ಅವತ್ತು ದರ್ಶನ್ ಬಗ್ಗೆ ಗರಂ ಆಗಿದ್ದ ರಂಗಣ್ಣ ಇವತ್ತು ಹೇಳಿದ್ದೇನು ಗೊತ್ತಾ

ನಮ್ಮ ಚಂದನವನದಲ್ಲಿ ಕುಚಿಕು ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಸಾಹಸಿಂಹ ವಿಷ್ಣುವರ್ಧನ್ ಅಂತ ಹೇಳ್ತಿದ್ರು. ಅವ್ರ ನಂತರ ಸ್ಯಾಂಡಲ್ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಒಂದು ಕ್ಷಣನು ಯೋಚ್ನೆ ಮಾಡ್ದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು ಕನ್ನಡಿಗರು.
ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಅಂತರ ಬೆಳೆಯುತ್ತಲೇ ಹೋಯ್ತು. ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು ದೂರ ಹೋಗಿದ್ದರು. ಯಾಕಿಗಾಯ್ತು ಏನಾಯ್ತು ಅಂತ ಒಬ್ಬರಿಗೂ ಗೊತ್ತಾಗದಂತೆ ಅಯ್ತು. ಹೌದು ಇಬ್ಬರ ನಡುವಿನ ಮನಸ್ತಾಪ ಏನು ಅದಕ್ಕೆ ಕಾರಣ ಅಂತ ಗೊತ್ತಾಗ್ದೇ ಅಭಿಮಾನಿಗಳಂತು ಸಖತ್ ಬೇಜಾರಾದ್ರೂ.
ಅಲ್ದೇ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಇಬ್ಬರೂ ಒಂದಾಗಲಿ ಅಂತ ಬಯಸಿದ್ದರು ಸಾಲದಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಅದೆಷ್ಟೋ ಬಾರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿ, ನೀವಿಬ್ರು ಒಂದಾಗಿ ಅಂತ ಪದೇ ಪದೇ ಕೇಳಿಕೊಳ್ಳುತ್ತಿದ್ರು ಆಗಲೂ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುವ ಬಗ್ಗೆ ಮಾತಾಡಿರಲಿಲ್ಲ. ತಮ್ಮ ಮಧ್ಯೆ ಆಗಿದ್ದೇನು ಅನ್ನೋದನ್ನು ಹೇಳಲಿಲ್ಲ.. ಆದ್ರೆ ಈಗ ದಚ್ಚು ಕಿಚ್ಚ ಒಂದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು ಇವರಿಬ್ಬರ ಅಭಿಮಾನಿಗಳು ಅಂದು ಬಹಳ ಕೆಟ್ಟ ದಿನ ಅಂತ ಹೇಳಬಹುದು. 2017ರಲ್ಲಿ ಅಂದರೆ, ಆರು ವರ್ಷಗಳ ಹಿಂದೆ ದರ್ಶನ್ ಟ್ವೀಟ್ ಮಾಡಿ, ಇನ್ಮುಂದೆ ನಾನು ಹಾಗೂ ಕಿಚ್ಚ ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಸಹ ಕಲಾವಿದರು ಅಷ್ಟೇ. ಬೇರೆ ಊಹಾ ಪೋಹಗಳು ಬೇಡ ಅಂತ ದರ್ಶನ್ ಬರೆದಿದ್ರು.
ಅಲ್ಲಿಂದ ಇಲ್ಲಿವರೆಗೂ ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದ್ರೆ ಇಬ್ಬರೂ ಮತ್ತೆ ಒಂದಾಗಬಹುದು ಅನ್ನೋ ಖುಷಿಯಲ್ಲಿ ಕಾತುರದಲ್ಲಿದ್ದ ಇಬ್ಬರ ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್ ಆಗಿದೆ. ದಚ್ಚು ಕಿಚ್ಚನ ಗೆಳೆತನ ಹೀಗೆ ಇರಲಿ ಎಂದು ರಂಗಣ್ಣ ನುಡಿದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.