ಡಿವೋರ್ಸ್ ಆದ ಒಂದೇ ವಾರದಲ್ಲಿ ಸಿಹಿಸುದ್ದಿ ಕೊಟ್ಟ ಚಂದನ್ ಶೆಟ್ಟಿ; ನಿವೇದಿತಾ ಶಾ ಕ್
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಚಂದನ್ ಸಂದರ್ಶನವೊಂದರಲ್ಲಿ ನಮ್ಮ ತಂದೆ-ತಾಯಿ ದಾಂಪತ್ಯ ನೋಡಿ ಅವರಂತೆ ನಾವು ಬದುಕಬೇಕು ಎನ್ನುವುದು ಈ ಜನರೇಷನ್ಗೆ ಸಾಧ್ಯವಿಲ್ಲ.
ಎಲ್ಲವೂ ಬದಲಾಗಿದೆ.ಎಂದು ಹೇಳಿಕೊಂಡಿದ್ದಾರೆ. ಇನ್ನು
ಸಂದರ್ಶನದಲ್ಲಿ ಚಂದನ್ ಶೆಟ್ಟಿ ಮತ್ತೆ ಮದುವೆ ಆಗ್ತಾರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ. ಸದ್ಯಕ್ಕೆ ಆ ಪ್ಲ್ಯಾನ್ ಇಲ್ಲ. ನನ್ನ ಸಾಧನೆ ಕಡೆ ಗಮನ ಕೊಡಬೇಕು. ಅಷ್ಟು ಫಾಸ್ಟ್ ಇಲ್ಲ ನಾನು. ಇದೇನು ಕಾರ್ ತೆಗೆದುಕೊಂಡಂತೆ ಅಲ್ಲ. ಸ್ವಲ್ಪ ಸಮಯ ಬೇಕು ಎಂದಿದ್ದಾರೆ.
ಹಾಗೇ ಡಿವೋರ್ಸ್ ಕುರಿತಾಗಿ ಮಾತನಾಡಿ ನಿವೇದಿತಾ ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ ಆದ್ವಿ. ಒಂದು ವರ್ಷದ ಹಿಂದೆ ಭಿನ್ನಾಭಿಪ್ರಾಯ ಇತ್ತು. ನಮ್ಮ ತಂದೆ-ತಾಯಿ ದಾಂಪತ್ಯ ನೋಡಿ ಅವರಂತೆ ನಾವು ಬದುಕಬೇಕು ಎನ್ನುವುದು ಈ ಜನರೇಷನ್ಗೆ ಸಾಧ್ಯವಿಲ್ಲ. ಬಹಳ ಬದಲಾಗಿದೆ. ಆಗೆಲ್ಲ ನನ್ನ ತಾಯಿ ಹೌಸ್ವೈಫ್ ಆಗಿದ್ದರು. ಹಾಗೇ ಈಗ ಎಲ್ಲ ಹೆಣ್ಣು ಮಕ್ಕಳು ಇಂಡಿಪೆಂಡೆಂಟ್ ಆಗಿದ್ದಾರೆ. ನಿವೇದಿತಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ದುಡಿಯುತ್ತಿದ್ದಾರೆ.ನಿಹೀಗಿರುವಾಗ ಆಕೆಗೆ ಮನೆ ಜವಾಬ್ದಾರಿ ತಗೋ ಎಂದು ಹೇಳೋಕ್ಕಾಗಲ್ಲ ಎಂದರು.
ಹಾಗೇ ಈಗ ಪ್ರಪಂಚ ಚೇಂಜ್ ಆಗಿದೆ. ನಾವು ಹೆಣ್ಣು ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಬೈಯ್ಯುವಂತಿಲ್ಲ. ದೌರ್ಜನ್ಯ, ದಬ್ಬಾಳಿಕೆ ಮಾಡೋಕ್ಕಾಗಲ್ಲ. ನಾನು ನಿವೇದಿತಾ ಬಳಿಕ ಇಬ್ಬರೂ ಒಪ್ಪಿ ಒಬ್ಬರೇ ವಕೀಲರ ಬಳಿ ಹೋದ್ವಿ. ಅವರು ಕೌನ್ಸಲಿಂಗ್ ಮಾಡಿದ್ರು. ಆದರೂ ಸಾಧ್ಯವಾಗಲಿಲ್ಲ. ಬಳಿಕ ಡಿವೋರ್ಸ್ ಅರ್ಜಿ ಹಾಕಿದ ಮರುದಿನವೇ ಡಿವೋರ್ಸ್ ಸಿಕ್ತು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.