ಟ್ರೋಫಿ ಗೆದ್ದ ಕಾರ್ತಿಕ್ ಬಗ್ಗೆ ವಿನಯ್ ಖಡಕ್ ಮಾತು, ಮಾಧ್ಯಮಗಳ ಮುಂದೆ ರಣರಂಗ

 | 
ಕ

ಬಿಗ್ ಬಾಸ್​ ಕನ್ನಡ ಸೀಸನ್ 10 ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆಗಳು ಕಡಿಮೆ ಆಗಿದ್ದು ಕಾಂಪಿಟೇಷನ್ ಹೆಚ್ಚಿದೆ. ಈ ನಡುವೆ ವಾರದ ಕಥೆ ಕಿಚ್ಚನ ಜೊತೆಯ ಎಪಿಸೋಡ್​ನಲ್ಲಿ ಸಂಗೀತಾ ಶೃಂಗೇರಿ ಕಾರ್ತಿಕ್ ಮಹೇಶ್​ ಬಗ್ಗೆ ಆರೋಪಗಳ ಸುರಿಮಳೆ ಗೈದಿದ್ದಾರೆ. ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವುದು ಬೋರ್ಡ್​ ಅನ್ನು ಕಾರ್ತಿಕ್ ಮಹೇಶ್​ಗೆ ಕೊಟ್ಟ ಸಂಗೀತಾ, ಕಾರ್ತಿಕ್​ಗೆ ಸಿಕ್ಕಾಪಟ್ಟೆ ಅಹಂಕಾರ ಜಾಸ್ತಿ ಎಂದಿದ್ದಾರೆ. 

ಬೋರ್ಡ್​ ತೆಗೆದುಕೊಂಡು ಮಾತಾಡಿದ ಕಾರ್ತಿಕ್ ಮಹೇಶ್​, ತಾವು ಹೇಳಿದ್ದೆ ನಡೀಬೇಕು ಎನ್ನುವವರು ಅವರು, ಸಂಗೀತಾದಿಂದ ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವ ಪುಸ್ತಕ ಬರೆಯಬಹುದು ಎಂದು ಕಾರ್ತಿಕ್ ಹೇಳಿದ್ರು. ಇನ್ನು ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ ಎನ್ನುವ ಬೋರ್ಡ್ ಅನ್ನು ಡ್ರೋನ್ ಪ್ರತಾಪ್​, ವಿನಯ್ ಗೌಡಗೆ ನೀಡಿದ್ದಾರೆ. ಇದು ಅವರಿಗೆ ಸೂಕ್ತ ಎಂದು ನನಗೆ ಅನಿಸಿತು ಎಂದ್ರು. 

ಅವರ ಜೊತೆ ಇದ್ದು ಅವರೇ ಸರಿ ಸರಿ ಎಂದವರೆಲ್ಲಾ ಮನೆಗೆ ಹೋದ್ರು. ಮನೆ ಬಿಟ್ಟವರ ಬೆಡ್​ಶೀಟ್​ ಎಲ್ಲಾ ಇವರ ಬೆಡ್​ಗೆ ಸೇರಿದೆ ಎಂದು ಡ್ರೋನ್ ಟಾಂಗ್ ಕೊಟ್ರು. ಇದೇ ವೇಳೆ ಡ್ರೋನ್ ಪ್ರತಾಪ್​ರನ್ನು ವಿನಯ್ ಕಣ್ಣಲ್ಲೇ ಗುರಾಯಿಸಿದ್ದಾರೆ. ಡ್ರೋನ್ ಮಾತು ಕೇಳಿ ವಿನಯ್ ಕೂಡ ಶಾಕ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಸ್ತಾದರು. ಪಾಪರೆಡ್ಡಿಪಾಳ್ಯ ಗ್ಯಾಂಗ್‌ ಮೆಂಬರ್‌ ನಮ್ರತಾಗೆ ಡ್ರೋನ್ ಪ್ರತಾಪ್ ಮಾತನ್ನ ಕೇಳಿ ನಗುವುದೋ, ಅಳುವುದೋ ಗೊತ್ತಾಗದೆ ಕುಳಿತಿದ್ದರು.