ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಕಲಾವಿದ ಕೊನೆಯುಸಿರು, ಕಣ್ಣೀರಿಟ್ಟ ಕರುನಾಡು

 | 
Bx

ಜೂನಿಯರ್ ರಾಜ್‌ಕುಮಾರ್ ಎಂದೇ ಖ್ಯಾತರಾಗಿದ್ದವರು. ಅವರು ರಂಗಭೂಮಿಯ ಕಲಾವಿದರೂ ಕೂಡ ಆಗಿದ್ದವರು. ಪಾಪಾ ಪಾಂಡು ಸೀರಿಯಲ್ ಮೂಲಕ ಹಲವರ ಮನಗೆದ್ದ ಒಳ್ಳೆಯ ಹಾಸ್ಯನಟರಾದ್ದ ಕೊಡಗನೂರು ಜಯಕುಮಾರ್ ಅವರು ಹೃದಯಾಘಾತದಿಂದ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹತ್ತನೇ ವಯಸ್ಸಿಗೇ ಬಣ್ಣ ಹಚ್ಚಿದ್ದ ಅವರು, 6 ದಶಕಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಗುಬ್ಬಿವೀರಣ್ಣ ನಾಟಕ ಕಂಪನಿ, ಚಿತ್ರದುರ್ಗದ ಕುಮಾರಸ್ವಾಮಿ ಕಂಪನಿ, ಸುಳ್ಳದ ದೇಸಾಯಿ ಅವರ ಕಂಪನಿ, ಚಿಂದೋಡಿ ಕಂಪನಿ ಹೀಗೆ ವೃತ್ತಿ ರಂಗಭೂಮಿಯ ಅನೇಕ ಕಂಪನಿಗಳ ನಾಟಕಗಳಲ್ಲಿ ಅಭಿನಯಿಸಿದ್ದರು.

ಪೌರಾಣಿಕ ಪಾತ್ರಗಳಲ್ಲಿ ಛಾಪು ಮೂಡಿಸಿದ್ದರು. ಎಚ್ಚೆಮನಾಯಕ, ಮದಕರಿ ನಾಯಕ, ಟಿಪ್ಪುಸುಲ್ತಾನ್ ಮುಂತಾದ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.
ಅವರು ಜನುಮದ ಜೋಡಿ ಸೇರಿದಂತೆ 50ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ, ನಾಲ್ಕೈದು ತೆಲುಗು ಚಿತ್ರಗಳಲ್ಲಿ, 50ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದರು. ವಿಷ್ಣುವರ್ಧನ್, ಅಂಬರೀಷ್ ಅವರಂಥ ಮೇರು ನಟರ ಜತೆಗೂ ಅಭಿನಯಿಸಿದ್ದರು. ಬರಗೂರು ನಿರ್ದೇಶನದ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಜಯಕುಮಾರ್ ಅವರು ನೋಡಲು ಡಾ. ರಾಜ್‌ಕುಮಾರ್ ಅವರಂತೆಯೇ ಕಾಣುತ್ತಿದ್ದುದರಿಂದ, ಉತ್ತಮವಾಗಿ ಅಭಿನಯಿಸುತ್ತಿದ್ದುದರಿಂದ ಅವರನ್ನು ಜೂನಿಯರ್ ರಾಜ್‌ಕುಮಾರ್ ಎಂದು ಕರೆಯಲಾಗುತ್ತಿತ್ತು. ಪೊಲೀಸನ ಮಗಳು ನಾಟಕದಲ್ಲಿ ಜಯಕುಮಾರ್ ಅಭಿನಯಿಸಿದ ಪೊಲೀಸ್ ಅಧಿಕಾರಿಯ ಪಾತ್ರವನ್ನು ಡಾ. ರಾಜ್‌ಕುಮಾರ್ ಮೆಚ್ಚಿಕೊಂಡು, ಅವರನ್ನು ಮನೆಗೆ ಕರೆದು ಆತಿಥ್ಯ ನೀಡಿ, ಚಿನ್ನದ ಸರವನ್ನು ಕಾಣಿಕೆಯಾಗಿ ನೀಡಿದ್ದರು.

ಕೊಡಗನೂರು ಜಯಕುಮಾರ್ ಅವರಿಗೆ ಕೆಲ ವರ್ಷಗಳ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಇಂತಹ ಕಲಾವಿದರು ಇನ್ನಿಲ್ಲವಾಗಿರುವುದು ಚಿತ್ರರಂಗಕ್ಕೆ ಇನ್ನಿಲ್ಲದ ನಷ್ಟವಾಗಿದೆ. ಇನ್ನು ಇವರ ನಿಧನಕ್ಕೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.