ಡಿವೋರ್ಸ್ ಗೆ ಮತ್ತೊಂದು ಕಾರಣ ಕೊಟ್ಟ ಚಂದನ್, ಇದುವರೆಗೆ ಮೊದಲ ರಾತ್ರಿ ಶಾಸ್ತ್ರವೇ ನಡೆದಿಲ್ಲ

 | 
Jd
ಇತ್ತೀಚಿಗಷ್ಟೇ ಈ ಜೋಡಿ ದೂರವಾಗಿದ್ದು ಸೂತ್ರಧಾರಿ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಗಾಯಕ ಚಂದನ್‌ ಶೆಟ್ಟಿ ಅವರು ಪುನಃ ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ನಟಿ ಸಂಜನಾ ಆನಂದ್‌ ಜೊತೆಗೆ ಮದುವೆಯಾಗುತ್ತಿರುವ ವಿಷಯ ಶುದ್ಧ ಸುಳ್ಳು ಎಂದು ಒತ್ತಿ ಒತ್ತಿ ಹೇಳಿರುವ ಇವರು, ಡಿವೋರ್ಸ್‌ಗೆ ಕಾರಣ ಬೇರೆ ಇದೆ ಎಂದಿದ್ದಾರೆ. ಆರಂಭದಲ್ಲಿ ಸುದ್ದಿಗೋಷ್ಠಿ ಕರೆದು, ನನ್ನ ಹಾಗೂ ನಿವೇದಿತಾ ಗೌಡ ಮಧ್ಯೆ ಹೊಂದಾಣಿಕೆ ಸಮಸ್ಯೆ ಇದೆ, ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಹತ್ತಿರ ಇದ್ದೂ ಖುಷಿಯಾಗಿಲ್ಲ ಅಂದ್ಮೇಲೆ ದೂರ ಇದ್ದು ಖುಷಿಯಾಗಿರೋದು ಒಳ್ಳೆಯದು ಎಂದು ಈ ಜೋಡಿ ಹೇಳಿಕೆ ನೀಡಿತ್ತು. 
ಈಗ ಚಂದನ್‌ ಶೆಟ್ಟಿ ಮಾತನಾಡಿ, ನಾನು, ನಿವೇದಿತಾ ಗೌಡ ಅವರು ಡಿವೋರ್ಸ್‌ ತಗೊಳ್ಳುವಾಗ ಸಾಕಷ್ಟು ಬಾರಿ ಯೋಚನೆ ಮಾಡಿದ್ದೇವೆ. ವೈಯಕ್ತಿಕ ವಿಷಯಗಳನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ. ಏನೂ ಗೊತ್ತಿಲ್ಲದೆ ಕೆಲವರು ಆ ಕಾರಣ, ಈ ಕಾರಣ ಅಂತ ಹೇಳಬಹುದು. ಆದರೆ ನಮ್ಮ ವಿಷಯಗಳನ್ನು ನಾನಾಗಲೀ, ನಿವೇದಿತಾ ಆಗಲೀ ಹೇಳಿಕೊಳ್ಳೋದಿಲ್ಲ. ನಮ್ಮ ಡಿವೋರ್ಸ್‌ಗೆ ನಿಜವಾದ ಕಾರಣ ಏನು ಎನ್ನೋದು ನಮ್ಮ ಮಧ್ಯೆಯೇ ಉಳಿದಿರುತ್ತದೆ. ನನಗೆ ನನ್ನ ಖುಷಿ ಮುಖ್ಯ ಆಗಿತ್ತು, ಡಿವೋರ್ಸ್‌ ತಗೊಂಡೆವು, ಈಗ ಇಬ್ಬರೂ ಖುಷಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಆ ನಂತರದಲ್ಲಿ ಹೊರಗಡೆ ಬಂದ ಬಳಿಕ ಈ ಜೋಡಿ ಇನ್ನಷ್ಟು ಹತ್ತಿರ ಆಗಿತ್ತು. ಆಮೇಲೆ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರುವ ವಿಷಯವನ್ನು ಅರಿತುಕೊಂಡು, ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಮೈಸೂರು ದಸರಾದಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡಗೆ ಉಂಗುರ ಹಾಕಿ ಪ್ರೇಮ ನಿವೇದನೆ ಮಾಡಿದರು.
ಇದಂತೂ ದೊಡ್ಡ ವಿವಾದ ಸೃಷ್ಟಿಮಾಡಿತ್ತು. ಅದಾದ ನಂತರದಲ್ಲಿ ಮೈಸೂರಿನಲ್ಲಿ ಈ ಜೋಡಿ ಮದುವೆಯಾಯ್ತು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಪರಸ್ಪರ ಒಪ್ಪಿ ಡಿವೋರ್ಸ್‌ ಪಡೆದಿದೆ.ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ಮುದ್ದು ರಾಕ್ಷಸಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಈ ಜೋಡಿ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿತ್ತು. ವೃತ್ತಿ ವಿಚಾರದಲ್ಲಿ ಇಬ್ಬರು ವೃತ್ತಿಪರತೆ ಕಾಯ್ದುಕೊಳ್ಳೋದಾಗಿ ಹೇಳಿಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.