ಮುಸ್ಲಿಂ ಹುಡುಗರನ್ನು ಬಿಟ್ಟು ಹಿಂದೂಗಳನ್ನು ಮದುವೆಯಾಗಿ ಎಂದ ನಾಝಿಯಾ ಖಾನ್
Jan 23, 2025, 21:28 IST
|

ಮುಸ್ಲಿಂ ಮಹಿಳೆಯರು ತಮ್ಮ ಪತಿಗೆ ತಲಾಖ್ ಕೊಟ್ಟು ಹಿಂದೂ ಧರ್ಮಕ್ಕೆ ಸೇರಿಕೊಳ್ಳಲಿ. ಅವರನ್ನು ಹಿಂದೂ ಹುಡುಗನೊಂದಿಗೆ ವಿವಾಹ ಮಾಡಿ ಸಿಂಧೂರ ಹಚ್ಚಿ ಬೋನಸ್ನಲ್ಲಿ ಹನಿಮೂನ್ಗೂ ಕಳುಹಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ನಾಜಿಯಾ ಇಲಾಯಿ ಖಾನ್ ಮುಸ್ಲಿಂ ಮಹಿಳೆಯರಿಗೆ ಆಹ್ವಾನ ನೀಡಿದ್ದಾರೆ.
ತಾಲೂಕಿನ ಸುಳೇಭಾವಿ ಗ್ರಾಮದ ಯದ್ದಲಭಾವಿ ಹಟ್ಟಿ ರಸ್ತೆಯಲ್ಲಿರುವ ಹುಲಿಯಮ್ಮನ ತೋಟದಲ್ಲಿ ಧನಂಜಯ ಜಾಧವ ಪರಿವಾರ ವತಿಯಿಂದ ಭಾನುವಾರ ನಡೆದ ಧರ್ಮ ರಕ್ಷಣೆಗಾಗಿ ಹಿಂದೂಗಳ ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರು ಹಿಂದೂ ಧರ್ಮಕ್ಕೆ ಬಂದರೆ ಸಪ್ತಪದಿ ತುಳಿದು, ಏಳೇಳು ಜನ್ಮದ ಬದುಕಿನ ಭರವಸೆ ನೀಡಿ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೇವೆ.
ಆ ಲುಂಗಿಸಾಬ್ನನ್ನು ಬಿಟ್ಟು ಹಿಂದೂ ಧರ್ಮಕ್ಕೆ ಬಂದರೆ ನಿಮಗೆ ಮದುವೆ ಮಾಡಿ ಹನಿಮೂನ್ಗೆ ಕಳುಹಿಸಿ, ಸಿಂಧೂರ ನೀಡಿ ಸುರಕ್ಷಿತವಾಗಿ ನೋಡಿಕೊಳ್ಳುವ ಮೂಲಕ ಸ್ವಾಭಿಮಾನದಿಂದ ಸ್ವಾಗತಿಸಿಕೊಳ್ಳುತ್ತೇವೆ ಎಂದರು.ನಾನು ಮುಸ್ಲಿಂ ಮಹಿಳೆಯಾಗಿದ್ದರೂ ಶ್ರೀರಾಮನನ್ನು ನಂಬುತ್ತೇನೆ ಹೊರತು ಅಲ್ಲಾಹನನ್ನು ನಂಬುವುದಿಲ್ಲ. ಕರ್ನಾಟಕದಲ್ಲಿ ಈಗ ಬಾಬರ್, ಔರಂಗಜೇಬ್ ಸರ್ಕಾರ ಇದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ನಾಜಿಯಾ ಇಲಾಯಿ ಖಾನ್ ಆರೋಪಿಸಿದರು.
ತಾಲೂಕಿನ ಸುಳೇಭಾವಿ ಗ್ರಾಮದ ಯದ್ದಲಭಾವಿ ಹಟ್ಟಿ ರಸ್ತೆಯಲ್ಲಿರುವ ಹುಲಿಯಮ್ಮನ ತೋಟದಲ್ಲಿ ಧನಂಜಯ ಜಾಧವ ಪರಿವಾರ ವತಿಯಿಂದ ಭಾನುವಾರ ನಡೆದ ಧರ್ಮ ರಕ್ಷಣೆಗಾಗಿ ಹಿಂದೂಗಳ ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸಜ್ಜಾದ್ ಮುಮಾನಿಯವರು ಕಾಂಗ್ರೆಸ್ಗೆ, ಉದ್ಧವ ಠಾಕ್ರೆಗೆ, ಓವೈಸಿಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ್ದಾರೆ.
ಹಿಂದೂ ಮಹಿಳೆಯರನ್ನು ಹೇಗೆ ವಂಚಿಸುವುದು, ಅತ್ಯಾಚಾರ ಮಾಡಬೇಕು ಎಂಬ ತರಬೇತಿ ನೀಡಲಾಗುತ್ತಿದೆ. ದೇಶದಲ್ಲಿ ವಕ್ಫ್ ಹೆಸರಲ್ಲಿ ಲ್ಯಾಂಡ್ ಜಿಹಾದ್ ಮಾಫಿಯಾ ನಡೆದಿದ್ದು, ಕುರಾನ್ನಲ್ಲಿ ಎಲ್ಲಿಯೂ ವಕ್ಫ್ ನ ನಮೂದು ಇಲ್ಲ. ಸಂವಿಧಾದಲ್ಲಿಯೂ ವಕ್ಫ್ ಬಗ್ಗೆ ಉಲ್ಲೇಖವಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.