ರಿಷಭ್ ಶೆಟ್ಟಿಗೆ ಯೋಗ್ಯತೆ ಇದೆಯಾ, ಕಾಂತಾರ ಸಿನಿಮಾಗಾಗಿ 7,8 ಸಿನಿಮಾ ಬಿಟ್ಟಿದ್ದಾನೆ, ಆದರೂ ಕೊನೆ ಕ್ಷಣ ಬಂದಿಲ್ಲ ಯಾ ಕೆ
May 18, 2025, 08:34 IST
|

ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ರಾಕೇಶ್ ಆನಂತರ ಹಲವು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿಯೂ ರಾಕೇಶ್ ನಟಿಸಿದ್ದರು. ತಮ್ಮ ಹಾಸ್ಯದಿಂದಲೇ ಕನ್ನಡಿಗರ ಮನಗೆದ್ದಿದ್ದರು. ರಾಕೇಶ್ ಪೂಜಾರಿ ಇನ್ನಿಲ್ಲ ಎಂಬ ವಿಚಾರ ಅವರ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ಕಾಂತಾರ ಸಿನಿಮಾ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ರಾಕೇಶ್ ಅವರ ಅಂತ್ಯಕ್ರಿಯೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಜೈನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ರಾಕೇಶ್ ತುಂಬಾ ಪ್ರೀತಿ ಮಾಡುತ್ತಿದ್ದ ಒಬ್ಬ ತಂಗಿ ಇದ್ದರು. ಅವರು ಬೆಂಗಳೂರಿನಲ್ಲೆ ಇರೋದು. ಅವರಿಬ್ಬರು ಜೀವಕ್ಕಿಂತ ಹೆಚ್ಚು ಒಬ್ಬನ್ನೊಬ್ಬರನ್ನು ಹಚ್ಚಿಕೊಂಡಿದ್ದರು. ಅವರೇ ರಾಕೇಶ್ ಅಂತ್ಯಕ್ರಿಯೆಗೆ ಬಂದಿಲ್ಲ. ಯಾಕೆ ಅಂದರೆ, ಅವರಿಗೆ ಸಣ್ಣ ಮಗು ಇದೆ, ಹಾಗಾಗಿ ಅಷ್ಟು ದೂರ ಜರ್ನಿ ಮಾಡೋದಕ್ಕೆ ಆಗೋದಿಲ್ಲ. ಜೊತೆಗೆ ನಂಗೆ ನೋಡೋದಕ್ಕೆ ಆಗೋದಿಲ್ಲ ಅಣ್ಣಅಂತೇಳಿದ್ದರು. ಕಾರು ವ್ಯವಸ್ಥೆ ಮಾಡುತ್ತೀನಿ ಅಂತ ಹೇಳಿದಾಗಲೂ, ಇಲ್ಲ ಅವರನ್ನು ಆ ಸ್ಥಿತಿಯಲ್ಲಿ ನನಗೆ ನೋಡೋದಕ್ಕೆ ಆಗಲ್ಲ, ನಾನು ಬರೋದಿಲ್ಲ ಅಂತಂದರು. ಅವರು ದೊಡ್ಡ ಸ್ಟಾರ್ ಆಗಿದ್ದರೆ ಇದನ್ನು ಹೇಗೆ ಬಿಂಬಿಸುತ್ತಿದ್ದರೋ ಗೊತ್ತಿಲ್ಲ ಎಂದಿದ್ದಾರೆ ಪ್ರವೀಣ್ ಜೈನ್.
ಅಂತೆಯೇ ರಿಷಬ್ ಶೆಟ್ಟಿ ಸರ್ ಅವರ ಪರಿಸ್ಥಿತಿ ಹೇಗಿತ್ತೋ? ಆ ಸಂದರ್ಭದಲ್ಲಿ ಅವರು ಎಲ್ಲಿದ್ದರೋ? ಕಾಂತಾರ ಅನ್ನೋದು ದೊಡ್ಡ ಸೆಟ್. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿರುತ್ತಾರೆ. ಸಾವಿರಗಟ್ಟಲೇ ಇನ್ವೆಸ್ಟ್ಮೆಂಟ್ ಇರುತ್ತದೆ. ಅದನ್ನು ಬಿಟ್ಟು ಹೇಗೆ ಬರೋದು ಅನ್ನೋದು ಕೂಡ ದೊಡ್ಡ ಚಾಲೆಂಜ್ ಆಗಿದ್ದಿರಬಹುದು ಅನ್ನೋದು ನನ್ನ ಯೋಚನೆ. ಕಾಂತಾರ ಸಿನಿಮಾದಲ್ಲಿ ಅವನ ಪೋರ್ಷನ್ ಮುಗಿದಿದೆಯೋ ಏನೋ ಗೊತ್ತಿಲ್ಲ. ಅವರದ್ದೇ ಆದ ಸಾವಿರ ಯೋಚನೆಗಳಿರುತ್ತದೆ. ಇಂತಹ ಸಂದರ್ಭದಲ್ಲಿ ದುಡ್ಡಿನ ವಿಷ್ಯ ನೋಡಿಕೊಂಡು ಯಾರೂ ಕೂಡ ಕೂರಲ್ಲ. ಆದರೆ ಅವರದ್ದು ಏನು ಸಮಸ್ಯೆ ಇತ್ತು? ಯಾಕೆ ಬಂದಿಲ್ಲ ಅನ್ನೋದು ಗೊತ್ತಿಲ್ಲ ಎಂದು ಪ್ರವೀಣ್ ಜೈನ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,29 Jun 2025