ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಪಿರಿಯಡ್ಸ್ ಇದ್ದರೂ ಬಿಡುತ್ತಿರಲಿಲ್ಲ
Jan 20, 2025, 10:40 IST
|

ಬಹು ಭಾಷಾ ನಟಿಯಾಗಿ ಮಿಂಚಿರುವ ನಿತ್ಯಾ ಮೆನನ್ಗೆ ಅಭಿಮಾನಿ ಬಳಗವಿದೆ. ಆದರೆ, ಅವರು ಆಯ್ದ ಪಾತ್ರಗಳನ್ನು ಮಾಡುತ್ತಿದ್ದಾರೆ. ನಾಯಕಿಯಾಗಿ ನಿತ್ಯಾ ಮೀನನ್ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗಗಳಲ್ಲೂ ಸಕ್ರಿಯರಾಗಿದ್ದಾರೆ.ಮೈನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿಗೆ ಬಮದ ನಿತ್ಯಾ ಮೆನನ್, ಇದಕ್ಕೂ ಮುನ್ನ ತೆಲುಗು ಸಿನಿಮಾ ರಂಗದ ‘ಅಲಾ ಮೊದಲೈಂದಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ತೆಲುಗಿನಲ್ಲಿ ಅವರಿಗೆ ಮೊದಲ ಚಿತ್ರದ ಯಶಸ್ಸಿನಿಂದ ಹಲವು ಅವಕಾಶಗಳು ಒದಗಿಬಂದವು. ಪವರ್ ಸ್ಟಾರ್ ಪವನ್ ಕಲ್ಯಾಣ್, ಎಂಟಿಆರ್, ನಾನಿ ಮುಂತಾದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಅವ ರೊಂದಿಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.ತೆಲುಗಿನ ಜೊತೆಗೆ ತಮಿಳು ಮತ್ತು ಮಲಯಾಳ ಚಿತ್ರಗಳಲ್ಲೂ ನಟಿಸಿ ಖ್ಯಾತಿ ಗಳಿಸಿರುವ ನಿತ್ಯಾ ಇನ್ನೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಧನುಷ್ ನಿರ್ದೇಶನದ ‘ಇಡ್ಲಿ ಕಡೈ’ ಚಿತ್ರದಲ್ಲೂ ನಟಿಸಲಿದ್ದಾರೆ.
ಡಿಯರ್ ಎಕ್ಸ್ ಚಿತ್ರದ ಜೊತೆಗೆ ವಿಜಯ್ ಸೇತುಪತಿ ಜೊತೆಗಿನ ಮತ್ತೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಯಾವುದೇ ಅತಿರೇಕದ ಪಾತ್ರಗಳನ್ನು ಮಾಡದೆ ತೆಲುಗು ಸ್ಥಳೀಯ ಹುಡುಗಿಯ ಪಾತ್ರಗಳಿಗೆ ಹೆಸರಾಗಿರುವ ನಿತ್ಯಾ ಯಾವುದೇ ಪಾತ್ರವನ್ನಾದರೂ ಸವಾಲಾಗಿ ಸ್ವೀಕರಿಸುತ್ತಾರೆ. ಮನಸ್ಸಿನಲ್ಲಿ ಏನನ್ನೂ ಮರೆಮಾಡದೆ ಮಾತನಾಡುವ ನಿತ್ಯಾ ಇತ್ತೀಚೆಗೆ ಆಗಾಗ್ಗೆ ವಿವಾದಗಳಲ್ಲಿ ಸಿಲುಕುತ್ತಿದ್ದಾರೆ. ಈಗ, ಸಿನಿಮಾ ರಂಗದ ಬಗ್ಗೆ ಅವರು ಮಾಡಿದ ಕಾಮೆಂಟ್ಗಳು ವೈರಲ್ ಆಗಿವೆ.
ನಿತ್ಯಾ ಮೆನನ್ ಮಾತನಾಡುತ್ತಾ, ಚಿತ್ರ ನಿರ್ಮಾಪಕರು ತಮ್ಮ ತಂಡದವರ ಅನಾರೋಗ್ಯದ ಬಗ್ಗೆ ಅಥವಾ ನಟಿಯರು ಮಾಸಿಕ ಪಿರಿಯಡ್ಸ್ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದರೂ ಲೆಕ್ಕಿಸುವುದಿಲ್ಲ. ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತಾರೆ. 'ಚಿತ್ರರಂಗದಲ್ಲಿ ಹಲವು ಕಡೆ ಅಮಾನವೀಯತೆ ಇದೆ.
ಚಿತ್ರೀಕರಣದ ವೇಳೆ ನಟರು, ಸಹ ನಟರು ಎಷ್ಟೇ ಅಸ್ವಸ್ಥರಾಗಿದ್ದರೂ, ಎಷ್ಟೇ ಕಷ್ಟವಿದ್ದರೂ ಚಿತ್ರೀಕರಣಕ್ಕೆ ಬರಬೇಕೆಂದು ನಿರ್ಮಾಪಕರು ಮತ್ತು ನಿರ್ದೇಶಕರು ಬಯಸುತ್ತಾರೆ. ನಾವು ಅದಕ್ಕೆ ಹೊಂದಿಕೊಂಡಿದ್ದೇವೆ. ಏನೇ ಆಗಲಿ, ನಾವು ಕಷ್ಟಪಡಲೇಬೇಕು ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.