ದರ್ಶನ್ ಜೈಲಲ್ಲಿ‌ ರಾಜನಂತೆ ವಾಸ್ತವ್ಯ; ವಿನೋದ್ ಮಾತಿಗೆ ಸಿಡಿದೆ ದ್ದ ರಂಗಣ್ಣ

 | 
ಗಾ

ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಅರೆಸ್ಟ್ ಆಗಿ, ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿಗೆ ಹೋಗಿದ್ದಾರೆ. 12 ದಿನಗಳ ಕಾಲ ವಿಚಾರಣೆ ಮಾಡಿ, ಇದೀಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ದರ್ಶನ್ ಅವರನ್ನು ನೀಡಲಾಗಿದೆ. ಸದ್ಯ ಜೈಲಿನಲ್ಲಿರುವ ದರ್ಶನ್ ಅವರನ್ನು ನಟ ವಿನೋದ್ ಪ್ರಭಾಕರ್ ಭೇಟಿಯಾಗಿ, ಮಾತನಾಡಿಸಿಕೊಂಡು ಬಂದಿದ್ದಾರೆ. 
 
ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿನೋದ್ ಪ್ರಭಾಕರ್, "ರೇಣುಕಾ ಸ್ವಾಮಿ ಕುಟುಂಬಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಧೈರ್ಯವನ್ನು ಕೊಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಇದು ಆಗಬಾರದಾಗಿತ್ತು. ಎಲ್ಲರಿಗೂ ಗೊತ್ತಿರುವಷ್ಟೇ ನನಗೂ ಗೊತ್ತಿದೆ. ನಾಲ್ಕು ತಿಂಗಳ ಹಿಂದೆ ದರ್ಶನ್ ಸರ್ನ ಮೀಟ್ ಆಗಿದ್ದೆ. ಈ ಹಿಂದೆ ಪೊಲೀಸ್ ಸ್ಟೇಷನ್ಗೆ ಹೋಗಿ ಭೇಟಿಯಾಗಲು ಪ್ರಯತ್ನಿಸಿದ್ದೆ.

 ಆದರೆ ಆಗಿರಲಿಲ್ಲ. ಇಲ್ಲಿ ಭೇಟಿಯಾಗಿ ಬಂದಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು, ಮಂಕಾಗಿದ್ದರು. ಅವರು ಟೈಗರ್.. ಅಂದ್ರು. ನಾನು ಬಾಸ್.. ಅಂದೆ. ಕೆಲವೇ ಸೆಕೆಂಡ್ ಅಷ್ಟೇ ಅಲ್ಲಿದ್ದೆ. ನನಗೂ ಏನು ಮಾತನಾಡಬೇಕು ಎಂದು ಗೊತ್ತಾಗಲಿಲ್ಲ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ. ವಿನೋದ್ ಪ್ರಭಾಕರ್ ಬಂದಿಲ್ಲ, ಏನೂ ಹೇಳಿಕೆ ನೀಡಿಲ್ಲ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದನ್ನು ನೋಡಿದ್ದೇನೆ. 

ನಾನು ಪೋಸ್ಟ್ ಹಾಕಿದ್ರೆ ಈ ಸಮಸ್ಯೆಗಳೆಲ್ಲಾ ಬಗೆಹರಿಯತ್ತೆ ಅನ್ನೋದಾಗಿದ್ರೆ ನಾನೇ ಒಂದು ಲಕ್ಷ ಪೋಸ್ಟ್ಗಳನ್ನು ಹಾಕಿಬಿಡುತ್ತಿದ್ದೆ. ಇದು ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆ ಆಗುವಾಗ, ಅವರಿಗೂ ಯಾವುದೇ ತೊಂದರೆ ಆಗಬಾರದು. ನನಗೆ ಏನೂ ಕ್ಲಾರಿಟಿ ಗೊತ್ತಿರಲಿಲ್ಲ. ಅದಕ್ಕೋಸ್ಕರ ದರ್ಶನ್ ಅವರನ್ನು ಭೇಟಿಯಾಗುವವರೆಗೂ ಇದರ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. 

ಎಲ್ಲರಿಗೂ ನ್ಯಾಯ ಸಿಗಬೇಕು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲ ಒಳ್ಳೆಯದಾಗತ್ತೆ ಅಂತ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ವಿನೋದ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.