ಡ್ರೋನ್ ಪ್ರತಾಪ್ ನಾಯಕತ್ವಕ್ಕೆ ಕುಣಿದು ಕುಪ್ಪಳಿಸಿದ ಬಿಗ್ ಬಾಸ್ ಸ್ಪರ್ಧಿಗಳು

ಬಿಗ್ಬಾಸ್ ಕನ್ನಡ ಸೀಸನ್ 10ರ ಡ್ರೋನ್ ಪ್ರತಾಪ್ ಮನೆಮಂದಿಗೆ ಚಳ್ಳೆಹಣ್ಣು ತಿನಿಸಿರುವ ರೀತಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಡ್ರೋನ್ ಪ್ರತಾಪ್ ಬುದ್ಧಿವಂತಿಕೆ ನೋಡಿ ಬಿಗ್ಬಾಸ್ ಮನೆಮಂದಿ ಫುಲ್ ಶಾಕ್. ಡ್ರೋನ್ ಪ್ರತಾಪ್ ನಾವು ಊಹಿಸಿದಂತೆ ಅಲ್ವೇ ಅಲ್ಲ ಎಂಬುವುದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಪ್ರತಾಪ್.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಈಗ ಐದನೇ ವಾರ ಕಾಲಿಟ್ಟಿದೆ. ಬಿಗ್ಬಾಸ್ ಶುರುವಾದ ದಿನದಿಂದ ಮನೆಯ ಎಲ್ಲ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಆಚೆ ಬರುತ್ತಿದೆ. ಬಿಗ್ಬಾಸ್ ಕೊಟ್ಟ ಟಾಸ್ಕ್ ಅನ್ನು ಮನೆಯ ಮಂದಿ ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ನಿನ್ನೆ ಸಹ ಬಿಗ್ಬಾಸ್ ಮನೆಯಲ್ಲಿ ಎರಡು ತಂಡಗಳು ನಿರ್ಮಾಣಗೊಂಡಿದ್ದವು. ಅದರಂತೆ ಒಂದು ತಂಡದ ನಾಯಕ ಡ್ರೋನ್ ಪ್ರತಾಪ್.
ಇನ್ನೊಂದು ತಂಡದ ನಾಯಕಿ ಸಿರಿ. ಡ್ರೋನ್ ಪ್ರತಾಪ್ ತಂಡದ ಹೆಸರು ಗಂಧದ ಗುಡಿ. ಸಿರಿ ತಂಡದ ಹೆಸರು ವಜ್ರಕಾಯ. ಹೀಗೆ ಬಿಗ್ಬಾಸ್ ಮನೆಯಲ್ಲಿ ಎರಡು ತಂಡಗಳು ಬಿಗ್ಬಾಸ್ ಕೊಟ್ಟ ಟಾಸ್ಕ್ ಆಡಲು ಎಲ್ಲ ರೀತಿಯಲ್ಲಿ ಪ್ಲಾನ್ ಮಾಡಿಕೊಂಡಿದ್ದರು. ಬಿಗ್ಬಾಸ್ ಕೊಟ್ಟ ಎರಡು ಟಾಸ್ಕ್ಗಳನ್ನು ಡ್ರೋನ್ ಪ್ರತಾಪ್ ತಂಡ ಗೆದ್ದು ಬೀಗಿದೆ. ಅದರಲ್ಲೂ ಪ್ರತಾಪ್ ತಂಡ ಗೆದ್ದಿದ್ದಕ್ಕೆ ನಟಿ ಭಾಗ್ಯಶ್ರೀ ಅವರು ಈ ವಾರದ ನಾಮಿನೇಷನ್ನಿಂದ ಪಾರಾಗಿದ್ದಾರೆ.
ಹೌದು ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಲು ಭಾಗ್ಯಶ್ರೀ ಸೇರಿದಂತೆ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಇದೀಗ ನಾಮಿನೇಷನ್ನಿಂದ ಭಾಗ್ಯಶ್ರೀ ಹಾಗೂ ಸಂಗೀತಾ ಅವರು ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಕೊಟ್ಟ ಎರಡು ಟಾಸ್ಕ್ಗಳನ್ನು ಗೆದ್ದ ಡ್ರೋನ್ ಪ್ರತಾಪ್ ಅವರಿಗೆ ಬಿಗ್ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿದರು.
ನಿಮ್ಮ ತಂಡದಿಂದ ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ನಾಮಿನೇಷನ್ನಿಂದ ಸೇಫ್ ಮಾಡಬಹುದು. ನಿರ್ಧಾರ ನಿಮ್ಮದೇ ಆಗಿರಬೇಕು. ಯಾರೊಂದಿಗೂ ಚರ್ಚಿಸುವಂತಿಲ್ಲ ಎಂದಿದ್ದರು. ಅದರಂತೆ ಯಾರ ಬಳಿಯೂ ಚರ್ಚೆ ಮಾಡದೇ ಡ್ರೋನ್ ಪ್ರತಾಪ್ ಭಾಗ್ಯಶ್ರೀ ಹಾಗೂ ಸಂಗೀತಾ ಅವರನ್ನು
ನಾಮಿನೇಷನ್ನಿಂದ ಸೇಫ್ ಮಾಡಿದ್ದಾರೆ.
ಗಂಧದ ಗುಡಿ ತಂಡದ ನಾಯಕನಾಗಿದ್ದ ಡ್ರೋನ್ ಪ್ರತಾಪ್ ಅವರು ಭಾಗ್ಯಶ್ರೀ ಹಾಗೂ ಸಂಗೀತಾ ಅವರ ಹೆಸರನ್ನು ಹೇಳುತ್ತಿದ್ದಂತೆ ಮನೆಯ ಮಂದಿ ಫುಲ್ ಶಾಕ್ ಆಗಿದ್ದರು. ಬಳಿಕ ನಾಮಿನೇಷನ್ನಿಂದ ಸೇಫ್ ಮಾಡಿದ್ದಕ್ಕೆ ಭಾಗ್ಯಶ್ರೀ ಹಾಗೂ ಸಂಗೀತಾ ಪ್ರತಾಪ್ಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಮನೆ ಮಂದಿ ಎಲ್ಲ ಪ್ರತಾಪ್ ಆಟಕ್ಕೆ ನಾಯಕತ್ವಕ್ಕೆ ಫಿದಾ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.