ಪಕ್ಕದ್ ಮನೆ ಯುವತಿಗೆ ಆಸೆ ಪಟ್ಟ ಯುವಕ, ಮಲಗಲು ಬಿಡದಿದ್ದಕ್ಕೆ ಆಕೆಯನ್ನು ಕೊ.ಲೆ ಮಾಡಿ ಏನು ಮಾಡಿದ್ದಾನೆ ಗೊತ್ತಾ

 | 
Bs

ನೆರೆ ಮನೆಯವನ ಕಾಮ ಕಾಟಕ್ಕೆ ಯುವತಿ ಒಬ್ಬಳು ಬಲಿಯಾಗಿದ್ದಾಳೆ. ಹೌದು ಇತ್ತೀಚಿಗೆ ಹೆಣ್ಣಾಗಿ ಹುಟ್ಟುವುದೇ ಅಪರಾಧ ಎನ್ನಿಸುವ ಸಂದರ್ಭಗಳು ಬಂದೊದಗುತ್ತಿವೆ. ಶುಕ್ರವಾರ ರಾತ್ರಿ ಕೊಲೆ ಮಾಡಿ ಬಳಿಕ ದೇಹವನ್ನು ಡ್ರಮ್ ವೊಂದರಲ್ಲಿ ಇಟ್ಟಿದ್ದ ಆರೋಪಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಮುಂದೆ ಬಿಸಾಡಿದ್ದ ಎನ್ನಲಾಗಿದೆ. ಧೂಳಿಲ್ಲದ ಪಾದ ನೋಡಿ ಪೊಲೀಸರು ಸಂಶಯಪಟ್ಟಿದ್ದು, ರಾತ್ರಿ ಹುಡುಗಿ ಮಿಸ್ಸಿಂಗ್ ಎಂದು ದೂರು ಬಂದಿತ್ತು. 

ಆದರೆ, ಯುವತಿಯ ಪಾದ ನೋಡಿ ಪೊಲೀಸರು ಹುಡುಗಿ ಹೊರಗಡೆ ಹೋಗಿಲ್ಲ ಅನ್ನೋದನ್ನ ಗಮನಿಸಿದ್ದಾರೆ. ಹಾಗಾಗಿ ಮನೆಯವರು ಅಥವಾ ಪಕ್ಕದ ಮನೆಯವರಿಂದ ಈ ಕೃತ್ಯ ನಡೆದಿದೆ ಎಂದು ಸಂಶಯ ವ್ಯಕ್ತವಾಗಿತ್ತು. ಪಕ್ಕದಲ್ಲೇ ಯಾರೋ ಕೊಲೆ ಮಾಡಿ ಶವ ಬಿಸಾಕಿರೋ ಅನುಮಾನ ವ್ಯಕ್ತವಾಗಿತ್ತು‌. ಈ ವೇಳೆ ಅಕ್ಕಪಕ್ಕದ ಮನೆಯವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೊಲೆಯಾದ ಮಹಾನಂದ ಎಂಬಾಕೆ ಪಕ್ಕದ ಮನೆಯಲ್ಲಿಯೇ ಇದ್ದ ಆರೋಪಿ ಕೃಷ್ಣ ನ‌ ಮನೆಗೆ ಹೋಗಿದ್ದನ ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಶವ ಪತ್ತೆಯಾಗಿ ಹಲವು ಗಂಟೆಗಳ ಕಾಲ ಕೃಷ್ಣ ಹೊರಗೇ ಬಂದಿರಲಿಲ್ಲ. ಈ ವೇಳೆ ತಮಗಿದ್ದ ಅನುಮಾನದ ಜೊತೆ ಮಗುವಿನ ಹೇಳಿಕೆ ಆಧರಿಸಿ ಕೂಡಲೇ ಆರೋಪಿ ಕೃಷ್ಣ ವಶಕ್ಕೆ ಪಡೆದಾಗ ವಿಚಾರ ಬಯಲಿಗೆ ಬಂದಿದೆ. ಒಡಿಶಾ ಮೂಲದ ಕೃಷ್ಣ ಚಂದ ಎಂಬಾತ ಸೇಟಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ, ಸ್ಟವ್ ಮೇಲೆ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಮನೆಯಿಂದ ಹೊರಗೆ ಬಂದಿದ್ದಾಳೆ. 

ಈ ವೇಳೆ ಕೃಷ್ಣನ ಮನೆಯ ಬಾಗಿಲ ಬಳಿ ಮಹಾನಂದ ಬಂದಾಗ ಅರೋಪಿ ಒಳಗೆ ಎಳೆದುಕೊಂಡಿದ್ದಾನೆ. ಯುವತಿಯನ್ನು ಬಲತ್ಕಾರ ಮಾಡಲು ಆರೋಪಿ ಯತ್ನಿಸಿ ಯುವತಿಗೆ ಬಲವಂತವಾಗಿ ಮುತ್ತು ನೀಡಲು ಮುಂದಾಗಿದ್ದು ಈ ವೇಳೆ ಯುವತಿ ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಭಯಗೊಂಡ ಕೃಷ್ಣ ಹಿಂಬದಿಯಿಂದ ಮೂಗು ಬಾಯಿ ಒಂದು ಕೈನಲ್ಲಿ ಮುಚ್ಚಿಕೊಂಡು ಮತ್ತೊಂದು ಕೈನಿಂದ ಕುತ್ತಿಗೆ ಹಿಸುಕಿದ್ದಾನೆ ಎನ್ನಲಾಗಿದೆ. 

ಈ ವೇಳೆ ಕಿರುಚಾಡಲು ಸಾದ್ಯವಾಗದೆ ಉಸಿರುಗಟ್ಟಿ ಯುವತಿ ಸಾವನಪ್ಪಿದ್ದಾಳೆ. ಕೊಲೆ ಬಳಿಕ ಮನೆಯ ಬೆಡ್ ಶೀಟ್ ನಲ್ಲಿ ಸುತ್ತಿ ಡ್ರಮ್ ನಲ್ಲಿ ಇಟ್ಟಿದ್ದ ಕೃಷ್ಣ ಮುಂಜಾನೆ ಮನೆ ಮುಂದೆ ಶವ ಬಿಸಾಡಿದ್ದ ಎನ್ನಲಾಗಿದೆ. ಸದ್ಯ ಅರೋಪಿ ಕೃಷ್ಣ ನನ್ನು ಬಂಧಿಸಿ ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.