FactCheck:ರೀ ನಾನು ಕಿಚ್ಚ ಸುದೀಪ್ ‌ಅಭಿಮಾನಿ, ಜೈಲಿಂದ ಬಂದ ಬಳಿಕ ವಿನಯ್ ಮಾತಿನಲ್ಲಿ ಬದಲಾವಣೆ

 | 
ರಪಪುು
ಬಿಗ್‌ ಬಾಸ್‌ ವಿನಯ್‌ ಗೌಡ ಮತ್ತು ರಜತ್‌ ಕಿಶನ್‌ ಮಚ್ಚು ಹಿಡ್ಕೊಂಡು ಮಾಡಿದ್ದ ಹದಿನೆಂಟು ಸೆಕೆಂಡ್‌ ರೀಲ್‌ನಿಂದಾಗಿ ಇಬ್ಬರು ಜೈಲಿಗೆ ಹೋಗುವ ಹಾಗಾಯ್ತು. ಸದ್ಯ ಜಾಮೀನಿನ ಮೇಲೆ ಇಬ್ಬರಿಗೂ ರಿಲೀಫ್‌ ಸಿಕ್ಕಿದ್ದು, ವಿನಯ್‌ ಗೌಡ ಜೈಲಿನಿಂದ ಹೊರ ಬರುತ್ತಿದ್ದಂತೆ ಎಲ್ಲರಲ್ಲೂ ಕ್ಷಮೆಯಾಚಿಸಿದ್ದಾರೆ. ಜೈಲಿಗೆ ಹೋದ ಸಂದರ್ಭದಲ್ಲಿ ಮತ್ತು ಸ್ಟೈಲಾಗಿ ಆಪಲ್‌ ತಿನ್ನುತ್ತಾ ಪರಪ್ಪನ ಅಗ್ರಹಾರದಿಂದ ಹೊರ ಬರುತ್ತಿದ್ದುದ್ದನ್ನು ಗಮನಿಸಿದ ಹಲವರು ವಿನಯ್‌ ಅವರಿಗೆ ಡಿ ಗ್ಯಾಂಗ್‌ ಪಟ್ಟ ಕಟ್ಟಿದ್ದರು. ಈ ಬಗ್ಗೆ ಇದೀಗ ವಿನಯ್‌ ಗೌಡ ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರ ಕೇಸ್‌ ಅನ್ನು ಎಸಿಪಿ ಚಂದನ್‌ ಅವರು ಹ್ಯಾಂಡಲ್‌ ಮಾಡಿ, ಅವರನ್ನು ಅರೆಸ್ಟ್‌ ಮಾಡಿದ್ದರು. ಈ ಕಡೆ ವಿನಯ್‌ ಮತ್ತು ರಜತ್‌ ಮಚ್ಚು ರೀಲ್ಸ್‌ ಪ್ರಕರಣದಲ್ಲಿಯೂ ಎಸಿಪಿ ಚಂದನ್‌ ಅವರೇ ತನಿಖೆಯನ್ನು ಮಾಡಿ ಇಬ್ಬರನ್ನು ಅರೆಸ್ಟ್‌ ಮಾಡಿದ್ದರು. ಹೀಗಾಗಿ ವಿನಯ್‌ ಡಿ ಗ್ಯಾಂಗ್ ಅನ್ನೋ ಪಟ್ಟ ಕಟ್ಟಲಾಗಿತ್ತು. ಈ ಬಗ್ಗೆ ಮಾತನಾಡಿ, ಇಲ್ಲಿ ಡಿ ಗ್ಯಾಂಗ್‌ ವಿಷ್ಯನೇ ಬರೋದಿಲ್ಲ. ಇದು ನನ್ನ ವೃತ್ತಿ, ಬೆಳಗ್ಗೆ ಎದ್ದರೆ ನಾನು ಕೆಲಸಕ್ಕೆ ಹೋಗ್ತೀನಿ. ಯಾವ ಗ್ಯಾಂಗ್‌ ಕೆಲಸಕ್ಕೂ ನಾನು ಹೋಗೋದಿಲ್ಲ. ನಾನು ನನ್ನ ಕುಟುಂಬಕ್ಕಾಗಿ ದುಡಿತಿದ್ದೀನಿ, ಗ್ಯಾಂಗ್‌ಗೋಸ್ಕರ ಅಲ್ಲ, ನನ್ನ ಹೆಂಡತಿ ಮತ್ತು ಮಗನಿಗೋಸ್ಕರ. ಅದು ಗ್ಯಾಂಗ್‌ ಅಂತ ಮಾಡೋದು ತಪ್ಪಾಗುತ್ತೆ ಎಂದಿದ್ದಾರೆ ವಿನಯ್‌ ಗೌಡ.
https://www.youtube.com/live/0V-PGz4ZsT0?si=oh9GtktfDEHoa-Tc
ನಾನು ಒಬ್ಬ ಉದ್ಯೋಗಿ. ಮಿಲನ ಪ್ರಕಾಶ್‌ ಸರ್‌ ನಂಗೆ ತುಂಬಾ ಹಳೆಯ ಪರಿಚಯ. ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೀನಿ. ಅವರಿಗೆ ನನ್ನ ಆಕ್ಟಿಂಗ್‌ ಗೊತ್ತು, ನನ್ನ ಸ್ವಭಾವ ಗೊತ್ತು. ಆ ಕಾರಣಕ್ಕೆ ಡೆವಿಲ್‌ ಸಿನಿಮಾಗೆ ಅವರು ವಿಲನ್‌ ಆಗಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ವಿಲನ್‌ ಆಗಿರೋದ್ರಿಂದ ಈ ಕೇಸ್‌ಗೆ ಸಂಬಂಧ ಪಟ್ಟಂಗೆ ಒಂದಷ್ಟು ಕನೆಕ್ಷನ್ಸ್‌ ಇರುವುದರಿಂದ, ಡಿ ಗ್ಯಾಂಗ್‌ ಅಂತ ಫ್ರೇಮ್‌ ಮಾಡಿದ್ದಾರೆ. ಈ ಗ್ಯಾಂಗ್‌ ಇದೆಲ್ಲಾ ಏನು ನಡೆಯುವುದಿಲ್ಲ ಇವಾಗ. ಕಾನೂನು ಎಲ್ಲರಿಗೂ ಒಂದೇ. ನಾನು ಗ್ಯಾಂಗ್‌ ಮಾಡಿಕೊಂಡು ಹೋಗ್ತೀನಿ ನಾನು ರೌಡಿಸಂ ಮಾಡ್ತೀನಿ ಅಂತಂದರೆ ಇಲ್ಲಿ ಏನೂ ನಡೆಯಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ವಿನಯ್‌ ಗೌಡ ಮಾತನಾಡಿದ್ದಾರೆ.
ಇನ್ನು ನಮ್ಮ ಇಂಡಸ್ಟ್ರೀಯಲ್ಲಿ, ನನಗೆ ಸಖತ್‌ ಸಪೋರ್ಟಿವ್‌ ಆಗಿರೋದು ಸುದೀಪ್‌ ಸರ್.‌ ಪ್ರತೀ ಬಾರಿಯೂ ನನಗೆ ಒಂದು ಚೂರು ಪ್ರಾಬ್ಲಮ್‌ ಆದ್ರೂ, ಅಥವಾ ನನಗೆ ಏನಾದರೂ ಪ್ರಶ್ನೆ ಇದ್ದರೂ ನಾನು ಮೊದಲು ಕೇಳುವುದು ಸುದೀಪ್‌ ಸರ್‌ಗೆ. ನಾನು ಅವರಿಂದ ಹಲವಾರು ಸಲಹೆಗಳನ್ನು ತೆಗೆದುಕೊಳ್ಳುತ್ತೇನೆ. ಡೆವಿಲ್‌ʼ ಪ್ರಾಜೆಕ್ಟ್‌ ಬಂದಾಗ ನಾನು ಸುದೀಪ್‌ ಸರ್‌ ಜೊತೆ ಮಾತನಾಡಿದಾಗ, ತುಂಬಾ ಒಳ್ಳೆಯ ಅವಕಾಶ, ಚೆನ್ನಾಗಿ ಅಭಿನಯ ಮಾಡು. ನಿನ್ನ ಕೆಲಸ ನೀನು ಮಾಡು ಬೇರೆ ಕನೆಕ್ಷನ್‌ ಬಗ್ಗೆ ಚಿಂತೆ ಮಾಡಬೇಡ ಅಂತ ಸಲಹೆ ನೀಡಿದ್ದರು. 
ಈ ಪ್ರಕರಣದಲ್ಲೂ ನನ್ನ ಫ್ಯಾಮಿಲಿಗೆ ಸುದೀಪ್‌ ಸರ್‌ ಸಪೋರ್ಟ್‌ ಆಗಿ ನಿಂತಿದ್ದಾರೆ. ನಾನು ಮುಂಚೆಯೂ ಹೇಳಿದ್ದೀನಿ, ಸುದೀಪ್‌ ಸರ್‌ ನನಗೆ ಅಣ್ಣನಂತೆ, ಗಾಡ್‌ ಫಾದರ್.‌ ನನ್ನ ಪ್ರತಿ ಹೆಜ್ಜೆಗೂ ನನಗೆ ಸಹಾಯ ಮಾಡೋದು ಸುದೀಪ್‌ ಸರ್.‌ ಆ ಗ್ಯಾಂಗ್‌ ಈ ಗ್ಯಾಂಗ್‌ ಅಂತೇನಿಲ್ಲ ಎಂದಿದ್ದಾರೆ ವಿನಯ್‌ ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.