ನನ್ನನ್ನು ಕರೆದು ಬೆ.ತ್ತಲೆಗೊಳಿಸಲು ಪ್ರಯತ್ನಿಸಿದರು, ಕೇರಳ ಜಿಲ್ಲಾಧಿಕಾರಿಯ ನೋವಿನ ಮಾ ತು

 | 
Bd

ಕೇರಳದ ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್.​ ಅಯ್ಯರ್​ ಅವರು ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಆರನೇ ವಯಸ್ಸಿನಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಮತ್ತು ಆ ನೋವಿನಿಂದ ಹೊರಬಂದಿದ್ದು ಹೇಗೆ ಎಂಬುದನ್ನು ದಿವ್ಯಾ ಅವರು ಬಹಿರಂಗಪಡಿಸಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಕುರಿತು ವರದಿ ಮಾಡುವಾಗ ಗಮನಿಸಬೇಕಾದ ಮುಖ್ಯ ಅಂಶಗಳ ಬಗ್ಗೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯಾ ಎಸ್.​ ಅಯ್ಯರ್​ ಉದ್ಘಾಟಿಸಿ ಮಾತನಾಡಿ, ತಮ್ಮ ಜೀವನದಲ್ಲಿ ನಡೆದ ಕರಾಳ ನೆನಪನ್ನು ಬಿಚ್ಚಿಟ್ಟರು.

ಆರನೇ ವಯಸ್ಸಿನಲ್ಲಿ ಕೆಟ್ಟ ಅನುಭವ ಎದುರಿಸಬೇಕಾಯಿತು. ಆ ಇಬ್ಬರು ದುರುಳರ ಮುಖಗಳು ನನಗೆ ಸರಿಯಾಗಿ ನೆನಪಿಲ್ಲ. ನನ್ನನ್ನು ಪ್ರೀತಿಯಿಂದ ಅವರ ಬಳಿಗೆ ಕರೆದು, ನನ್ನ ದೇಹವನ್ನು ಮುಟ್ಟಿದರು. ನನ್ನ ಬಟ್ಟೆಗಳನ್ನು ಕಳಚಿ, ಬೆತ್ತಲೆಗೊಳಿಸಲು ಯತ್ನಿಸಿದರು’ ಎಂದು ಹೇಳಿದ್ದಾರೆ.
ಏನೋ ಅನಿರೀಕ್ಷಿತ ಘಟನೆ ನಡೆಯುತ್ತಿದೆ ಎಂಬುದು ನನಗೆ ಅರ್ಥವಾದಾಗ ನಾನು ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು ಓಡಿ ಹೋದೆ. 

ಆ ಸಮಯದಲ್ಲಿ ನನಗೆ ಹಾಗೆ ಮಾಡಬೇಕೆಂದು ಅನಿಸಿತು. ಆದರೆ, ಎಲ್ಲ ಮಕ್ಕಳೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ದಿವ್ಯಾ ಹೇಳಿದರು. ಪಾಲಕರು ಮಾನಸಿಕವಾಗಿ ನನಗೆ ಬೆಂಬಲ ನೀಡಿದ್ದರಿಂದ ನಾನು ಆ ನೋವಿನಿಂದ ಹೊರಬರಲು ಸಾಧ್ಯವಾಯಿತು. ಆ ಬಳಿಕ ನಾನು ಜನಸಂದಣಿಯನ್ನು ಎದುರಿಸಿದಾಗ, ಆ ಎರಡು ಮುಖಗಳು ಇವೆಯೇ ಎಂದು ನೋಡಲು ನಾನು ಎಲ್ಲರನ್ನೂ ಎಚ್ಚರಿಕೆಯಿಂದ ನೋಡುತ್ತೇನೆ. ಇಂತಹ ಕರಾಳ ಘಟನೆಗಳು ಅಮಾಯಕ ಮಕ್ಕಳ ಜೀವನದ ಉದ್ದಕ್ಕೂ ಕಾಡುತ್ತವೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.