ಪರಭಾಷಾ ನಟಿ ರಶ್ಮಿಕಾಗೂ ಮದುವೆ ಆಮಂತ್ರಣ ‌ಕೊಟ್ಟ ಡಾಲಿ, ದರ್ಶನ್ ಗೆ ಮಾತ್ರ ಕೊಟ್ಟಿಲ್ಲ ಯಾಕೆ

 | 
Nk
ಇನ್ನು ಕೆಲವೇ ದಿನಗಳಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ವಿವಾಹ ನೆರವೇರಲಿದೆ. ಈ ವಿವಾಹಕ್ಕೆ ಎಲ್ಲರಿಗೂ ಆಮಂತ್ರಣ ತಲುಪಿದೆ. ಈಗ ‘ಪುಷ್ಪ 2’ ತಂಡಕ್ಕೂ ಅಲ್ಲು ಅರ್ಜುನ್ ವಿವಾಹ ಆಮಂತ್ರಣ ನೀಡಿದ್ದಾರೆ. ಈ ಮೂಲಕ ಇವರೆಲ್ಲರೂ ವಿವಾಹಕ್ಕೆ ಬರುತ್ತಾರಾ ಎನ್ನುವ ಕುತೂಹಲ ಮೂಡಿದೆ.ಪುಷ್ಪ 2 ಚಿತ್ರದ ಮುಖ್ಯ ಪಿಲ್ಲರ್ ಪುಷ್ಪರಾಜ್.
 ಈ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ಅಲ್ಲು ಅರ್ಜುನ್​ಗೆ ಡಾಲಿ ಧನಂಜಯ ಅವರು ವಿವಾಹ ಆಮಂತ್ರಣ ನೀಡಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರಿಗೂ ಡಾಲಿ ಧನಂಜಯ್ ಆಮಂತ್ರಣ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ರಶ್ಮಿಕಾ ದೂರವೇ ಇದ್ದರು. ಈಗ ಸ್ಯಾಂಡಲ್​ವುಡ್ ವಿವಾಹಕ್ಕೆ ಅವರು ಆಗಮಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಪುಷ್ಪ 2 ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೂ ವಿವಾಹ ಆಮಂತ್ರಣ ತಲುಪಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ಪುಷ್ಪ 3 ಚಿತ್ರವನ್ನು ಅವರು ಮಾಡುವುದಾಗಿ ಸೂಚನೆ ಕೊಟ್ಟಿದ್ದಾರೆ.ಡಾಲಿ ಧನಂಜಯ್ ಅವರು ವಿವಾಹ ಆಗ್ತಿರೋದು ಧನ್ಯತಾ ಅವರನ್ನು. ಅವರು ವೃತ್ತಿಯಲ್ಲಿ ವೈದ್ಯೆ. ಫೆಬ್ರವರಿ 16ರಂದು ಧನಂಜಯ್ ಅವರು ಮೈಸೂರಿನಲ್ಲಿ ವಿವಾಹ ಆಗುತ್ತಿದ್ದಾರೆ.  
ಪುಷ್ಪ,ಪುಷ್ಪ 2 ಸಿನಿಮಾದಲ್ಲಿ ಡಾಲಿ ನಟಿಸಿ ಸೈ ಎನಿಸಿಕೊಂಡಿರೋದ್ರಿಂದ ತಂಡದ ಜೊತೆ ಉತ್ತಮ ಒಡನಾಟವಿದೆ. ಅದೇ ರೀತಿ ಹೈದರಾಬಾದ್‌ಗೆ ಆಗಮಿಸಿದ ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅವರುಗಳನ್ನು ಭೇಟಿಯಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.