ಚಿರು ಒಪ್ಪಿದರೆ ಎರಡನೇ ಮದುವೆ ಎಂದ ಮೇಘನಾ ರಾಜ್, ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಚೆಲುವೆ

 | 
Js
ಯುವ ಸಾಮ್ರಾಟ್‌ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಕನ್ನಡ ಚಿತ್ರರಂಗದ ಕ್ಯೂಟ್‌ ಕಪಲ್‌. ಅದ್ಯಾವ ಕೆಟ್ಟ ದೃಷ್ಟಿ ಈ ಜೋಡಿಯ ಮೇಲೆ ಬಿತ್ತೋ ಚಿರಂಜೀವಿ ಸರ್ಜಾ ಪತ್ನಿ, ತುಂಬಿದ ಕುಟುಂಬ, ಅಪಾರ ಅಭಿಮಾನಿ ಬಳಗವನ್ನು ಅಗಲಿ ಇಹಲೋಕ ತ್ಯಜಿಸಿದರು. ಚಿರು ಅವರನ್ನು ಕಳೆದುಕೊಂಡ ಮೇಲೆ ಜೀವನ ಹೇಗಾಯಿತು? ಮತ್ತೆ ಕಂಬ್ಯಾಕ್‌ ಆಗಿದ್ದೇಗೆ ಎನ್ನುವುದರ ಬಗ್ಗೆ ಮೇಘನಾ ರಾಜ್‌ ಗೋಲ್ಡ್‌ ಕ್ಲಾಸ್‌ ವಿತ್‌ ಮಯೂರ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಚಿರು ಹೋಗುವಾಗ ನಾನು ನಾಲ್ಕು ತಿಂಗಳ ಗರ್ಭಿಣಿ. ನನಗೆ ಜನರ ಅನುಕಂಪ ಬೇಡ. ಅವರ ನಗು ಬೇಕು. ನನ್ನನ್ನು ನೋಡಿ ಜನ ಒಂದೊಳ್ಳೆ ನಗು ಕೊಡಬೇಕು. ಅನುಕಂಪ ಒಳ್ಳೆಯದೇ ಆದರೆ ಅದು ತುಂಬಾ ಸಮಯ ಇರುವುದಿಲ್ಲ. ಎಷ್ಟು ದಿನ ಜನ ನಿಮ್ಮ ಬಗ್ಗೆ ಅನುಕಂಪ ತೋರಿಸಬಹುದು. ಅವರಿಗೆ ಅವರೇ ಆದ ಜೀವನ ಇದೆ. ಹೀಗಾಗಿ ನನಗೆ ಯಾರ ಅನುಕಂಪವೂ ಬೇಡ. ಬದಲಿಗೆ ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ನಾನು ಒಳ್ಳೆಯದು ಮಾಡಿದರೆ ಅದನ್ನು ನೀವು ಕಲಿತುಕೊಂಡು ಮಾಡಿ ಎಂದರು.
ಆ ಸಮಯದಲ್ಲಿ ತುಂಬಾ ಜನ ಅನುಕಂಪ ತೋರಿಸಿರಬಹುದು. ಆ ಸಮಯದಲ್ಲಿ ನನ್ನನ್ನು ಹೇಗೆ ಮಾತನಾಡಿಸಬೇಕು ಎನ್ನುವುದು ಗೊತ್ತಾಗುತ್ತಿರಲಿಲ್ಲ. ರಾಯನ್‌ ನನ್ನ ಜೀವನದಲ್ಲಿ ಬರದೇ ಇದ್ದರೆ ನಾನು ಮತ್ತೆ ಮೊದಲಿನಂತೆ ಆಗುತ್ತಿರಲಿಲ್ಲ. ಈ ದುರ್ಘಟನೆ ಆದ ಮೇಲೆ ನನಗೆ ಮೊದಲು ಬಂದ ಯೋಚನೆ ಅಂದರೆ ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕು. ಅದೊಂದೇ ನನ್ನ ತಲೆಗೆ ಬಂದಿದ್ದು.
ರಾಯನ್‌ ನನ್ನ ಜೀವನದಲ್ಲಿ ಇಲ್ಲದೇ ಇದ್ದಿದ್ದರೆ ನಾನೇನು ಮಾಡುತ್ತಿದೆ ಎನ್ನುವುದನ್ನು ನಾನು ಈಗಲೂ ಯೋಚಿಸುತ್ತೇನೆ. ರಾಯನ್‌ನಿಂದ ನಾನು ಇಂದು ಖುಷಿಯಾಗಿದ್ದೇನೆ. ಜನ ಏನೇ ಅಂದರೂ ನಾನು ಖುಷಿಯಾಗಿರಬೇಕು ಎಂದು ನಿರ್ಧರಿಸಿದ್ದೇನೆ. ಮೊದಲು ನನಗೆ ನಗಲು ಭಯ ಆಗುತ್ತಿತ್ತು. 
ಈ ಘಟನೆಯಾಗಿ ಕೆಲವು ತಿಂಗಳು ಆದ ಮೇಲೆ ನನ್ನ ಸ್ನೇಹಿತರು ಮನೆಗೆ ಬಂದಾಗ ಏನೋ ಒಂದು ತಮಾಷೆಯ ಘಟನೆ ನಡೆಯಿತು. ನಾನು ಎಷ್ಟು ನಕ್ಕಿದ್ದೇನೆ ಎಂದರೆ, ಆ ರೀತಿ ನಾನು ನಗದೇ ಬಹಳ ಸಮಯವಾಗಿತ್ತು. ಚಿರು ಒಪ್ಪಿದರೆ ಮಾತ್ರ ಇನ್ನೊಂದು ಮದುವೆಯ ಮಾತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.