ಕುಚಿಕು ಗೆಳೆಯ ದರ್ಶನ್ ಅವರನ್ನು ಅಪ್ಪಿಕೊಂಡ ಕಿಚ್ಚ ಸುದೀಪ್, ಅಭಿಮಾನಿಗಳಿಗೆ ಸಂಭ್ರಮ

 | 
Hf

ಅಂತೂ ಇಂತೂ ಗೆಳೆಯನ ನೋಡಿ ಮುಗುಳ್ನಗೆ ಬೀರಿದ ದಚ್ಚು ಹೌದು ಸತತ 6 ವರ್ಷಗಳು ಆಗಿತ್ತು.. ಒಬ್ಬರ ಮುಖವನ್ನು ಒಬ್ಬರು ನೋಡಿ.. ಕುಚುಕು ಗೆಳೆಯರಂತಿದ್ದವರು ಮುನಿಸಿಕೊಂಡು ಮಾತುಬಿಟ್ಟಿದ್ದನ್ನು ಕಂಡು, ಇಡೀ ಸ್ಯಾಂಡಲ್​ವುಡ್​ ಪ್ರೇಮಿಗಳು ಆಘಾತಕೊಳ್ಳಗಾಗಿದ್ರು. ದೂರಾದ ದೋಸ್ತಿಗಳು ಆದಷ್ಟು ಬೇಗ ಒಂದಾಗಲಿ ಎಂದು ಫ್ಯಾನ್ಸ್​ಗಳು ದಿನ ಬೆಳಗಾದ್ರೆ ಸಾಕು ದೇವರಲ್ಲಿ ಬೇಡಿಕೊಳ್ತಿದ್ರು. 

ಇದೀಗ ಆ ಶುಭಘಳಿಗೆ ಹತ್ತಿರವಾದಂತೆ ಕಾಣ್ತಿದೆ.
ಸ್ಯಾಂಡಲ್​ವುಡ್​ನ ದಿಗ್ಗಜರು ಎಂದೇ ಖ್ಯಾತರಾಗಿದ್ದ ಅಂಬರೀಶ್​, ವಿಷ್ಣುವರ್ದನ್​ ಅವರ ಗೆಳೆತನ ದಂತೆಯೇ ದರ್ಶನ್​ ಮತ್ತು ಸುದೀಪ್​ ಕೂಡ ಕುಚುಕು ದೋಸ್ತಿಗಳಾಗಿದ್ರು. ಹಲವು ಬಾರಿ ಇಬ್ಬರು ಕೂಡ ಜೊತೆ ಜೊತೆಗೇ ಟ್ರಿಪ್​ ಹೋಗಿದ್ದಾರೆ. ಕ್ರಿಕೆಟ್​ ಕೂಡ ಆಡಿ ಎಂಜಾಯ್​ ಮಾಡಿದ್ದಾರೆ. ವೇದಿಕೆ ಮೇಲೆ ಕುಚಿಕು ಕುಚಿಕು ಅಂತಾ ಸ್ಟೆಪ್ಸ್​ ಹಾಕಿದ್ದಾರೆ. 

ರಿಯಲ್​ ಲೈಫ್​ನಲ್ಲೂ ಕುಚಿಕುಗಳಾಗಿದ್ದ ಇವರ ಮೇಲೆ ಅದ್ಯಾವ ಕಣ್ಣು ಬಿತ್ತೋ ಗೊತ್ತಿಲ್ಲ. ಯಾವುದೋ ಒಂದು ಕೆಟ್ಟ ಘಳಿಗೆಯೋ.. ಇಲ್ಲ ಅಪಾರ್ಥದ ಮಾತಿನಿಂದಲೋ ಗೊತ್ತಿಲ್ಲ. ಕುಚಿಕು ಗೆಳೆಯರಂತೆ ಇದ್ದವರು ಮಾತು ಬಿಟ್ಟು ದೂರ ಆಗಿದ್ದರು. ಸ್ಯಾಂಡಲ್​ವುಡ್​ನ ಯಾವುದೇ ಕಾರ್ಯಕ್ರಮಗಳಿದ್ದರೂ, ಇಬ್ಬರೂ ಒಂದೇ ಸಮಯದಲ್ಲಿ ಕಾಣಿಸಿಕೊಳ್ತಿರಲಿಲ್ಲ. ದರ್ಶನ್​ ಇದ್ದ ಕಾರ್ಯಕ್ರಮಕ್ಕೆ ಸುದೀಪ್​ ಬರ್ತಿರಲಿಲ್ಲ.. ಸುದೀಪ್​ ಇದ್ದ ಕಾರ್ಯಕ್ರಮಕ್ಕೆ ದರ್ಶನ ಕೂಡ ಹೋಗ್ತಿರಲಿಲ್ಲ. 

ನಾನೊಂದು ತೀರ. ನೀನೊಂದು ತೀರ ಎಂಬಂತೆ ನಡೆದುಕೊಳ್ತಿದ್ರು. ದಿವಂಗತ ನಟ ಅಂಬರೀಷ್​ ಪತ್ನಿ.. ಸಂಸದೆ ಸುಮಲತಾರ ಬರ್ತ್​ಡೇ ಕಾರ್ಯಕ್ರಮ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. 6 ವರ್ಷಗಳ ಬಳಿಕ ಒಂದೇ ದಚ್ಚು-ಕಿಚ್ಚ ಪ್ರತ್ಯಕ್ಷವಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ. ವೇದಿಕೆ ಮೇಲಿದ್ದ ಅಭಿನಯ ಚಕ್ರವರ್ತಿ ಸುದೀಪ್​, ಸುಮಲತಾ ಅವರಿಗೆ ವಿಷ್​ ಮಾಡಿ, ಹೋಗಿ ಬರ್ತೀನಿ ಎಂದು ಹೊರುಡುತ್ತಾರೆ. ಅದೇ ಕ್ಷಣದಲ್ಲಿ ಚಕ್ರವರ್ತಿ ಕೂಡ ವೇದಿಕೆಯತ್ತ ಬರಲು ಮುಂದಾಗಿದ್ದಾರೆ. 

ಈ ವೇಳೆ ನಟ ಸುದೀಪ್​ ಇರೋದು ದರ್ಶನ್​ ದಚ್ಚು ಗಮನಕ್ಕೆ ಬಂದಿದೆ ಅನ್ಸುತ್ತೆ. ವೇದಿಕೆಯತ್ತ ನೋಡುತ್ತ ಒಂದು ಕ್ಷಣ ಅಲ್ಲೆ ನಿಂತ ದರ್ಶನ್​ ಮುಖದಲ್ಲಿ ಸಣ್ಣದೊಂದು ಮಂದಹಾಸ ಮೂಡಿದೆ. ಈ ಅಪರೂಪ ದೃಶ್ಯವನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.