ಬಿಗ್ ಬಾಸ್ ಕೊಟ್ಟ ಪೂರ್ತಿ 50 ಲಕ್ಷ ನನಿಗೆ ಬೇಕು, ಟ್ಯಾಕ್ಸ್ ಕಟ್ಟೋಕೆ ಹನುಮಂತ ಹಿಂದೇಟು

 | 
ಕಕ
ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಗಾಯಕ ಹನುಮಂತ ಲಮಾಣಿ ವಿಜೇತರಾಗಿದ್ದಾರೆ. ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಹನುಮಂತ ಗೆದ್ದಿದ್ದಾರೆ. ಹನುಮಂತನ ಗೆಲುವು ಇಡೀ ಕನ್ನಡಿಗರ ಗೆಲುವು ಎನ್ನುವಂತೆ ಸಂಭ್ರಮಾಚರಣೆ ಜೋರಾಗಿದೆ. ಹೋದಲ್ಲಿ ಬಂದಲ್ಲಿ ಹನುಮಂತನಿಗೆ ಶುಭ ಕೋರುವ ಜನ ಅವರನ್ನು ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ತುಂಬಾ ಹನುಮಂತನ ಗೆಲುವಿನ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಇದರ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹನುಮಂತನಿಗೆ ಶುಭ ಕೋರುವ ಜೊತೆಗೆ ಟ್ಯಾಕ್ಸ್ ಕಟ್ಟಲು ತಿಳಿಸಿದ್ದಾರೆ. ಈ ವಿಚಾರ ತಿಳಿದು ತುಂಬಾ ಖುಷಿ ಪಡಬೇಡಿ. ಯಾಕೆಂದರೆ ಇಲ್ಲಿ ನಿಜವಾಗಲೂ ಹನುಮಂತನಿಗೆ ನಿರ್ಮಲಾ ಸೀತಾರಾಮನ್ ಅವರು ಟ್ಯಾಕ್ಸ್‌ ಕಟ್ಟಲು ತಿಳಿಸಿಲ್ಲ.
ಬದಲಿಗೆ ಜನ ಈ ರೀತಿ ಪೋಸ್ಟ್ ಹಂಚಿಕೊಂಡು ಕಾಮಿಡಿಯಾಗಿ ಟ್ರೋಲ್ ಮಾಡಿದ್ದಾರೆ.ಹೌದು... ಹನುಮಂತನಿಗೆ ಗೆದ್ದ ಹಣ ಎಲ್ಲವೂ ಕೂಡ ಕೈಗೆ ಸಿಗುವುದಿಲ್ಲ. ಅದರಲ್ಲಿ ಹೆಚ್ಚಾನುಹೆಚ್ಚು ಹಣ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಜನ ಹನುಮಂತ ಹಾಗೂ ನಿರ್ಮಲಾ ಸೀತಾರಾಮನ್ ಪೋಟೋ ಹಾಕಿ ಟ್ಯಾಕ್ಸ್‌ ಕಟ್ಟು ಹನುಮಂತ ಎಂದು ಬರೆದು ಟ್ರೋಲ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹನುಮಂತ ಗೆದ್ದ 50 ಲಕ್ಷ ರೂಪಾಯಿ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹೀಗಾಗಿ ಹನುಮಂತನ ಕೈಗೆ ಅಷ್ಟು ಹಣ ಸಿಗುವುದಿಲ್ಲ. 50 ಲಕ್ಷ ರೂಪಾಯಿ ಗೆದ್ದ ಅಂದ ಮಾತ್ರಕ್ಕೆ 50 ಲಕ್ಷ ರೂಪಾಯಿ ಹಣ ಪೂರ್ತಿ ಹನುಮಂತನಿಗೆ ಸಿಗುವುದಿಲ್ಲ. ಇದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹನುಮಂತ 50 ಲಕ್ಷ ರೂಪಾಯಿ ಹಣ ಗೆದ್ದ ಮನೆಗೆ ತೆಗೆದುಕೊಂಡು ಹೋದ ಅಂತಲೇ ಭಾವಿಸಿದ್ದಾರೆ. ಆದರೆ ವಾಸ್ತವ ಹನುಮಂತ ಗೆದ್ದ ಹಣದಲ್ಲಿ ಶೇಕಡ 30ರಷ್ಟು ಹಣವನ್ನು ಟ್ಯಾಕ್ಸ್ ಕಟ್ಟಬೇಕು. ಹಾಗಾಗಿ ಜನ ಕಾಮಿಡಿಯಾಗಿ ಪೋಸ್ಟ್ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.