ಶಿವಣ್ಣ ಹಾಗೂ ಸುದೀಪ್ ನಡುವೆ ವೈಮನಸ್ಸು, ಇಬ್ಬರ ನಡುವೆ ಹುಳಿ ಹಿಂಡಿದ್ಯಾರು
Jun 12, 2025, 18:39 IST
|

ಆದರೆ, ಯಾವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಇತ್ತು ಎಂದು ರಿವೀಲ್ ಆಗಿರಲಿಲ್ಲ. ಈ ಬಗ್ಗೆ ನಟ ಶಿವರಾಜ್ಕುಮಾರ್ ಮೌನ ಮುರಿದಿದ್ದಾರೆ. ಕಿಚ್ಚ ಸುದೀಪ್ ಜೊತೆಗಿನ ಮನಸ್ತಾಪದ ಬಗ್ಗೆ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.ಶಿವಣ್ಣ, ಸುದೀಪ್ ಅವರು ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡಬೇಕು ಎಂದು ತುಂಬಾ ದಿನಗಳಿಂದ ಹೇಳ್ತಿದ್ರು.
ಆದ್ರೆ ಕೊನೆಗೂ ಅದು ಟೇಕಾಫ್ ಆಗಲೇ ಇಲ್ಲ. ಆ ಬಳಿಕ ನಾನು ಸುದೀಪ್ ಸೇರಿ ವಿಲನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ಮೊದಲಿಗೆ ನಾವಿಬ್ಬರೂ ಒಂದು ಸಿನಿಮಾ ಮಾಡಬೇಕು ಅನ್ನೋದು ಇತ್ತು ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ನಾವಿಬ್ಬರೂ ಭೇಟಿಯಾದಾಗ ತುಂಬಾ ಚೆನ್ನಾಗಿಯೇ ಮಾತನಾಡುತ್ತೇವೆ. ನಮ್ಮಿಬ್ಬರ ನಡುವೆ ಆ ಒಡನಾಟ ಈಗಲೂ ಇದೆ ಎಂದಿದ್ದಾರೆ.
ಸುದೀಪ್ ಅವರಿಗೆ ಮೊದಲಿನಿಂದಲೂ ನಮ್ಮ ಮೇಲೆ ಒಂದು ರೀತಿಯ ಪ್ರೀತಿ ಇದೆ. ನನ್ನ ಪತ್ನಿ ಗೀತಾ ಅವರನ್ನ ಕಂಡರೆ, ಸುದೀಪ್ಗೆ ಬಹಳ ಅಭಿಮಾನ. ಅದೇ ರೀತಿ ನನ್ನ ಮೇಲೂ ಅದೇ ಪ್ರೀತಿ ತೋರುತ್ತಾರೆ. ಆದರೆ, ಒಂದು ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ನಡೆದೇ ನಡೆಯುತ್ತೆ. ಅದೆಲ್ಲ ಬಂದು ಹೋಗುತ್ತೆ. ಅದೇ ವಿಚಾರವನ್ನ ಇಟ್ಟುಕೊಂಡು ವೈರತ್ವ ಬೆಳೆಸುವುದೇನಿಲ್ಲ. ಸುದೀಪ್ ಕೂಡ ಆ ರೀತಿ ಇಲ್ಲ ಎಂದು ಶಿವಣ್ಣ ಸ್ಪಷ್ಟನೆ ನೀಡಿದ್ದಾರೆ.
ನಾನು ಕ್ಯಾನ್ಸರ್ ಆಪರೇಷನ್ಗೆ ಹೋಗುವ ಮುನ್ನ ನನ್ನ ನೋಡಲು ಬಂದಾಗಲೂ ಸುದೀಪ್ ತುಂಬಾ ಎಮೋಷನಲ್ ಆಗಿದ್ದರು. ಆ ಮೇಲೆ ನೀವು ಮತ್ತೆ ಬರ್ತೀರಿ ಶಿವಣ್ಣ ಎಂದು ನನಗೆ ಧೈರ್ಯ ತುಂಬಿ ಕಳಿಸಿದ್ರು. ನಮ್ಮ ಒಡನಾಟ ಹಾಗೆಯೇ ಇದೆ. ನಮ್ಮ ಮನೆಗೆ ಸುದೀಪ್ ಬಂದು ಭೇಟಿಯಾಗುತ್ತಿರುತ್ತಾರೆ. ಅವರು ಮನೆಗೆ ಬಂದಾಗಲೂ ನಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿಯೇ ಇದೆ. ನಾನು ಸುದೀಪ್ ಕರ್ನಾಟಕ ಚಲನಚಿತ್ರ ಕಪ್ ಮಾಡಿದ್ದಿ, ಅದಂತೂ ಬಹಳ ಅದ್ಭುತವಾಗಿತ್ತು. ಅದನ್ನು ಇಬ್ಬರೂ ತುಂಬಾ ಎಂಜಾಯ್ ಮಾಡಿದೆವು ಎಂದು ಶಿವಣ್ಣ ಸುದೀಪ್ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025