ಹೀನಾಯ ಸೋಲಿನಿಂದ ಕಂಗಾಲಾದ ನಿಖಿಲ್ ಮಾಡಿದ್ದೇನು ಗೊತ್ತಾ, ಬರೋಬ್ಬರಿ ಎರಡು ಬಾರಿ ಸೋಲು

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಒಂದು ಕಾಲದಲ್ಲಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದ ಪಕ್ಷ ಅಂದರೆ ಅದು ಜೆಡಿಎಸ್. ಹೌದು, ಜೆಡಿಎಸ್ ಪಕ್ಷ ಒಂದು ಕಾಲದಲ್ಲಿ ಬಾರಿ ಸುದ್ದಿಯಲ್ಲಿದ್ದ ಪಕ್ಷ, ಮಾಜಿ ಪ್ರಧಾನಿ ದೇವೇಗೌಡರ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ರೈತರ ಸಾಲ ಮನ್ನ ವಿಚಾರದಲ್ಲಿ ಜೆಡಿಎಸ್ ಪಕ್ಷ ದೊಡ್ಡ ಸಾಧನೆಯೇ ಮಾಡಿತ್ತು.
ಆದರೆ, ದೇವೇಗೌಡರ ನಂತರದಲ್ಲಿ ಕುಮಾರಸ್ವಾಮಿ ಅವರು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಜೆಡಿಎಸ್ ಪಕ್ಷದ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರು. ಕುಮಾರಸ್ವಾಮಿ ಅವರ ಅಭಿವೃದ್ಧಿ ಕಂಡಂತಹ ಪ್ರಜೆಗಳು ಸಾಕಷ್ಟು ಅಭಿಮಾನವನ್ನು ಇಟ್ಟುಕೊಂಡಿದ್ದರು. ಕುಮಾರಸ್ವಾಮಿ ಎಂಬ ಹೆಸರು ಬಳಸದೆ, ಕುಮಾರಣ್ಣ ಎಂದು ಪ್ರೀತಿಯಿಂದ ಕರೆಯಲಾರಂಭಿಸಿದರು.
ಕುಮಾರಸ್ವಾಮಿ ಅವರ ಅಭಿವೃದ್ಧಿಗೆ ಇಡೀ ರಾಜ್ಯವೇ ಹೆಮ್ಮೆಯಿಂದ ಮೆಚ್ಚುಗೆ ಪಡುತ್ತಿತ್ತು. ಆದರೆ ಕುಮಾರಣ್ಣನ ಬಳಿಕ ನಿಖಿಲ್ ಕುಮಾರಸ್ವಾಮಿ ಬಂದ ನಂತರ ಜೆಡಿಎಸ್ ಭವಿಷ್ಯ ಸಂಪೂರ್ಣ ಉಲ್ಟಾ ಪಲ್ಟಾವಾಯಿತು. ಹೌದು, ಕುಮಾರಸ್ವಾಮಿಗೆ ಸಿಕ್ಕ ಜಯ ನಿಖಿಲ್ ಕುಮಾರಸ್ವಾಮಿಗೆ ಸಿಕ್ಕಿಲ್ಲ. ಇದಕ್ಕೆ ಮೂಲ ಕಾರಣ ಮಂಡ್ಯ ಕ್ಷೇತ್ರದ ಸ್ಟ್ರಾಂಗ್ ಅಭ್ಯರ್ಥಿ ಸುಮಲತಾ.
ಹೌದು, ನಿಖಿಲ್ ವಿರುದ್ಧ ಸುಮಲತಾ ಅವರು ಭರ್ಜರಿ ಬಹುಮತದ ಮೂಲಕ ಗೆದ್ದು ನಿಂತಿದ್ದರು. ಇದಾದ ಬಳಿಕ ನಿಖಿಲ್ ಕುಮಾರಸ್ವಾಮಿಗೆ ಎರಡನೇ ಬಾರಿಯೂ ಸೋಲಿನ ಮುಖಭಂಗವಾಯಿತು. ಇದೀಗ ನಿಖಿಲ್ ಕುಮಾರಸ್ವಾಮಿ ಅವರ ಭವಿಷ್ಯದ ಬಗ್ಗೆ ದೇವೇಗೌಡರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದು ತೀರಾ ಕುತೂಹಲದ ಪ್ರಶ್ನೆಯಾಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ