ರಾಕೇಶ್ ಪೂಜಾರಿಯನ್ನು ನೋಡಲು ಬಾರದ ರಿಷಭ್ ಶೆಟ್ಟಿಗೆ ಹಿಗ್ಗಾಮುಗ್ಗಾ ಬೈದ ನಯನಾ

 | 
Bs
ಕಾಮಿಡಿ ಕಿಲಾಡಿಗಳು ಶೋ ಮೂಲಕ ಫೇಮಸ್ ಆಗಿದ್ದ ನಟ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಂತಾರ: ಅಧ್ಯಾಯ 1 ಸಿನಿಮಾದಲ್ಲಿ ರಾಕೇಶ್ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆ ಸಿನಿಮಾಕ್ಕೆ ಆಯ್ಕೆಯಾದ ಸಂದರ್ಭದಲ್ಲೇ ರಾಕೇಶ್‌ಗೆ ಅಪಘಾತವಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಆ ಸಂದರ್ಭ ಹೇಗಿತ್ತು ಅನ್ನೋದನ್ನು ರಾಕೇಶ್ ಸ್ನೇಹಿತೆ, ನಟಿ ನಯನಾ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ.
ರಾಕೇಶ ಆಗ ನಮ್ಮನ್ನು ಭೇಟಿಯಾಗುವುದಕ್ಕೆ ಬರುವಾಗ ತುಂಬಾ ಕಾನ್ಫಿಡೆಂಟ್ ಆಗಿ ಬರ್ತಿದ್ದ. ಒಂದು ಗುಡ್ ನ್ಯೂಸ್ ಉಂಟು ಅಂತಿದ್ದ. ಇವನು ಏನೋ ಗುಡ್ ನ್ಯೂಸ್ ಹೇಳ್ತಾನೆ ಅಂತ ನಿರೀಕ್ಷೆಯಲ್ಲಿದ್ವಿ. ಒಮ್ಮೆ ಹೀಗೆ ಒಂದು ಕಾರ್ಯಕ್ರಮದಲ್ಲಿ ಎಲ್ಲಾ ಭೇಟಿಯಾದಾಗ, ನನಗೆ ಕಾಂತಾರ 2 ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ ಅಂತ ಹೇಳಿದ. ಅವತ್ತು ನಮಗೆ ಹೇಳಿ 4-5 ಗಂಟೆನೂ ಆಗಿರಲಿಲ್ಲ. ಅಷ್ಟರಲ್ಲಿ ಅವನಿಗೆ ಆ್ಯಕ್ಸಿಡೆಂಟ್ ಆಗಿಬಿಟ್ಟಿತ್ತು. ನಮ್ಮ ಅನೀಶ ನಮಗೆಲ್ಲಾ ಫೋನ್ ಮಾಡಿ ಮಾಹಿತಿ ನೀಡಿದ್ದ. ನಮಗೆಲ್ಲಾ ಅದು ಶಾಕ್ ಆಗಿತ್ತು ಎಂದು ನಯನಾ ಹೇಳಿಕೊಂಡಿದ್ದಾರೆ.
ನಾವೆಲ್ಲಾ ಅವನನ್ನು ನೋಡೋದಕ್ಕೆ ಆಸ್ಪತ್ರೆಗೆ ಹೋದೆವು. ಅವನ ಮುಖದಲ್ಲಿ ಫ್ರಾಕ್ಚರ್ ಆಗಿತ್ತು. ಮೇಜರ್ ಆಗಿಯೇ ಗಾಯವಾಗಿತ್ತು, ಆಪರೇಷನ್ ಆಗಬೇಕು ಅಂತ ಡಾಕ್ಟರ್ಸ್ ಕೂಡ ಹೇಳಿದ್ದರು. ಮೂರು ತಿಂಗಳು ಅವನು ಊಟನೇ ಮಾಡಿರಲಿಲ್ಲ. ಬರೀ ಲಿಕ್ವಿಡ್ ಸೇವಿಸ್ತಾ ಇದ್ದ. ಆದರೂ ಅವನ ಕಾನ್ಫಿಡೆನ್ಸ್ ಕಮ್ಮಿ ಆಗಿರಲಿಲ್ಲ. ಅವನಿಗೆ ಬಾಯಿ ತೆಗೆಯಲು ಆಗ್ತಾ ಇರಲಿಲ್ಲ. ಅದರಲ್ಲೇ ನಾನು ಬೇಗ ರೆಡಿ ಆಗ್ತಿನಿ ಅಂತಿದ್ದ. ನಾನು ಆರಾಮಾಗಿದ್ದೀನಿ, ಭಯ ಏನಿಲ್ಲ ಅಂತಿದ್ದ. ಇಷ್ಟು ಕೆಟ್ಟ ಪರಿಸ್ಥಿತಿಯಲ್ಲೂ ಇವನ ಮೇಲೆ ಇವನಿಗೆ ಇಷ್ಟೊಂದು ನಂಬಿಕೆ ಇದೆಯಲ್ಲ ಅಂತ ನನಗೆ ಅನ್ನಿಸೋದು ಎಂದು ನಯನಾ ಹೇಳಿದ್ದಾರೆ.
ಇದೆಲ್ಲಾ ಆದಮೇಲೆ ಸಿನಿಮಾಗೆ ಏನೋ ಮಾಡ್ತಿಯಾ, ಈ ರೀತಿ ಆಗಿಬಿಟ್ಟಿದೆ ನಿಂಗೆ ಅಂತ ನಾನೇ ಕೇಳಿದ್ದೆ. ಆಗ ಅವನು ಹೇಳಿದ್ದ, ಕಾಂತಾರದ್ದು ಸೆಟ್‌ದು ಏನೋ ಪ್ರಾಬ್ಲಂ ಆಗಿದೆ. ಗಾಳಿ ಮಳೆಗೆ ಸಿಕ್ಕಿ ಅಲ್ಲೋಲ ಕಲ್ಲೋಲ ಆಗಿದೆ. ಅಬ್ಬಾ, ಸದ್ಯ ಅವರು ಸೆಟ್‌ ರೆಡಿ ಮಾಡೋದ್ರಲ್ಲಿ ನಾನು ಬೇಗ ಗುಣ ಆಗಬಹುದು ಅಂತಿದ್ದ. ಆ ಟೈಮ್‌ಗೆ ಒಂದಷ್ಟು ನೆಗೆಟಿವ್ ವಿಚಾರಗಳು ಕೇಳಿಬರುತ್ತಿದ್ದವು. ಇದರ ಬಗ್ಗೆ ನಾವು ರಾಕಿ ಬಳಿ ಚರ್ಚೆ ಕೂಡ ಮಾಡಿದ್ವಿ. ಅದಕ್ಕವನು, ಅಜ್ಜ ಅಂದರೆ ಕೊರಗಜ್ಜ ಇದ್ದಾನೆ, ಅವನು ನೋಡಿಕೊಳ್ತಾನೆ, ನಮ್ಮನ್ನು ಕಾಯ್ತಾನೆ ಬಿಡು ಅನ್ನೋ ಕಾನ್ಫಿಡೆನ್ಸ್ ಇತ್ತು ಎಂದು ನಯನಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.