ವರ್ತೂರು ಸಂತೋಷ್ ಅಂದರ್, ಒಮ್ಮೆಲೇ ರೊಚ್ಚಿಗೆದ್ದ ಪ್ರಥಮ್ ಹೇಳಿದ್ದೇನು ಗೊ.ತ್ತಾ

 | 
Hdhd

ಬಿಗ್​ಬಾಸ್  ಸೀಸನ್ 10ರ ಮನೆಯೊಳಗೆ ಇದ್ದ ರೈತ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರಿನ ಪೆಂಡೆಂಟ್  ಧರಿಸಿದ ಆರೋಪದ ಮೇಲೆ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ. ವರ್ತೂರ್ ಸಂತೋಷ್ ಬಂಧನ  ಪ್ರೇಕ್ಷಕರಿಗೂ ಶಾಕ್ ಕೊಟ್ಟಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದಾರೆ.

ಇನ್ನು ಈ ಕುರಿತಾಗಿ ಬಿಗ್​ಬಾಸ್​ 4ನೇ ಸೀಸನ್​ ವಿನ್ನರ್ ಪ್ರಥಮ್ ಅವರು ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಪ್ರಕರಣದಲ್ಲಿ ಸಂತೋಷ್ ಅವರ ಬಂಧನವಾಗಿಲ್ಲ, ಅವರನ್ನ ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ರೆ ಅವರು ಧರಿಸಿದ್ದು ಓರಿಜನಲ್ ಹುಲಿ ಹುಲಿ ಉಗುರು ಅಂತ ಅವರಿಗೆ ಏನ್ ಗೊತ್ತು?, ಎಫ್​ಎಸ್​ಎಲ್ ವರದಿ ಬಂದ ಮೇಲೆ ಅದು ಗೊತ್ತಾಗಲಿದೆ. 

ಈ ಪ್ರಕರಣದಿಂದ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಏನು ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಕಂಟೆಸ್ಟೆಂಟ್​ಅನ್ನು ಬಿಗ್ ಬಾಸ್ ಒಳಗೆ ಹೋಗಾಬೇಕಾದರೆ ಪರಿಶೀಲನೆ ಮಾಡಿ ಕಳುಹಿಸಲಾಗುತ್ತದೆ ಎಂದಿರುವ ಪ್ರಥಮ್, ವರ್ತೂರ್ ಸಂತೋಶ್ ಅವರು ಮತ್ತೆ ಬಿಗ್​ ಬಾಸ್​ ಮನೆಗೆ ಪ್ರವೇಶಿಸುತ್ತಾರಾ ಎನ್ನುವುದನ್ನ ಪ್ರಕರಣದ ಗಂಭೀರತೆ ನಿರ್ಧರಿಸಲಿದೆ. ಆದರೆ ಸದ್ಯಕ್ಕೆ ಸಂತೋಷ್ ಆಡಿಯನ್ಸ್ ವೋಟ್ ಪಡೆಯಲು ಅರ್ಹರಲ್ಲ. 

ಸಂತೋಷ ಮತ್ತೆ ಒಳಗೆ ಹೋಗೊದು ಕಾನೂನು ಪ್ರಕ್ರಿಯೆ ನಂತರ ತಿಳಿಸಯಲಿದೆ ಎಂದು ತಿಳಿಸಿದ್ದಾರೆ.
ಬಿಗ್​ ಬಾಸ್​ ಮನೆಯೊಳಗೆ ಹೋಗಿದ್ದ ಪ್ರಥಮ್ ಅಲ್ಲಿ ಸಂತೋಷ್​ ಜೊತೆ ತಾವೂ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. ನಾನು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದೆ, ಅದ್ರೆ ಸಂತೋಷ್ ಜೊತೆ ಮಾತನಾಡಿರಲಿಲ್ಲ ನಾನೊಬ್ಬ ಲಾರ್ಡ್ ಪ್ರಥಮ್ ಆಗಿ ನಾನು ಅವರ ಜೊತೆ ಮಾತನಾಡಿದ್ದಷ್ಟೇ. 

ನಾನು ಅವರು ಧರಿದಿದ್ದ ಚಿನ್ನ ಓರಿಜಿನಲ್ಲಾ ಎಂಬುವುದನ್ನೂ ಬೇರೆಯವರ ಕೇಳಿ ತಿಳಿದುಕೊಂಡಿದ್ದೆ. ಅದರೆ ಅವರು ಧರಿಸಿದ್ದ ಹುಲಿ ಉಗುರಿನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಎಂದು ಪ್ರಥಮ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.