೌತಮಿ, ತಪ್ಪು ನನ್ನ ವ್ಯಕ್ತಿತ್ವ ಅನ್ಸುತ್ತೆ. ಮೊದಲು ಬಿಗ್​ಬಾಸ್ ಶೋಗೆ ಬರ್ತೀರಾ ಎಂದು ಕೇಳಿದಾಗ ‘ನಾನಾ’ ಎಂದು ಪ್ರಶ್ನೆ ಮಾಡಿದ್ದೆ.ಯಾಕೆಂದ್ರೆ ಹೊರಗಡೆ ಇರುವ ನನ್ನ ಪ್ರಪಂಚವೇ ಬೇರೆ ರೀತಿಯಲ್ಲಿ ಇತ್ತು. ಇಲ್ಲಿ ಪ್ರತಿಯೊಂದನ್ನೂ ನೋಡಿದ ತಕ್ಷಣ ಪ್ರಶ್ನೆ ಮಾಡಬೇಕಾಗಿತ್ತು. ಆದರೆ ನಾನು ಎದುರುಗಡೆ ಇರೋರ ಬಗ್ಗೆ ಯೋಚನೆ ಮಾಡ್ತೀನಿ. ಅದು ನನಗೆ ಪ್ಲಸ್ ಮತ್ತು ಮೈನಸ್ ಆಗಿದೆ ಅಂತಾ ಭಾವಿಸುತ್ತೇನೆ. ನನ್ನಲ್ಲಿರುವ ಧನಾತ್ಮಕ ವಿಚಾರ ಇಲ್ಲಿವರೆಗೆ ಕರೆದುಕೊಂಡು ಬಂದಿದೆ. ಒಂದೇ ಒಂದು ಮೈನಸ್​ನಿಂದ ಬಿಗ್​ಬಾಸ್​​ ಫಿನಾಲೆಗೆ ಹೋಗಲು ಸಾಧ್ಯವಾಗಲಿಲ್ಲ.
ನಾನಿಲ್ಲಿ ತುಂಬಾ ವಿಚಾರಗಳನ್ನು ಕಲಿತಿದ್ದೇನೆ. ನನ್ನ ಮುಂದಿನ ಬದುಕಿಗೆ ಅದು ಪಾಠವಾಗಲಿದೆ. ನಾನು ತುಂಬಾ ಯೋಚನೆ ಮಾಡುತ್ತಿದ್ದೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸರಿಯಾದ ಬೇಸ್​ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ನಾನು ಬಿಗ್​ಬಾಸ್​ಗೆ ಧನ್ಯವಾದ ಹೇಳುತ್ತೇನೆ. ಅವಕಾಶ ಮಾಡಿಕೊಟ್ಟ ಬಿಗ್​ಬಾಸ್​ ವೇದಿಕೆಗೆ ಚಿರಋಣಿ. ಎಲ್ಲೋ ಒಂದು ಕಡೆ ಕೂತು ಗೆಲುವಿಗಾಗಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.