ದರ್ಶನ್ ಜೊತೆ ಪವಿತ್ರ ಗೌಡ ಯಾವ ಸಂಬಂಧ ಇಟ್ಟುಕೊಂಡಿದ್ದಾರೆ, ನೆಚ್ಚಿನ ದಾಸನಿಗೆ ಅನ್ಯಾಯ ಮಾಡಿದ್ದು ಯಾರು

 | 
H
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದ ಪವಿತ್ರಾ ಗೌಡ ವಿರುದ್ಧ ವಿಜಯಲಕ್ಷ್ಮಿ ಸಿಡಿದೆದ್ದಿದ್ದರು. ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದರು. ಆದ್ರೀಗ ದರ್ಶನ್ ಪತ್ನಿಯ ವಾರ್ನಿಂಗ್​​ಗೆ ಪವಿತ್ರಾ ಗೌಡ ರಿವರ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ಬರೀ ವಾರ್ನ್​ ಮಾಡಿದ್ದಷ್ಟೇ ಅಲ್ಲ, ದರ್ಶನ್ ಜೊತೆಗಿನ 10 ವರ್ಷದ ಗುಟ್ಟನ್ನ ರಟ್ಟು ಮಾಡಿದ್ದಾರೆ.
ಸ್ಯಾಂಡಲ್​ವುಡ್​ ಬಾಸ್, ಬಾಕ್ಸಾಫೀಸ್​ ಸುಲ್ತಾನ, ಡಿ ಬಾಸ್ ಅಂತೆಲ್ಲಾ ಕರೆಸಿಕೊಳ್ಳುವ ನಟ ದರ್ಶನ್​ಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ. ಡಿಸೆಂಬರ್ ಅಂತ್ಯದಲ್ಲಿ ತೆರೆಗೆ ಬಂದ ಕಾಟೇರ ಸಿನಿಮಾ ದೊಡ್ಡ ಯಶಸ್ಸು ಕಂಡಿದ್ದು ಬಾಕ್ಸಾಫೀಸ್​ನಲ್ಲೂ ರೆಕಾರ್ಡ್​ ಕಲೆಕ್ಷನ್ ಮಾಡಿದೆ. ದರ್ಶನ್ ಆ್ಯಕ್ಟಿಂಗ್​, ಮೇಕಿಂಗ್, ಕಥೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ದರ್ಶನ್​ ಪಾಲಿಗೆ ಕಾಟೇರ ದೊಡ್ಡ ಬ್ರೇಕ್ ಕೊಟ್ಟಿದೆ. 
ತುಂಬಾ ವರ್ಷದ ನಂತರ ದರ್ಶನ್​ ಅವರಿಗೆ ಇಷ್ಟು ದೊಡ್ಡ ಗೆಲುವು ಸಿಕ್ಕಿದ್ದು, ಈ ಗೆಲುವನ್ನ ಸಂಭ್ರಮಿಸುಸ್ತಿದ್ದಾರೆ. ಆದರೀಗ ಕಾಟೇರ ಗೆದ್ದ ಖುಷಿಯನ್ನ ಸಂಭ್ರಮಿಸಬೇಕಾದ ದರ್ಶನ್​ ಬಾಳಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ದರ್ಶನ್​ ತಮ್ಮ ಫ್ಯಾಮಿಲಿ ಜೊತೆ ಚೆನ್ನಾಗಿದ್ದಾರೆ ಅಂದುಕೊಂಡಿರುವಾಗಲೇ ಬಾಳಿನ ಬಂಡಿ ಮತ್ತೆ ಹಳಿ ತಪ್ಪುತ್ತಿದೆ ಎನ್ನುವ ಸೂಚನೆ ಸಿಕ್ಕಿದೆ.
ದರ್ಶನ್ ಪತ್ನಿ ಮತ್ತು ಪವಿತ್ರಾ ಗೌಡ ನಡುವಿನ ಈ ವಾಕ್ಸಾಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ದರ್ಶನ್ ಇಲ್ಲದೆ ಬದುಕಲು ಸಾಧ್ಯವಿಲ್ಲಾ ಎಂದು ಪವಿತ್ರ ಗೌಡ ಹೇಳಿದ್ದಾರೆ ಮತ್ತೊಂದೆಡೆ ನಟ ದರ್ಶನ್ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವ ಸಾಧ್ಯತೆನೂ ತೀರಾ ಕಡಿಮೆ. ಸದ್ಯಕ್ಕೆ ಪವಿತ್ರಾ ಗೌಡ ಅವರ ಈ ಪೋಸ್ಟ್​ಗೆ ವಿಜಯಲಕ್ಷ್ಮಿ ಏನ್ ರಿಯಾಕ್ಟ್​ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.