ಆತ ನನ್ನ ಪ್ಯಾಂಟ್ ಒಳಗಡೆ ಕೈ ಹಾಕಿ ನೋವುಂಟು ಮಾಡಿದ್ದಾನೆ, ಹಳೆ‌ ನೆನಪು ಹಂಚಿಕೊಂಡ ನ ಟಿ

 | 
ಗಗಗ
ನಮ್ಮ ಮನೆಯಲ್ಲಿ ಕಾರು ಇಲ್ಲದ ಕಾರಣ ನಾನು ಸಾರ್ವಜನಿಕ ಬಸ್ಸಿನಲ್ಲಿ ಹೋಗಿದ್ದೆ. ಸಾಮಾನ್ಯವಾಗಿ ಎಂದಿನಂತೆ ಬಸ್ಸಿನಲ್ಲಿ ಹೋಗುವಾಗ ರಶ್ ಇದ್ದ ಕಾರಣ ನಾನು ನಿಂತುಕೊಂಡು ಪ್ರಯಾಣ ಮಾಡುತ್ತಿದ್ದೆನು. ಆಗ ನನ್ನ ಹಿಂಬದಿ ನಿಂತಿಕೊಂಡಿದ್ದ ವ್ಯಕ್ತಿಯೊಬ್ಬ ಸೀದಾ ನನ್ನ ಪ್ಯಾಂಟ್ ಒಳಗೆ ಕೈ ಹಾಕಿದ ಎಂದು ಭಾರತದ ಪ್ರಸಿದ್ಧ ಕಿರುತೆರೆ ನಟಿ ಗೌತಮಿ ಕಪೂರ್ ತಮಗಾದ ಕಿರುಕುಳವನ್ನು ಬಹಿರಂಗಪಡಿಸಿದ್ದಾರೆ.
ಭಾರತದ ಪ್ರಸಿದ್ಧ ಟಿವಿ ನಟಿ ಗೌತಮಿ ಕಪೂರ್ ಇತ್ತೀಚೆಗೆ ತಮ್ಮ ಬಾಲ್ಯದಲ್ಲಿ ನಡೆದ ಒಂದು ನೋವಿನ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ಅವರ ಕುಟುಂಬಕ್ಕೆ ಕಾರು ಇರಲಿಲ್ಲ, ಹಾಗಾಗಿ ಅವರು ಸಾರ್ವಜನಿಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಅವರು ತುಂಬಾ ಭಯಭೀತರಾಗಿದ್ದರು ಎಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ. ಇನ್ನು ಘಟನೆ ನಡೆದ ನಂತರ ಏನಾಗುತ್ತಿದೆ ಎಂಬ ಪರಿಜ್ಞಾನವೇ ಇಲ್ಲದೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಮಾರು ಅರ್ಧ ಗಂಟೆ ಸಮಯ ಬೇಕಾಯಿತು. 
ಆಘಾತಗೊಂಡ ಪರಿಸ್ಥಿತಿಯಲ್ಲಿ ಆ ದುಷ್ಟ ವ್ಯಕ್ತಿ ಯಾರೆಂಬುದನ್ನು ನೋಡುವುದಕ್ಕೂ ಧೈರ್ಯ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.ಗೌತಮಿ ಮುಂದುವರಿದು, 'ನಾನು ಮನೆಗೆ ಬಂದು ನನ್ನ ತಾಯಿಗೆ ಧೈರ್ಯ ಮಾಡಿ ಈ ವಿಚಾರವನ್ನು ಹೇಳಿದಾಗ ಅವರು, ನೀನು ಹುಚ್ಚಳಾ? ನೀನು ತಿರುಗಿ ಆ ವ್ಯಕ್ತಿಗೆ ಚಪ್ಪಲಿ ಹೊಡೆಯಬೇಕಿತ್ತು ಅಥವಾ ಅವನ ಕಾಲರ್ ಹಿಡಿಯಬೇಕಿತ್ತು ಎಂದು ಹೇಳಿದರು. ಅವರು ನನಗೆ ಎಂದಿಗೂ ಹೆದರಬೇಡ ಎಂದು ಹೇಳಿದರು.
 ಯಾರಾದರೂ ಎಂದಾದರೂ ಹಾಗೆ ಮಾಡಿದರೆ, ಅವರ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಜೋರಾಗಿ ಕಿರುಚಿಕೊ, ಜನರ ನಡುವೆ ಇದ್ದಾಗ ನೀನು ಎಂದಿಗೂ ಹೆದರಬೇಡ. ನಿನಗೆ ಭಯವಾಗಿದ್ದರೆ, ನಿನ್ನೊಂದಿಗೆ ಮೆಣಸಿನ ಪುಡಿ ತೆಗೆದುಕೊಂಡು ಹೋಗಿ ಅವನ ಮುಖಕ್ಕೆ ಎಸೆಯಬೇಕು. ಘಟನೆ ನಡೆದ ಸ್ಥಳದಲ್ಲಿ ನಿಮ್ಮ ಚಪ್ಪಲಿಯನ್ನು ತೆಗೆದು ಅವನಿಗೆ ಹೊಡೆಯಬೇಕು. ನಿನಗೆ ಏನೂ ಆಗುವುದಿಲ್ಲ' ಎಂದು ಹೇಳಿದರು. ಈ ಮಾತನ್ನು ಹೇಳುವ ಮೂಲಕ ತಮ್ಮ ಹೆಣ್ಣು ಮಕ್ಕಳಿಗೆ ತಾಯಿ ಬೆಂಬಲಕ್ಕೆ ನಿಂತು ಯಾವ ರೀತಿ ಧೈರ್ಯ ತುಂಬಬೇಕು ಎಂದು ಹೇಳಿಕೊಡಬೇಕು ಎಂದು ತಿಳಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub