ಶ್ರೀಕೃಷ್ಣ ಕಷ್ಟಪಟ್ಟು ಕಟ್ಟಿದ ದ್ವಾರಕ ನಗರ ಈಗ ಹೇ.ಗಿದೆ ಗೊ ತ್ತಾ; ಬಂಗರದ ಅರಮನೆ

 | 
RT uk

ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದರೆ ಅದು ರಾಮಾಯಣ, ಮಹಾಭಾರತ. ನಿಜವಾಗಲು ಆ ಪುಸ್ತಕಗಳು ಒಬ್ಬ ವ್ಯಕ್ತಿ ಮಧ್ಯಮದಿಂದ ಉತ್ತಮನಾಗಲು ಯಾವ ಗುಣಗಳನ್ನು ಹೊಂದಿರಬೇಕು ಎಂಬ ಮಾರ್ಗದರ್ಶನಗಳನ್ನು ಆ ಎರಡು ಪವಿತ್ರ ಗ್ರಂಥಗಳು ಮಾಡುತ್ತವೆ. ಕೆಲವರು ರಾಮಾಯಣ, ಮಹಾಭಾರತವನ್ನು ಕಾಲ್ಪನಿಕ ಕತೆ ಎಂದು ಹೇಳುತ್ತಾರೆ.ಆದರೆ ಹಿಂದೆ ಮಹಾಭಾರತ ಹಾಗೂ ರಾಮಾಯಣದ ಕತೆಗಳು ನಿಜವಾಗಿ ನಡೆದಿತ್ತು ಎಂಬುವುದಕ್ಕೆ ಈಗಲೂ ಹಲವಾರು ಸಾಕ್ಷಿಗಳು ದೊರೆಯುತ್ತದೆ.

ರಾಮನ ಕಥೆಯಲ್ಲಿ ಬರುವ ಅನೇಕ ಕುರುಹುಗಳು ಕಾಣುವಂತೆ ಶ್ರಿ ಕೃಷ್ಣನ ಕಥೆಗೆ  ಪ್ರಮುಖ ಸಾಕ್ಷಿ ದ್ವಾರಕಾ ನಗರ. ಈ ದ್ವಾರಕಾ ನಗರ ಈಗಲೂ ಇದೆ, ಆದರೆ ಆಳ ಸಮುದ್ರದಲ್ಲಿ ಮುಳುಗಿ ಹೋಗಿದೆ, ಇದೀಗ ಪ್ರಧಾನಿ ಮೋದಿ ಆಳವಾದ ನೀರಿನಲ್ಲಿ ಸ್ಕೂಬಾ ಡೈವ್ ಮಾಡಿ ದ್ವಾರಕಾಧೀಶ ದೇವಾಲಯಕ್ಕೆ ಭಾನುವಾರ ಪ್ರಾರ್ಥನೆ ಸಲ್ಲಿಸಿದರು. ನಂತರ ದೈವಿಕ ಅನುಭವ ಎಂದು ಕೂಡ ಬಣ್ಣಿಸಿದ್ದಾರೆ.

ದ್ವಾರಕಾ ಶ್ರೀಕೃಷ್ಣನ ನಗರ, ಈ ನಗರದ ಬಗ್ಗೆ ಪುರಾತತ್ವ ಶಾಸ್ತ್ರಜ್ಞರು ಸಾಕಷ್ಟು ಬರಹ ಬರೆದಿದ್ದಾರೆ, ಆದರೆ ಅದನ್ನು ನೋಡುವ ಸೌಭಾಗ್ಯ ಪ್ರಧಾನಿಯವರಿಗೆ ಸಿಕ್ಕಿದೆ. ನಾನಿಂದು ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡಿದೆ. ಅದೀಗ ನೀರಿನಲ್ಲಿ ಮುಳುಗಿದೆ, ಆ ದೇವಾಲಯವನ್ನು ದರ್ಶನ ಮಾಡಿದ ಕ್ಷಣ ಪುರಾತನ ಕಾಲಕ್ಕೆ ಮರಳಿದೆ, ಭಕ್ತಿ ಭಾವ ನನ್ನಲ್ಲಿ ಉಕ್ಕಿ ಬಂತು, ಭಗವಂತ ಶ್ರೀ ಕೃಷ್ಣನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹೇಳಿದ್ದಾರೆ.

ದ್ವಾರಕಾ ನಗರ ನಿರ್ಮಾಣವಾಗಿದ್ದು ದ್ವಾಪರ ಯುಗದಲ್ಲಿ. ಸುಮಾರು 5000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಡೆಯಾಗಿದೆ. ಈ ದ್ವಾರಕಾ ನಗರದ ಅವಶೇಷಗಳು ಈಗಲೂ ಇದೆ ಎಂದು ಹೇಳಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಇಲ್ಲಿಯ ದೇವಾಲಯದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯುವ ಮೂಲಕ ಮತ್ತೆ ದ್ವಾರಕಾ ನಗರ ಟ್ರೆಂಡ್‌ನಲ್ಲಿದೆ.

ಪುರಾತನ ನಗರಗಳಲ್ಲಿ ಈ ದ್ವಾರಕಾ ನಗರವೂ ಒಂದಾಗಿದೆ. ಇದು ಶ್ರೀಕೃಷ್ಣನ ಚಾರ್‌ಧಾಮಗಳಲ್ಲಿ ಒಂದಾಗಿದೆ. ಕೃಷ್ಣನು ಮಥುರೆಯಲ್ಲಿ ಯುದ್ಧವನ್ನು ಪರಿತ್ಯಜಿಸಿ ಮಥುರಾದಿಂದ ಬಿಟ್ಟು ದ್ವಾರಕೆಗೆ ಬಂದು ನೆಲೆಸಿದನು. ಇದು ಒಕಾ ಮಂದಿರಿನ ಸಮೀಪದಲ್ಲಿದೆ. ಇಲ್ಲಿಯ ಶ್ರೀ ಕೃಷ್ಣ ತನ್ನ ಜೀವನದ ಉಳಿದ ಸಮಯವನ್ನು ಕಳೆದನು, ಶ್ರೀ ಕೃಷ್ಣನ ಈ ಭೂಮಿ ವಾಸ ಅಂತ್ಯವಾದ ಬಳಿಕ ಈ ನಗರ ಮುಳುಗಿತು ಎಂದು ಹೇಳಲಾಗುವುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.