ನನಗೆ 20 ನಿಮಿಷ ಪ್ರಜ್ಞೆ ಇರಲಿಲ್ಲ, ಆಗ ಆಕೆ ಏನು ಮಾಡಿದ್ಲು ಅಂತ ಗೊತ್ತಾಗಿಲ್ಲ; ನಟ ದಿಗಂತ್

 | 
ರರಹ
ಸ್ಯಾಂಡಲ್‌ವುಡ್‌ನ ದೂದ್‌ ಪೇಡ ಅಂತಲೇ ಗುರುತಿಸಿಕೊಂಡಿರುವ ನಟ ದಿಗಂತ್‌ ಅವರಿಗೆ ಒಳ್ಳೊಳ್ಳೆಯ ಸಿನಿಮಾಗಳ ಅವಕಾಶವಿತ್ತು.ಕನ್ನಡ ಚಿತ್ರತಂಗದ ಹ್ಯಾಂಡ್ಸಮ್‌ ಹೀರೋಗಳ ಪಟ್ಟಿಯಲ್ಲಿ ನಟ ದಿಗಂತ್‌ ಕೂಡ ಒಬ್ಬರು. ದಿಗಂತ್‌ ಅವರಿಗೆ ಹೆಚ್ಚು ಸಿನಿಮಾಗಳ ಆಫರ್‌ ಕೂಡ ಇತ್ತು. ಹೀಗೆ ಬಾಲಿವುಡ್‌ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದೇ ಸಿನಿಮಾದ ಶೂಟಿಂಗ್‌ ವೇಳೆ ಒಂದು ದುರಂತ ಸಂಭವಿಸಿದ ಕಾರಣ ಅವರ ಕಣ್ಣಿಗೆ ಏಟಾಗಿತ್ತು. ಅಷ್ಟಕ್ಕೂ ಇದು ಹೇಗಾಯ್ತು ಅನ್ನೋದನ್ನು ದಿಗಂತ್‌ ಹೇಳಿಕೊಂಡಿದ್ದಾರೆ.
ಟಿಕೆಟ್‌ ಟು ಬಾಲಿವುಡ್‌ ಅಂತ ಒಂದು ಸಿನಿಮಾ ಮಾಡಿದೆ. ಆ ಸಿನಿಮಾದಿಂದಲೇ ನನ್ನ ಕಣ್ಣಿಗೆ ಏಟಾಗಿದ್ದು. ಅವತ್ತು ಪ್ಯಾಕ್‌ಅಪ್‌ ಎಲ್ಲವೂ ಆಗಿದೆ, ಅಲ್ಲಿಂದ ನಾವು ಬೇರೆ ಲೊಕೇಶನ್‌ನ ಹೋಟೆಲ್‌ಗೆ ಬಂದೆವು. ಹೀಗೆ ಡೈರೆಕ್ಟರ್‌ ನಮ್ಮ ರೂಮ್‌ ಪಾಸ್‌ ಆಗುತ್ತಿದ್ದಂತೆ, ಒಂದು ಸೀನ್‌ ಇದೆ ಇಲ್ಲಿಯೇ ಮಾಡಿ ಬಿಡೋಣ ಅಂದರು. ಸರಿ ಒಂದು ಚಿಕ್ಕ ಸೀನ್‌ ಅಲ್ವಾ ಮಾಡಿ ಬಿಡೋಣ ಅಂತ ಮತ್ತೆ ಎಲ್ಲಾ ಕ್ಯಾಮೆರಾಗಳನ್ನು ತರಿಸಿದ್ದರು. ನಾನು ನನ್ನ ಕೋ ಸ್ಟಾರ್‌ ಇಬ್ಬರು ಒಂದೇ ರೂಮಿನಲ್ಲಿ ಇರ್ತೀವಿ, ಒಂದೇ ಸ್ಯೂಟ್‌ಕೇಸ್‌ನಲ್ಲಿ ನಮ್ಮ ಬಟ್ಟೆ ಇರುತ್ತದೆ. ನಮ್ಮಿಬ್ಬರ ಮಧ್ಯೆ ಏನೋ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಗಿರುತ್ತದೆ. ಹಾಗಾಗಿ ಅವಳು ಬಟ್ಟೆಗಳನ್ನೆಲ್ಲಾ ಬಿಸಾಕಿ ರೂಮ್‌ ಡೋರ್‌ ಅನ್ನು ಹಾಕಬೇಕು, ನಾನು ಅಲ್ಲಿಂದ ಹೊರಡಬೇಕು, ಅಷ್ಟೇ ಇದ್ದಿದ್ದು ಸೀನ್” ಎಂದರು ನಟ ದಿಗಂತ್
ಹೀರೋಹಿನ್‌ದೇ ಸೀನ್‌ ಇದ್ದಿದ್ದು. ಆಗ ಅವರಿಗೆ ಎಮೋಷನ್ಸ್‌ ಕರೆಕ್ಟ್‌ ಆಗಿ ಬರ್ತಿಲ್ಲ, 18 ರಿಂದ 20 ಟೇಕ್‌ ಆಗೋಯ್ತು. ಸ್ಯೂಟ್‌ಕೇಸ್‌ನಲ್ಲಿದ್ದ ಬಟ್ಟೆಗಳನ್ನೆಲ್ಲಾ ಬಿಸಾಕಿ, ನನಗೆ ಜಾಸ್ತಿ ಕೋಪ ಬರ್ಲಿ ಅಂತ ಏನನ್ನೋ ಎಸೆದು ಬಿಟ್ಟಳು. ಅದು ನೋಡಿದ್ರೆ ಅವರ ಹೈ ಹೀಲ್ಸ್‌, ಸೀದಾ ಬಂದು ಕಣ್ಣಿಗೆ ಹೊಡೀತು. ಸೀನ್‌ನಲ್ಲಿಯೂ ಆ ರೀತಿ ವಸ್ತುವನ್ನು ಬಿಸಾಕಬೇಕು ಅಂತ ಇರಲಿಲ್ಲ, ಬರೀ ಬಟ್ಟೆ ಬಿಸಾಕಬೇಕು ಅಂತ ಇತ್ತು. ಅವಳು ಅದನ್ನು ಗೊತ್ತಿದ್ದು ಮಾಡಿದ್ಲೋ ಅಥವಾ ಗೊತ್ತಿಲ್ಲದೇ ಮಾಡಿದ್ಲೋ ನನಗೆ ಗೊತ್ತಿಲ್ಲ. ಅದು ನನ್ನ ಕಣ್ಣಿಗೆ ಬಿದ್ದ ತಕ್ಷಣ 15 ನಿಮಿಷ ಪ್ರಜ್ಞೆ ಇರಲಿಲ್ಲ ಎಂದಿದ್ದಾರೆ ದಿಗಂತ್.
ಆಮೇಲೆ ನೋಡಿದರೆ ಕಣ್ಣು ಕಟ್‌ ಆಗಿಬಿಟ್ಟಿದೆ. ನೀವು ನಿಮ್ಮ ಕಣ್ಣನ್ನು ಕಳೆದುಕೊಂಡ್ರಿ ಅಂತ ಲಂಡನ್‌ನಲ್ಲಿ ಡಾಕ್ಟರ್‌ ಹೇಳಿದ್ದರು. ಅದೇ ನನ್ನ ಜೀವನದ ದೊಡ್ಡ ಶಾಕ್. ಆಗಿದ್ದು ಆಯ್ತು ಇನ್ನೇನು ಮಾಡೋದಕ್ಕೆ ಆಗಲ್ಲ ಅಂತ ನಾನು ಡಿಸೈಡ್‌ ಆದೆ. ಇದರಿಂದ ನನಗೆ ಮುಂದಕ್ಕೆ ಅವಕಾಶಗಳು ಸಿಕ್ಕಿಲ್ಲ ಅಂತಂದರೆ ಏನು ಮಾಡೋದು ಅಂತೆಲ್ಲಾ ಯೋಚನೆಗಳು ಬರೋದಕ್ಕೆ ಶುರುವಾಗಿತ್ತು. ನಾನು ಲಕ್ಕಿ ಅದಾದ ಮೇಲೆಯೂ ನನಗೆ ಅವಕಾಶಗಳು ಸಿಕ್ಕಿತು. 
ಆ ನಟಿ ನನ್ನನ್ನು ನೋಡೋದಕ್ಕೆ ಒಂದು ಬಾರಿಯೂ ಹಾಸ್ಪಿಟಲ್‌ಗೆ ಬಂದಿಲ್ಲ. ಸಾರಿ ಹೀಗಾಯ್ತು ಅಂತ ಒಂದು ಮೆಸೇಜ್‌ ಬಂತು ಬಿಟ್ರೆ ಇನ್ನೇನು ಇಲ್ಲ” ಎಂದು ಇತ್ತೀಚೆಗೆ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಿಗಂತ್‌ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.