ಯಾರಿಗೂ ತಿಳಿಯದಂತೆ ದೂರದಿಂದ ದರ್ಶನ್ ಅವರನ್ನೇ ನೊಡುತ್ತ ನಿಂತಿದ್ದ ಕಿಚ್ಚ ಸುದೀಪ್ ಹಾಗೂ ಪತ್ನಿ

 | 
ರಹ

ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಂಡಲ್​ವುಡ್​ನ ಬಿಗ್​ ಸ್ಟಾರ್ಸ್​ ಬಗ್ಗೆ ಸದ್ಯ ಗುಸುಗುಸು ಕೇಳಿ ಬರುತ್ತಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಈ ಇಬ್ಬರು ಮತ್ತೆ ಒಂದಾದ್ರೆ ದೊಡ್ಡ ಕಿಚ್ಚಿನ ಕ್ರಾಂತಿನೇ ಆಗಿ ಬಿಡುತ್ತೆ. ಆ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಹವಾ ಇದೆ. 

ಈ ಎರಡು ಶಕ್ತಿಗಳು ಒಂದಾಗಬೇಕು ಎನ್ನುವುದು ಕೋಟಿ, ಕೋಟಿ ಹೃದಯಗಳ ಬಡಿತವಾಗಿದೆ. ಆ ಕಾಲ ತೀರ ಸನಿಹಕ್ಕೆ ಬಂದಿದೆ. ಏಕೆಂದರೆ ಕೆಲವು ವರ್ಷಗಳ ನಂತರ ಬಿಗ್​ ಸ್ಟಾರ್ಸ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಉತ್ಸಾಹ ದುಪ್ಪಟ್ಟುಗೊಳಿಸಿದೆ.

ಕುಚುಕು ಗೆಳೆಯರಾದ ಡಿ-ಬಾಸ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬೇರೆ ಸ್ಯಾಂಡಲ್​ವುಡ್​ನ ನಟಿ, ಸಂಸದೆಯಾದ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ. ಈ ಹುಟ್ಟುಹಬ್ಬ ಸದ್ಯ ರಾಜ್ಯಕ್ಕೆ ಬೇರೆಯದ್ದೇ ಮೆಸೇಜ್ ಕೊಟ್ಟಂತಾಗಿದೆ. 6 ವರ್ಷದಿಂದ ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಇದ್ದ ಕುಚುಕು ಗೆಳೆಯರ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 

ಈ ನಿರೀಕ್ಷೆಯನ್ನು ಆದಷ್ಟು ಬೇಗ ಯಶಸ್ಸು ಕಾಣುತ್ತೆ ಎನ್ನುವುದು ಸಮಾರಂಭದಲ್ಲಿನ ಈ ದಿಗ್ಗಜರ ನಸು ನಗುವೇ ಹೇಳುತ್ತದೆ. ಬಿಗ್ ಡೈ ಹಾರ್ಡ್​ ಫ್ಯಾನ್ಸ್​ ಫಾಲೋಯಿಂಗ್ ಅನ್ನು ಕಿಚ್ಚ-ದಚ್ಚು​ ಹೊಂದಿದ್ದಾರೆ. ಅದು ಹೇಗೆಂದರೆ​ ಸಿನಿಮಾ ಕಾರ್ಯಕ್ರಮ, ಱಲಿ ಇಂತದೇನಾದರೂ ಮಾಡಿದರೆ ಸಾಕು ಲಕ್ಷಾಂತರ ಅಭಿಮಾನಿಗಳು ಸೇರುತ್ತಿರುತ್ತಾರೆ. ಅದೇ ಈಗ ಈ ಇಬ್ಬರು ಒಂದಾಗಿ ಒಟ್ಟಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೇ ಅಷ್ಟೇ ಕೋಟಿ, ಕೋಟಿ ಅಭಿಮಾನಿಗಳಿಂದ ದೀಪಾವಳಿನೇ ಗ್ಯಾರಂಟಿ. 

ಇನ್ನು ಸುಮಲತಾ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ದರ್ಶನ್ ಸುದೀಪ್ ನೋಡಿ ಮುಗುಳ್ನಗೆ ಬೀರಿದರೆ ಕಿಚ್ಚ ಸುದೀಪ್ ಕೂಡ ನಗೆ ಬೀರಿರಿರುವುದು ಮಾತ್ರವಲ್ಲ ದರ್ಶನ್ ನೋಡುತ್ತಾ ನಿಂತಿದ್ದಾರೆ.
ಒಟ್ಟಿನಲ್ಲಿ ಇದೀಗ ಇಬ್ಬರು ನಟರ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮೂಡಿದ್ದು ಆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೆ ದರ್ಶನ್​-ಸುದೀಪ್​ ಗ್ರೀನ್​ ಸಿಗ್ನಲ್​ ಕೊಡಬೇಕು. ಅದಕ್ಕೆ ಕಾಲ ಸನೀಹವಾಗಿದ್ದು ಸದ್ಯದಲ್ಲೇ ಇಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.